- ಆತೀಶ್ ಬಿ.ಕನ್ನಾಳೆ, ಶಿವಮೊಗ್ಗ ಪಶ್ಚಿಮಘಟ್ಟದ ಶ್ರೀಮಂತ ವನಸಿರಿಯ ಮಧ್ಯೆ ನುಸುಳಿದ , ಜೀವವೈವಿಧ್ಯಗಳ ಪಾಲಿಗೆ ಶಾಪವಾಗಿ ಪರಿಣ ಮಿ ಸಿವೆ. ಇಲ್ಲಿಬೆಳೆಯುತ್ತಿದ್ದ 30ಕ್ಕೂ ಅಧಿಕ ಪ್ರಭೇದದ ಹುಲ್ಲುಗಾವಲನ್ನೂ ಇವು ಬಲಿ ಪಡೆದಿವೆ. ಇದರ ಫಲವಾಗಿ ಕಾಡೆಮ್ಮೆ, ಆನೆ ಆಹಾರ, ನೀರಿಗಾಗಿ ಜನವಸತಿ ಪ್ರದೇಶಗಳೆಡೆಗೆ ಧಾವಿಸುತ್ತಿವೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸಾವಿರಾರು ಹೆಕ್ಟೇರ್ ಮರಗಳಿವೆ. ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಮೂರೂವರೆ ಲಕ್ಷ ಹೆಕ್ಟೇರ್ ಅಕೇಶಿಯಾ ಇದೆ. ಅದೇ ರೀತಿ, ಎಂಪಿಎಂ (ಮೈಸೂರು ಪೇಪರ್ ಮಿಲ್) ಗೋಸ್ಕರ ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿಕಾಡು ನಾಶ ಮಾಡಿ ಅಕೇಶಿಯಾ, ನೀಲಗಿರಿ ನೆಡಲಾಗಿತ್ತು. ಅಧಿಕೃತ ಮೂಲಗಳ ಪ್ರಕಾರ, ಎಂಪಿಎಂನಿಂದ ಅಂದಾಜು 28 ಸಾವಿರ ಹೆಕ್ಟೇರ್ ಹಾಗೂ ಕೆಎಫ್ಡಿಸಿಯಿಂದ 9 ಸಾವಿರ ಹೆಕ್ಟೆರ್ ಪ್ರದೇಶದಲ್ಲಿಈ ವೃಕ್ಷರಾಕ್ಷಸ ಸಂತತಿ ಇದೆ. ಇದರಿಂದ, ಫಲವತ್ತಾದ ಭೂಮಿಯ ಸಾರ ಹಿಂಡಿ ಹಿಪ್ಪೆಯಾಗಿದ್ದು, ಸಮೃದ್ಧ ಕಾನನದಲ್ಲೂ ತಿನ್ನಲು ಆಹಾರ ಮತ್ತು ಕುಡಿಯಲು ನೀರಿಲ್ಲದೇ ಪ್ರಾಣಿಗಳು ಗ್ರಾಮ, ನಗರಗಳಿಗೆ ಬಂದು ಸಂಘರ್ಷ ಏರ್ಪಟ್ಟಿದೆ. 1930ರಲ್ಲಿಭಾರತದ ಪಶ್ಚಿಮ ಬಂಗಾಳಕ್ಕೆ ಮೊದಲ ಬಾರಿಗೆ ಅಕೇಶಿಯಾ ಕಾಲಿಟ್ಟಿತ್ತು. 1960ರಲ್ಲಿ ಕೆಲವು ಸಸಿಗಳನ್ನು ಹೊನ್ನಾವರ ರಸ್ತೆ ಇಕ್ಕೆಲಗಳಲ್ಲಿನೆಡಲಾಯಿತು. 1965ರಲ್ಲಿ ರಬ್ಬರ್ ತೋಟಗಳಿಗೆ ಬೆಂಕಿ ತಡೆಗೆ ಸುತ್ತಲೂ ಇದರ ಮೊರೆ ಹೋಗಲಾಯಿತು. ಸಮೃದ್ಧ ಹುಲ್ಲುಗಾವಲು ಹೊಂದಿದ್ದರಿಂದ 1950-70ರ ವರೆಗೆ ಅರಣ್ಯಕ್ಕೆ ಕಾಳ್ಗಿಚ್ಚು ದೊಡ್ಡ ತಲೆನೋವಾಗಿತ್ತು. ಕರ್ನಾಟಕದ ಇಬ್ಬರು ಹಿರಿಯ ಐಎಫ್ಎಸ್ ಅಧಿಕಾರಿಗಳು ಮೊದಲಿಗೆ ರಾಜ್ಯದ 40 ಪ್ರದೇಶಗಳಲ್ಲಿ40 ತಳಿಗಳನ್ನು ನಾಟಿ ಮಾಡಿಸಿದರು. ಅದರಲ್ಲಿ ಕೀಟ, ರೋಗ, ಕಷ್ಟಸಹಿಷ್ಣು ಗುಣ, ಬೆಂಕಿ ನಿರೋಧಕ ಶಕ್ತಿ ಹೊಂದಿದ್ದ ಅಕೇಶಿಯಾ ಚೆನ್ನಾಗಿ ಬೆಳೆದಿತ್ತು. ನಂತರ, ವಿಶ್ವ ಬ್ಯಾಂಕ್ ನೀಡಿದ 55 ಕೋಟಿ ರೂ. ಸಾಲ ಕೊಡುವಾಗ ಉಷ್ಣ ವಲಯದ ಕಾಡುಗಳಲ್ಲಿ ವಿದೇಶಿ ತಳಿ ಹಾಕುವಂತೆ ಷರತ್ತು ವಿಧಿಸಿತ್ತು. ಅಲ್ಲಿಂದ ಅಕೇಶಿಯಾವನ್ನು ವ್ಯಾಪಕವಾಗಿ ನೆಡಲಾಯಿತು. ಕುಗ್ಗಿದ ಫಲವತ್ತತೆ, ಹೆಚ್ಚಿದ ಭೂ ಸವಕಳಿ: ಗ್ರಾಸಸ್ ಆಫ್ ಬಾಂಬೆ ಪ್ರೆಸಿಡೆನ್ಸಿ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ ರಾಜ್ಯದಲ್ಲಿ 30ಕ್ಕೂ ಅಧಿಕ ಜಾತಿಯ ಕಾಡು ಹುಲ್ಲುಗಳಿದ್ದವು. ಅವುಗಳಿಂದ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರದ ಸಮಸ್ಯೆ ಇರಲಿಲ್ಲ. ಜತೆಗೆ, ಮಳೆಯ ನೀರೂ ಭೂಮಿಗೆ ಸೇರುತ್ತಿತ್ತು. ಭೂ ಸವಕಳಿ ಆಗುತ್ತಿರಲಿಲ್ಲ. ಆದರೆ, ಲಾಭ ಮತ್ತು ವೇಗವಾಗಿ ಬೆಳೆಯುತ್ತದೆಂಬ ಉದ್ದೇಶದಿಂದ ನೆಡಲಾದ ಅಕೇಶಿಯಾ ಈ ಕಾಡು ಹುಲ್ಲನ್ನು ಬಲಿ ಪಡೆದಿದೆ. ಈ ಕಾರಣದಿಂದಾಗಿಯೂ ಮಳೆಗಾಲದಲ್ಲಿಭೂ ಕುಸಿತದಂತಹ ಘಟನೆಗಳು ಮಲೆನಾಡಿನಲ್ಲಿಸಭವಿಸುತ್ತಿವೆ. ಕಡಿಮೆ ಮಳೆ ಬೀಳುವ ಆಸ್ಪ್ರೇಲಿಯಾದಲ್ಲಿ ಅಕೇಶಿಯಾ ಬೆಳೆಸಲಾಗುತ್ತಿತ್ತು. ಅದನ್ನು ಭಾರತಕ್ಕೆ ಪರಿಚಯಿಸಿದಾಗ ಬೀಜ ಕುದಿಸಿ ನಾಟಿ ಮಾಡಬೇಕಿತ್ತು. ಆದರೀಗ, ತಾನಾಗಿಯೇ ಬೆಳೆಯುತ್ತವೆ. ಇದರರ್ಥ ಹತ್ತಾರು ನದಿಗಳ ಜೀವ ತಾಣವಾಗಿರುವ ಪಶ್ಚಿಮ ಘಟ್ಟದ ಭೂಮಿಯೂ ಕಾದು ಕೆಂಡವಾಗಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ಎದುರಿಸಬೇಕಾಗುತ್ತದೆ ಎನ್ನುವುದು ಪರಿಸರ ಪ್ರೇಮಿಗಳ ಅಭಿಪ್ರಾಯ. ಸ್ಯಾಟಲೈಟ್ ಸಮೀಕ್ಷೆ ಆಧಾರದ ಮೇಲೆ ಕರ್ನಾಟಕದಲ್ಲಿವನ ವಿಸ್ತರಣೆ ಆಗಿರುವ ಬಗ್ಗೆ ವರದಿ ಬಿಡುಗಡೆ ಮಾಡಿರುವ ಭಾರತೀಯ ಅರಣ್ಯ ಸಮೀಕ್ಷೆ (ಎಸ್ಎಫ್ಐ)ಯಲ್ಲಿಅಕೇಶಿಯಾ, ನೀಲಗಿರಿ ತೋಪುಗಳೂ ಸೇರಿವೆ. ಆದರೆ ಇವು ಅರಣ್ಯವಲ್ಲ ಎಂಬುದು ಪರಿಸರವಾದಿಗಳ ವಾದ. ಸಮೃದ್ಧ ಜೀವವೈವಿಧ್ಯಗಳಿಂದ ಕೂಡಿರುವ ಆಗುಂಬೆ, ಶರಾವತಿ ಭಾಗದಲ್ಲೂಅಕೇಶಿಯಾ, ನೀಲಗಿರಿ ಬೆಳೆದಿವೆ. ಕಾಗದ ತಯಾರಿಕೆ ಅನುಕೂಲಕ್ಕಾಗಿ ಈ ಎರಡು ಮರಗಳನ್ನು ಮಲೆನಾಡಿಗೆ ತರಲಾಯಿತು. ಆದರೀಗ, ಈ ತಪ್ಪು ತಿದ್ದಿಕೊಳ್ಳುವ ಅವಕಾಶ ಎಂಪಿಎಂಗಿದೆ. ಕಾರ್ಯ ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ಈ ಮರಗಳನ್ನು ಕಡಿದು ಆ ಭಾಗದಲ್ಲಿ ಸ್ಥಳೀಯ ತಳಿಗಳನ್ನು ನೆಡುವಂತೆಯೂ ಸೂಚನೆ ನೀಡಲಾಗಿದೆ. ಎಂಪಿಎಂ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಎಂಪಿಎಂ ಕಾರ್ಖಾನೆ ಬಂದ್ ಆಗಿದ್ದು, ನಿರುದ್ಯೋಗದ ಸಮಸ್ಯೆಯೂ ನೀಗಿಲ್ಲ. ಪ್ರತಿ ವರ್ಷ ನಿಗದಿತ ಪ್ರಮಾಣದ ಮರಗಳನ್ನು ಕಡಿದು ಅರಣ್ಯ ಪ್ರದೇಶವನ್ನು ಮರು ಸಮೃದ್ಧಗೊಳಿಸಬೇಕೆಂಬ ಕೆಲಸವನ್ನೂ ಮಾಡಿಲ್ಲ. ಅರಣ್ಯವೆಂದರೆ ಅದೊಂದು ಜೀವವೈವಿಧ್ಯ. ಅಲ್ಲಿ ಮೋನೋಕಲ್ಚರ್ ಪ್ಲಾಂಟಿಂಗ್ಗೆ ಅವಕಾಶವೇ ಇಲ್ಲ. ಆದರೆ, ಅಕೇಶಿಯಾ ಮತ್ತು ನೀಲಗಿರಿಗಳು ಈ ವೈವಿಧ್ಯವನ್ನೇ ಹಾಳು ಮಾಡಿವೆ. ನಿತ್ಯ ಆನೆಯೊಂದಕ್ಕೆ 130 ಕೆಜಿ ಹಾಗೂ ಕಾಡೆಮ್ಮೆಗೆ 40-50 ಕೆಜಿ ಆಹಾರ ಬೇಕು. ಈಗದು ಅರಣ್ಯಗಳಲ್ಲಿಸಿಗುತ್ತಿಲ್ಲ. ಹೀಗಾಗಿ, ಪ್ರಾಣಿ, ಮನುಷ್ಯರ ನಡುವೆ ಸಂಘರ್ಷ ಏರ್ಪಟ್ಟಿದೆ. -ಶಿವಾನಂದ ಕಳವೆ
from India & World News in Kannada | VK Polls https://ift.tt/2up3V2t