ಗುವಾಹಟಿ: ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಇಲ್ಲಿನ ಬರ್ಸಾಪಾರ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಟಿ20 ಸರಣಿಯ ಮೊದಲ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ ಪರಿಣಾಮ ಒಂದೂ ಎಸೆತ ಕಾಣದೆ ರದ್ದಾಯಿತು. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ರದ್ದಾದ ಪರಿಣಾಮ ಇಂದೋರ್ (ಜನವರಿ 7) ಹಾಗೂ ಪುಣೆ(ಜ.10)ಯಲ್ಲಿನಡೆಯಲಿರುವ ದ್ವಿತೀಯ ಮತ್ತು ತೃತೀಯ ಪಂದ್ಯಗಳು ಮಹತ್ವ ಪಡೆದುಕೊಂಡಿವೆ. ನಿಗದಿತ ಸಮಯ ಸಂಜೆ 6.30ಕ್ಕೆ ನಡೆದ ಟಾಸ್ನಲ್ಲಿ ವಿರಾಟ್ ಕೊಹ್ಲಿ ವಿಜಯಿಯಾಗಿ ಫೀಲ್ಡಿಂಗ್ ಆಯ್ದುಕೊಂಡರು. ಆದರೆ, ಪಂದ್ಯಕ್ಕೆ ಮಳೆ ನಿರಂತರ ಅಡಚಣೆ ಉಂಟುಮಾಡಿತು. ರಾತ್ರಿ 9.54ರ ವರೆಗೂ ಕನಿಷ್ಠ 5 ಓವರ್ಗಳ ಪಂದ್ಯ ನಡೆಯಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ 9.55ಕ್ಕೆ ಪಂದ್ಯವನ್ನು ಅಧಿಕೃತವಾಗಿ ರದ್ದುಪಡಿಸಲಾಯಿತು. ಹೀಗಾಗಿ ಸಂಜೆಯಿಂದ ಕಾದು ಕುಳಿತಿದ್ದ ಸಾವಿರಾರು ಅಭಿಮಾನಿಗಳು ನಿರಾಸೆಯಿಂದಲೇ ಮನೆಯತ್ತ ಹೆಜ್ಜೆ ಹಾಕಿದರು. ಇದಕ್ಕೂ ಮುನ್ನ 8.15, 9 ಮತ್ತು 9.30ಕ್ಕೆ ಮೂರು ಬಾರಿ ಆನ್ಫೀಲ್ಡ್ ಅಂಪೈರ್ಗಳು ಪಿಚ್ ಪರಿಶೀಲಿಸಿದರು. ಇನ್ನೇನು ಪಂದ್ಯ ಶುರುವಾಗಲಿದೆ ಎನ್ನುವಷ್ಟರಲ್ಲಿ ಮಳೆರಾಯ ಪಂದ್ಯಕ್ಕೆ ಅಡ್ಡಿಪಡಿಸಿತು. ಮೈದಾನ ಸಿಬ್ಬಂದಿಗಳು ಸೂಕ್ತ ರೀತಿಯ ತಯಾರಿಯನ್ನು ನಡೆಸಿರಲಿಲ್ಲ. ಅಸಮರ್ಪಕ ಕೆಲಸದಿಂದಾಗಿ ಭಾರತ ಹಾಗೂ ಶ್ರೀಲಂಕಾ ನಡುವಣ ಪಂದ್ಯ ಒಂದು ಎಸೆತವನ್ನು ಕಾಣದೇ ರದ್ದಾಗಿದೆ. ಹೊಸ ವರ್ಷದ ಮೊದಲ ಪಂದ್ಯ ವೀಕ್ಷಿಸಲು ಬಂದಿದ್ದ ಸಾವಿರಾರು ಅಭಿಮಾನಿಗಳಿಗೂ ನಿರಾಸೆ ಕಾದಿತ್ತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಾಗಲಿ ಅಥವಾ ಅಸ್ಸಾಂ ಕ್ರಿಕೆಟ್ ಸಂಸ್ಥೆಯಾಗಲೀ ಮಳೆ ಬಂದಾಗ ಆದಷ್ಟು ಬೇಗನೇ ಪಿಚ್ ರೆಡಿ ಮಾಡಲು ಆಧುನಿಕ ಸೌಲಭ್ಯಗಳನ್ನು ಹೊಂದದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಅಂಥ ಕುಂಭದ್ರೋಣ ಮಳೆಯಂತೂ ಸುರಿಯಲಿಲ್ಲ. ಮಳೆ ನಿಂತು ಒಂದು ತಾಸು ಕಳೆದರೂ ಪಿಚ್ ಸಿದ್ಧಪಡಿಸಲು ಸಾಧ್ಯವಾಗಲಿಲ್ಲ. ಪ್ಲಾಸ್ಟಿಕ್ ಹೋದಿಕೆ ಹಾಕಿದರೂ ಪಿಚ್ ರಕ್ಷಿಸಲು ಸಾಧ್ಯವಾಗಲಿಲ್ಲ. ಬಳಿಕ ಪಿಚ್ ಒಣಗಿಸಲು ಹರಸಾಹಸಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಪಿಚ್ ಒಣಗಿಸಲು ಕ್ರೀಡಾಂಗಣದ ಸಿಬ್ಬಂದಿಗಳು ಹೇರ್ ಡ್ರೈಯರ್, ಐರನ್ ಬಾಕ್ಸ್ ಬಳಕೆ ಮಾಡಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ. ಪಾಕಿಸ್ತಾನ ಅಭಿಮಾನಿಗಳಂತೂ ಭಾರತದ ಪಾಡನ್ನು ನೋಡಿ ಹೆಲಿಕಾಪ್ಟರ್ ಕಳುಹಿಸಿಕೊಡಲು ಮುಂದಾಗಿದ್ದರು. ಒಟ್ಟಿನಲ್ಲಿ ವಿಶ್ವ ಕ್ರಿಕೆಟ್ನಲ್ಲಿ ಭಾರತವನ್ನು ತಲೆ ತಗ್ಗಿಸುವಂತೆ ಮಾಡಿದೆ. ಪಾಕಿಸ್ತಾನ ಪ್ರೀಮಿಯರ್ ಲೀಗ್ನಲ್ಲಿ ಪಿಚ್ ಒಣಗಿಸಲು ಹೆಲಿಕಾಪ್ಟರ್ ಬಳಸಲಾಗುತ್ತಿತ್ತು. ಭಾರತದ ಪರಿಸ್ಥಿತಿಯನ್ನು ನೋಡಿ ಅಲ್ಲಿನ ಅಭಿಮಾನಿಗಳು ಗೇಲಿ ಮಾಡಿದ್ದಾರೆ. ಪಾಕಿಸ್ತಾನ ಹೇಗೆ ಪಿಚ್ ಒಣಗಿಸುತ್ತಿದೆ ನೋಡಿ; ಭಾರತದ ಪರಿಸ್ಥಿತಿಯೇನು? ಈ ಮಧ್ಯೆ ವಿರಾಟ್ ಕೊಹ್ಲಿ ಪಿಚ್ ಪರೀಶೀಲಿಸುತ್ತಿರುವ ಚಿತ್ರವು ವ್ಯಾಪಕ ಟ್ರೋಲ್ಗೆ ಗುರಿಯಾಗಿದೆ. ಈ ಪೈಕಿ ಆಯ್ದ ಚಿತ್ರಗಳು ಇಲ್ಲಿವೆ. ವಿರಾಟ್ ಕೊಹ್ಲಿ ರಂಗೋಲಿ ಬಿಡಿಸುತ್ತಿದ್ದಾರೆಯೇ? ಮೈದಾನದಲ್ಲೇ ಹುಟ್ಟಿಕೊಂಡ ಅನುಷ್ಕಾ-ವಿರಾಟ್ ಪ್ರೀತಿ ಪಿಚ್ ಒಣಗಿಸಲು ಬಿಸಿಸಿಐ ಆಧುನಿಕ ಉಪಕರಣಗಳು: ಅನುಷ್ಕಾ: ನನ್ನ ಹೇರ್ ಡ್ರೈಯರ್ ಎಲ್ಲಿ? ವಿರಾಟ್: .....! ಬರ್ತ್ ಡೇ ಸಂಭ್ರಮಾಚರಣೆ ವೇಳೆ ಕೇಕ್ ಕಟ್ಟಿಂಗ್: ಹೆಲಿಕಾಪ್ಟರ್ ಉಡುಗೊರೆಯಾಗಿ ನೀಡಲು ಮುಂದಾದ ಪಾಕ್ ಅಭಿಮಾನಿ: ಪಿಚ್ ಯಾವಾಗ ಒಣಗುತ್ತೋ ಏನೋ? ರಿಯರ್ ಶೇಮ್ ಶೇಮ್ ಬಿಸಿಸಿಐ: ಸ್ಟೇಡಿಯಂನಲ್ಲಿ ಮೊಳಗಿದ ಪ್ರತಿಭಟನೆಯ ಕಾವು ದೇಶದ ಏಕತೆಯನ್ನು ಸಾರಿಗ ಗುವಾಹಟಿ ಮೈದಾನ:
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MYeqjw