ಕೇಂದ್ರ ಸರಕಾರವೇ ದಿವಾಳಿಯಾಗಿದೆ, ಇನ್ನೆಲ್ಲಿ ಬಿಎಸ್‌ವೈಗೆ ದುಡ್ಡು ಕೊಡ್ತಾರೆ?: ಸಿದ್ದರಾಮಯ್ಯ

ಹುಬ್ಬಳ್ಳಿ: ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರದ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಬಂದಿದ್ದೇ 600 ಕೋಟಿ ರೂ. ಚಿಲ್ಲರೆ. ಆದರೆ 1800 ಕೋಟಿ ರೂ. ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. 36 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ರಾಜ್ಯ ಸರಕಾರವೇ ಹೇಳಿದೆ. ಕೇಂದ್ರ ಸರಕಾರ ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಿದ ಪರಿಹಾರವು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತೆ ಎಂದು ಮಾಜಿ ಸಿಎಂ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರಕಾರವೇ ದಿವಾಳಿಯಾಗಿದೆ. ಇನ್ನೇಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ದುಡ್ಡು ಕೊಡುತ್ತಾರೆ? ಎಂದು ವ್ಯಂಗ್ಯವಾಡಿದರು. ''ಯಡಿಯೂರಪ್ಪ ಅದೇನೋ ಕಡಿದು ಕಟ್ಟೆ ಹಾಕ್ತಿನಿ ಅಂದಿದ್ರು. ನೋಡೋಣ ಆರು ತಿಂಗಳು ಕಳೆಯಲಿ. ಆ ಮೇಲೆ‌ ಹೋರಾಟ ಮಾಡೋಣ'' ಎಂದರು. ''ಮಾಹದಾಯಿ ವಿಷಯದಲ್ಲಿ ಬಿಜೆಪಿ ತಮ್ಮನ್ನ ತಾವು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಮನಸ್ಸು ಮಾಡಿದ್ರೆ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಯುತ್ತೆ. ಮಹದಾಯಿ ವಿಷಯದಲ್ಲಿ ಬಿಎಸ್ ವೈ ಬರೀ ಸುಳ್ಳು ಹೇಳ್ತಾರೆ. ಶೆಟ್ಟರ್ ಅದಕ್ಕೆ ತಮಟೆ ಹೊಡೆಯುತ್ತಾರೆ. ಜೋಶಿ ತಾಳ ಹಾಕುತ್ತಾರೆ. ಹಿಂದೆಯೂ ಕೂಡಾ ಅಧಿಕಾರಕ್ಕೆ ಬಂದ ಕೂಡಲೆ ಸಮಸ್ಯೆ ಬಗೆಹರಿಸುತ್ತೆನೆ ಎಂದಿದ್ದರು. ಇವಾಗ ಏನ್ ಮಾಡಿದ್ರು. ಆ ಬಗ್ಗೆ ಮಾತೇ ಆಡಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ. ಪ್ರಜಾಭುತ್ವವನ್ನ ಹತ್ತಿಕ್ಕಿದ್ದಾರೆ'' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ''ಜೆಎನ್ಯುನಲ್ಲಿ ನಡೆದಿದ್ದು ಪಕ್ಕಾ ಕೇಂದ್ರ ಸರ್ಕಾರದ ಪ್ರಾಯೋಜಿತ ದಾಳಿ. ಇದರಲ್ಲಿ ನೇರವಾಗಿ ಅಮಿತ್ ಶಾ ಭಾಗವಹಿಸಿದ್ದಾರೆ. ಬೆಂಗಳೂರಿನ ಜ್ಯೋತಿನಿವಾಸ ಕಾಲೇಜು ವಿಧ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡಿದ್ದು ಸರಿಯಲ್ಲ. ಪ್ರಜಾಪ್ರಭುತ್ವ ಹತ್ತಿಕ್ಕುತ್ತಿದ್ದಾರೆ. ನಾವು ಸಿಎಎ ವಿರುದ್ದ ಪ್ರತಿಭಟನೆ ಮಾಡೇ ಇಲ್ಲ. ನಮ್ಮ ಹಾಗೂ ಕಮ್ಯುನಿಷ್ಟ ಪಕ್ಷದ ವಿರುದ್ದ ಆರೋಪ ಮಾಡುತ್ತಿದ್ದಾರೆ. ನಾವು ನಮ್ಮ ಪಕ್ಷದ ವತಿಯಿಂದ ಸ್ಪಷ್ಟ ವಾಗಿ ವಿರೋಧಿಸುತ್ತೆವೆ'' ಎಂದು ಸಿದ್ದರಾಂಯ್ಯ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್‌ ನೇಮಕಕ್ಕೆ ಸಂಬಂಧಿಸಿ ''ನನ್ನನ್ನು ಡಿಕೆ ಶಿವಕುಮಾರ್‌ ಭೇಟಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು. ಏನಾಗುತ್ತದೆ ಎಂದು ನೋಡೋಣ'' ಎಂದು ಸಿದ್ದರಾಮಯ್ಯ ಜಾರಿಕೊಂಡರು.


from India & World News in Kannada | VK Polls https://ift.tt/308Eair

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...