ಬೆಂಗಳೂರು: ಡಾ. ಚಿದಾನಂದ ಮೂರ್ತಿ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದು, ರಾಜ್ಯದ ಉಪಮುಖ್ಯಮಂತ್ರಿ ಡಾ.ಸಿ ಎನ್ ಅವರು ಗೌರವಪೂರ್ಣ ಸಲ್ಲಿಸಿದ್ದಾರೆ. ಹೆಸರಾಂತ , ಇತಿಹಾಸತಜ್ಞ, ಸಂಶೋಧನಾಕಾರ, ಕನ್ನಡ ಪರ ಹೋರಾಟಗಾರ ಡಾ.ಎಂ. ಚಿದಾನಂದಮೂರ್ತಿ ಅವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಕನ್ನಡ ನಾಡು, ನೆಲ, ಜಲ ಭಾಷೆ ಸಂಸ್ಕೃತಿಯ ರಕ್ಷಣೆಗೆ ಸದಾ ತುಡಿಯುತ್ತಿದ್ದ ಜೀವ ಇನ್ನಿಲ್ಲ ಎಂಬ ವಿಷಯ ಅರಗಿಸಿಕೊಳ್ಳುವುದೇ ಕಷ್ಟ ಎಂದು ಶೋಕ ವ್ಯಕ್ತಪಡಿಸಿದ್ದಾರೆ. ಕನ್ನಡ ಶಕ್ತಿ ಕೇಂದ್ರದ ಶಕ್ತಿ ಆಗಿದ್ದ ಅವರು 'ಚಿಮೂ' ಎಂದೇ ಖ್ಯಾತರಾಗಿದ್ದರು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ದೊರೆಯಲು ಪ್ರಮುಖಪಾತ್ರ ವಹಿಸಿದ್ದ ಅವರು ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಮೆಚ್ಚಿನ 'ಮೇಷ್ಟ್ರು'. ಕನ್ನಡಕ್ಕಾಗಿ, ಕನ್ನಡದ ಸಮಸ್ಯೆಗಳ ಪರಿಹಾರಕ್ಕೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಕನ್ನಡ ಬಳಗ ಕಟ್ಟಿದ್ದರು. ಕನ್ನಡ ಮಾಧ್ಯಮ, ಕನ್ನಡಿಗರಿಗೆ ಉದ್ಯೋಗ, ನೆಲ ಜಲ ಹಕ್ಕುಗಳ ಹೋರಾಟದಲ್ಲಿ ಅವರದ್ದೇ ಮುಂದಾಳತ್ವ. ಗೋಕಾಕ್ ಚಳವಳಿಯಲ್ಲಿ ಅವರ ಪಾತ್ರ ಮರೆಯುವಂತಿಲ್ಲ. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಸೇರಿದಂತೆ ನಲವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳು, ನೂರಾರು ಸಂಶೋಧನಾ ಲೇಖನಗಳನ್ನು ಬರೆದಿರುವ ಚಿದಾನಂದಮೂರ್ತಿ ನಿಜಕ್ಕೂ ಕನ್ನಡಮೂರ್ತಿಯೇ ಆಗಿದ್ದರು. ಹಂಪಿಯಲ್ಲಿ ಕನ್ನಡ ವಿವಿ ಸ್ಥಾಪನೆಗೆ ಕಾರಣಕರ್ತರಾಗಿದ್ದ ಡಾ.ಚಿಮೂ ಅವರ ಕನ್ನಡ ಪ್ರೀತಿ ಬಗ್ಗೆ ಏನು ಹೇಳಿದರೂ ಕಡಿಮೆಯೆ. ಕನ್ನಡ ನೆಲ, ಜಲ, ಭಾಷೆಯ ಹೋರಾಟದಲ್ಲಿ ಕನ್ನಡಿಗರ ನಿರುತ್ಸಾಹದಿಂದ ಬೇಸತ್ತು ನನ್ನ ಮರಣದಿಂದಲಾದರೂ ಜನ ಪ್ರೇರಣೆಗೊಳ್ಳುವಂತಾಗಲಿ ಎಂದು ಆಶಿಸುತ್ತಾ ಹಂಪಿಯ ತುಂಗಭದ್ರೆಯಲ್ಲಿ ಜಲಪ್ರವೇಶ ಮಾಡಿ ಪ್ರಾಣತ್ಯಾಗಕ್ಕೂ ಸಿದ್ಧರಾಗಿದ್ದರು. ತಮ್ಮನ್ನು ಕನ್ನಡದ ಗರುಡ ಎಂದು ಭಾವಿಸಿಕೊಂಡಿದ್ದ ಅವರು ನಾಡಿನ ನೆಲ, ಜಲ, ಭಾಷೆಯ ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದು ಚಿದಾನಂದ ಮೂರ್ತಿ ಅವರ ಕನ್ನಡ ಬಗೆಗಿನ ಪ್ರೀತಿ ಮತ್ತು ಹೋರಾಟಗಳನ್ನು ಸ್ಮರಿಸಿದ್ದಾರೆ. ಪ್ರಶಸ್ತಿ ಮೂಲಕ ತಮಗೆ ಬಂದ ಹಣವನ್ನು ತಾವು ಹುಟ್ಟಿ ಬೆಳೆದ ಊರ ಶಾಲೆ, ಕನ್ನಡ ಶಾಲೆಗಳ ಅಭಿವೃದ್ಧಿಗೆ ಬಳಸುತ್ತಿದ್ದ ಕನ್ನಡದ ಶ್ರೇಷ್ಠ ಪರಿಚಾರಿಕನ ಕನ್ನಡ ಸೇವೆಗೆ ನಾವೆಲ್ಲರೂ ಚಿರಋಣಿಗಳಾಗಿರೋಣ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬ, ಶಿಷ್ಯ ವರ್ಗ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.
from India & World News in Kannada | VK Polls https://ift.tt/35GUfxc