ಹೊಸದಿಲ್ಲಿ: ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ಭಾಗದಲ್ಲಿ ಪಾಕಿಸ್ತಾನ ತಂಟೆ ಮಾಡಿದರೆ ಸುಮ್ಮನೆ ಇರುವುದಿಲ್ಲ. ಮೇಲೆ ದಾಳಿ ನಡೆಸಿ ಎಂದು ಸರಕಾರ ಆದೇಶಿಸಿದರೆ ಒಂದು ಕ್ಷಣವೂ ವ್ಯಯಿಸದೆ ಸನ್ನದ್ಧರಾಗುತ್ತೇವೆ ಎಂದು ಸೇನಾ ವರಿಷ್ಠ ಜನರಲ್ ಮನೋಜನ್ ಮುಕುಂದ್ ನರಾವಣೆ ಎಚ್ಚರಿಸಿದ್ದಾರೆ. ಹೊಸದಿಲ್ಲಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮನೋಜ್ ಮುಕುಂದ್ ನರಾವಣೆ ಮಾತನಾಡಿದರು. ಸೇರಿದಂತೆ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರದ ಕೆಲವು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ನಾವು ಸಜ್ಜಾಗಿದ್ದೇವೆ. ಈ ಕುರಿತು ಸಂಸತ್ತಿನಲ್ಲಿ ನಿರ್ಣಯವಾಗಬೇಕು. ಸಂಸತ್ ಬಯಸಿದರೆ ಭಾರತಕ್ಕೆ ಸೇರಬೇಕು. ಇದನ್ನು ಸಾಧಿಸುತ್ತೇವೆ ಎಂದು ಹೇಳಿದರು. ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದರೆ ಸಾಕು ಪಿಒಕೆ ಮೇಲೆ ದಾಳಿ ಮಾಡಲು ನಾವು ಒಕೆ ಎನ್ನುತ್ತೇವೆ ಎಂದು ಸ್ಪಷ್ಟಪಡಿಸಿದರು. ಮೂರು ರಕ್ಷಣಾ ಪಡೆಗಳಿಗೆ ಒಬ್ಬರೇ ಮುಖ್ಯಸ್ಥರನ್ನು ನೇಮಿಸಿದ್ದು ಬಹು ದೊಡ್ಡ ನಿರ್ಣಯವಾಗಿದೆ. ಇದು ಭಾರತೀಯ ಸೇನೆಯನ್ನು ಮತ್ತೊಂದು ಯಶಸ್ಸಿನತ್ತ ಕೊಂಡೊಯ್ಯುವ ನಿರೀಕ್ಷೆ ಎಂದು ನರಾವಣೆ ವಿಶ್ವಾಸ ವ್ಯಕ್ತಪಡಿಸಿದರು. ಗಡಿಭಾಗದಲ್ಲಿ ಸದಾ ಯುದ್ಧ ಸನ್ನದ್ಧತೆಯಲ್ಲಿದ್ದೇವೆ. ಯಾವುದೇ ಪರಿಸ್ಥಿತ ಬಂದರೂ ಎದುರಿಸಲು ಸಜ್ಜಾಗಿರುತ್ತೇವೆ. ಇದಕ್ಕೆ ಮೂರು ಪಡೆಗಳ ನಡುವೆ ಸಮನ್ವಯ, ಸಂಯೋಜಿತ ಯೋಜನೆಯೂ ಹಾಕಿಕೊಳ್ಳಲಾಗಿದೆ ಎಂದು ಸೇನಾ ವರಿಷ್ಠ ಮನೋಜ್ ಮುಕುಂದ್ ನರಾವಣೆ ತಿಳಿಸಿದರು.
from India & World News in Kannada | VK Polls https://ift.tt/35K0zE7