ಭಾರತೀಯ ಕ್ರಿಕೆಟ್‌ನ 'ತಡೆಗೋಡೆ' ಖ್ಯಾತಿಯ ಕರ್ನಾಟಕದ ಹೆಮ್ಮೆಯ ರಾಹುಲ್ ದ್ರಾವಿಡ್‌ಗೆ ಹುಟ್ಟುಹಬ್ಬದ ಸಂಭ್ರಮ!

ಹೊಸದಿಲ್ಲಿ: ಭಾರತ ಕ್ರಿಕೆಟ್‌ನ ತಡಗೋಡೆ ಖ್ಯಾತಿಯ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ 47ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 10000 ಹೆಚ್ಚು ರನ್‌ಗಳ ದಾಖಲೆ ಬರೆದಿರುವ ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 48 ಶತಕಗಳನ್ನು ಸಿಡಿಸಿದ್ದಾರೆ. ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ದ್ರಾವಿಡ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದಾಳಿಯನ್ನು ಎದುರಿಸಿದ ಖ್ಯಾತಿಗೂ ಪಾತ್ರವಾಗಿದ್ದಾರೆ. ಕೇವಲ ಮೈದಾನದಲ್ಲಷ್ಟೇ ಅಲ್ಲದೆ ಮೈದಾನದ ಹೊರಗೂ ಸರಳ ವ್ಯಕ್ತಿತ್ವದಿಂದ ರಾಹುಲ್ ದ್ರಾವಿಡ್ ಗುರುತಿಸಿದ್ದಾರೆ. ಇದೇ ಕಾರಣಕ್ಕಾಗಿ ವಿಶ್ವದೆಲ್ಲೆಡೆ ಅಪಾರ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದಾರೆ. ವಿಶ್ವದ ಎಂತಹ ಕಠಿಣ ಪಿಚ್ ಆದರೂ ಅಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಹೀಗೆ ವಿಶ್ವ ದಿಗ್ಗಜರೇ ವೈಫಲಗೊಂಡರೂ ಅಂತಹ ಪಿಚ್‌ಗಳಲ್ಲಿ ನೆಲೆಯೂರಿ ನಿಲ್ಲುವ ಮೂಲಕ ದ್ರಾವಿಡ್, ಟೀಮ್ ಇಂಡಿಯಾ ಪಾಲಿಗೆ ಆಪತ್ಬಾಂಧವ ಎನಿಸಿದ್ದಾರೆ. ಇದೇ ಕಾರಣಕ್ಕಾಗಿ 'ದಿ ವಾಲ್' ಎಂಬ ಮನ್ನಣೆಗೆ ಪಾತ್ರವಾಗಿದ್ದಾರೆ. ಕ್ರಿಕೆಟ್ ಬಳಿಕವೂ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸುವ ಮೂಲಕ ರಾಹುಲ್ ದ್ರಾವಿಡ್ ಗಮನ ಸೆಳೆದಿದ್ದಾರೆ. ಮನಸ್ಸು ಮಾಡಿದರೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕೋಟಿಗಟ್ಟಲೆ ದುಡ್ಡು ಹಾಗೂ ಖ್ಯಾತಿಯನ್ನು ಸಂಪಾದನೆ ಮಾಡಬಹುದಿತ್ತು. ಆದರೆ ಮುಂದಿನ ಪೀಳಿಗೆಯ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡುವ ಮೂಲಕ ದೇಶದ ಕ್ರೀಡಾಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭಾರತೀಯ ಕಿರಿಯ ಹಾಗೂ ಎ ತಂಡದ ಕೋಚ್ ಆಗಿ/t ಕಾರ್ಯ ನಿರ್ವಹಿಸಿರುವ ದ್ರಾವಿಡ್, ಭಾರತೀಯ ಕ್ರಿಕೆಟಿಗರಿಗೆ ಅನೇಕ ಯುವ ಪ್ರತಿಭೆಗಳನ್ನು ಗುರುತಿಸುವಲ್ಲಿ ನೆರವಾಗಿದ್ದಾರೆ. ದ್ರಾವಿಡ್ ಗರಡಿಯಲ್ಲಿ ಪಳಗಿದವರ ಪೈಕಿ ಮಯಾಂಕ್ ಅಗ್ರವಾಲ್, ಪೃಥ್ವಿ ಶಾ, ಹನುಮ ವಿಹಾರಿ, ಸಂಜು ಸ್ಯಾಮ್ಸನ್, ಶುಭಮನ್ ಗಿಲ್ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಕೇವಲ ಕಿರಿಯ ಕ್ರಿಕೆಟಿಗರಷ್ಟೇ ಅಲ್ಲದೆ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಭಾರತೀಯ ಕ್ರಿಕೆಟಿಗರಿಗೂ ಮನೋಬಲ ತುಂಬುವ ಮೂಲಕ ಫಾರ್ಮ್‌ಗೆ ಮರಳಲು ನೆರವಾಗಿದ್ದಾರೆ. ಅಜಿಂಕ್ಯ ರಹಾನೆ, ಕೆಎಲ್ ರಾಹುಲ್ ಸದಾ ದ್ರಾವಿಡ್ ಮಾರ್ಗದರ್ಶನವನ್ನು ಸದಾ ನೆನಪಿಸಿಕೊಳ್ಳುತ್ತಾರೆ. ರಾಹುಲ್ ದ್ರಾವಿಡ್‌ ಕೊಡುಗೆಯನ್ನು ಸ್ಮರಿಸಿ ಶುಭಾಶಯಗಳನ್ನು ತಿಳಿಸಿದ ಪ್ರಮುಖರು:ಐಸಿಸಿ ಬಿಸಿಸಿಐ ಸಚಿನ್ ತೆಂಡೂಲ್ಕರ್ ವೀರೇಂದ್ರ ಸೆಹ್ವಾಗ್ ವಿವಿಎಸ್ ಲಕ್ಷ್ಮಣ್ ಅಜಿಂಕ್ಯ ರಹಾನೆ ಮೊಹಮ್ಮದ್ ಕೈಫ್ ಹರ್ಭಜನ್ ಸಿಂಗ್ ವೃದ್ದಿಮಾನ್ ಸಹಾ ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ದ್ರಾವಿಡ್ ಅಭಿಮಾನಿ ಬ್ಯಾಟಿಂಗ್ ದಿಗ್ಗಜ ದೇವರು ಕೂಡಾ ಗೋಡೆಯ ಹಿಂದಿರುತ್ತಾರೆ. ರಾಹುಲ್ ದ್ರಾವಿಡ್ ಸ್ಮರಣೀಯ ಸಾಧನೆಗಳು ದ್ರಾವಿಡ್‌ಗೆ ಶುಭ ಹಾರೈಸಿದ ಕಿಚ್ಚ ಸುದೀಪ್


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Nh3hdQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...