ಹೊಸದಿಲ್ಲಿ: ಹಲವು ಪುನಶ್ಚೇತನ ಕ್ರಮಗಳ ಹೊರತಾಗಿಯೂ ಚೇತರಿಕೆ ಕಾಣದ ಆರ್ಥಿಕತೆಯನ್ನು ಮರಳಿ ಹಳಿಗೆ ತರುವ ಪ್ರಯತ್ನವಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ರಂಗ ಪ್ರವೇಶ ಮಾಡಿದ್ದಾರೆ. ಫೆಬ್ರವರಿ 1ರಂದು ಮಂಡನೆಯಾಗಲಿರುವ ಬಜೆಟ್ನಲ್ಲಿಆರ್ಥಿಕ ಚೇತರಿಕೆಗೆ ಯಾವ್ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಮೋದಿ ಅವರು ಕಳೆದೊಂದು ವಾರದಿಂದ ಉದ್ಯಮಿಗಳು ಮತ್ತು ಆರ್ಥಿಕ ತಜ್ಞರ ಜತೆ ನಿರಂತರ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಎಲ್ಲವಲಯಗಳ ಅಭಿಪ್ರಾಯಗಳನ್ನು ಆಲಿಸುತ್ತಿದ್ದಾರೆ. ಸರ್ವ ವಲಯಗಳಲ್ಲೂಆಗುತ್ತಿರುವ ಹಿನ್ನಡೆಯ ಜತೆಗೆ 2019-20ರ ಆರ್ಥಿಕ ಬೆಳವಣಿಗೆ ದರ ಶೇಕಡಾ 5ಕ್ಕೆ ಕುಸಿಯಬಹುದು ಎಂಬ ಲೆಕ್ಕಾಚಾರಗಳು ಸರಕಾರದ ಮಟ್ಟದಲ್ಲಿಆತಂಕ ಸೃಷ್ಟಿಸಿರುವುದು ಈ ಪ್ರಯತ್ನಕ್ಕೆ ಕಾರಣ ಎನ್ನಲಾಗಿದೆ. ಗುರುವಾರ ಉದ್ಯಮಿಗಳು, ಖಾಸಗಿ ಹೂಡಿಕೆದಾರರು, ನೀತಿ ಆಯೋಗದೊಂದಿಗೆ ಸಭೆ ನಡೆದಿದೆ. ನೀತಿ ಆಯೋಗದ ಜತೆಗಿನ ಸಭೆಯಲ್ಲಿಉಪಾಧ್ಯಕ್ಷ ರಾಜೀವ್ ಕುಮಾರ್ ಭಾಗವಹಿಸಿದ್ದರು. ಜತೆಗೆ ಗೃಹ ಸಚಿವ ಅಮಿತ್ ಶಾ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೈಗಾರಿಕಾ ಸಚಿವ ಪಿಯೂಶ್ ಗೋಯಲ್, ಹಣಕಾಸು ಸಲಹಾ ಸಮಿತಿ ಅಧ್ಯಕ್ಷ ವಿವೇಕ್ ದೇಬ್ ರಾಯ್ ಉಪಸ್ಥಿತರಿದ್ದರು. ವಾರದಲ್ಲಿ12 ಸಭೆ
- - ಮೋದಿ ಅವರು ಕಳೆದ ಒಂದು ವಾರದಲ್ಲಿ12 ಸಭೆಗಳನ್ನು ನಡೆಸಿದ್ದಾರೆ. ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ ಸೇರಿದಂತೆ ನಾನಾ ಉದ್ಯಮಿಗಳು ಭಾಗವಹಿಸಿದ್ದಾರೆ.
- - ಬೆಳಗ್ಗೆ 9ರಿಂದ ರಾತ್ರಿ 10 ಗಂಟೆವರೆಗೆ ಸಭೆ ನಡೆಯುತ್ತಿದೆ. ಒಂದೊಂದು ಟೀಮ್ ಜತೆ ಸುಮಾರು 3 ಗಂಟೆಗಳ ಮಾತುಕತೆ.
- - ಮಂತ್ರಿಗಳು ಮತ್ತು ಸಂಬಂಧಿತ ಇಲಾಖೆಗಳ ಜತೆಗೂ ಸಭೆ.
- - ಹೆಚ್ಚಿನ ಸಭೆಗಳಲ್ಲಿ ಮೋದಿ ಅವರು ಕೇವಲ ಮಾತುಗಳನ್ನು ಆಲಿಸುತ್ತಾರೆ
- - ಕಳೆದ ಆರು ತ್ರೈಮಾಸಿಕಗಳಲ್ಲಿಜಿಡಿಪಿ ನಿರಂತರ ಕುಸಿತ, ಸೆಪ್ಟೆಂಬರ್ನಲ್ಲಿ4.5%ಕ್ಕೆ ಇಳಿಕೆ
- - 2018-19ರಲ್ಲಿದ್ದ ಶೇ. 6.8 ಜಿಡಿಪಿ ಪ್ರಮಾಣ 2019-20ಕ್ಕೆ 5%ಗೆ ಇಳಿಯುವ ಸಂಭಾವ್ಯತೆ
- - ದೇಶದಲ್ಲಿಉದ್ಯೋಗವಕಾಶ ಪ್ರಮಾಣ ಇಳಿಕೆ, ಕೈಗಾರಿಕಾ ಪ್ರಗತಿಗೂ ಹಿನ್ನಡೆ
- - ಈರುಳ್ಳಿ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ರೂಪಾಯಿಗೂ ಹಿನ್ನಡೆ
- - ಜಾಗತಿಕ ಹಿಂಜರಿತ, ಅಮೆರಿಕ-ಇರಾನ್ ಸಮರ ಛಾಯೆಯಿಂದ ಕಚ್ಚಾ ತೈಲ ದುಬಾರಿ
from India & World News in Kannada | VK Polls https://ift.tt/39RPvrD