ಆರ್ಥಿಕ ಚೇತರಿಕೆಗೆ 'ಮೋದಿ' ರಂಗ ಪ್ರವೇಶ: ಉದ್ಯಮಿಗಳು, ಆರ್ಥಿಕ ತಜ್ಞರ ಜತೆ ಚರ್ಚೆ

ಹೊಸದಿಲ್ಲಿ: ಹಲವು ಪುನಶ್ಚೇತನ ಕ್ರಮಗಳ ಹೊರತಾಗಿಯೂ ಚೇತರಿಕೆ ಕಾಣದ ಆರ್ಥಿಕತೆಯನ್ನು ಮರಳಿ ಹಳಿಗೆ ತರುವ ಪ್ರಯತ್ನವಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ರಂಗ ಪ್ರವೇಶ ಮಾಡಿದ್ದಾರೆ. ಫೆಬ್ರವರಿ 1ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿಆರ್ಥಿಕ ಚೇತರಿಕೆಗೆ ಯಾವ್ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಮೋದಿ ಅವರು ಕಳೆದೊಂದು ವಾರದಿಂದ ಉದ್ಯಮಿಗಳು ಮತ್ತು ಆರ್ಥಿಕ ತಜ್ಞರ ಜತೆ ನಿರಂತರ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಎಲ್ಲವಲಯಗಳ ಅಭಿಪ್ರಾಯಗಳನ್ನು ಆಲಿಸುತ್ತಿದ್ದಾರೆ. ಸರ್ವ ವಲಯಗಳಲ್ಲೂಆಗುತ್ತಿರುವ ಹಿನ್ನಡೆಯ ಜತೆಗೆ 2019-20ರ ಆರ್ಥಿಕ ಬೆಳವಣಿಗೆ ದರ ಶೇಕಡಾ 5ಕ್ಕೆ ಕುಸಿಯಬಹುದು ಎಂಬ ಲೆಕ್ಕಾಚಾರಗಳು ಸರಕಾರದ ಮಟ್ಟದಲ್ಲಿಆತಂಕ ಸೃಷ್ಟಿಸಿರುವುದು ಈ ಪ್ರಯತ್ನಕ್ಕೆ ಕಾರಣ ಎನ್ನಲಾಗಿದೆ. ಗುರುವಾರ ಉದ್ಯಮಿಗಳು, ಖಾಸಗಿ ಹೂಡಿಕೆದಾರರು, ನೀತಿ ಆಯೋಗದೊಂದಿಗೆ ಸಭೆ ನಡೆದಿದೆ. ನೀತಿ ಆಯೋಗದ ಜತೆಗಿನ ಸಭೆಯಲ್ಲಿಉಪಾಧ್ಯಕ್ಷ ರಾಜೀವ್‌ ಕುಮಾರ್‌ ಭಾಗವಹಿಸಿದ್ದರು. ಜತೆಗೆ ಗೃಹ ಸಚಿವ ಅಮಿತ್‌ ಶಾ, ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್‌, ಹಣಕಾಸು ಸಲಹಾ ಸಮಿತಿ ಅಧ್ಯಕ್ಷ ವಿವೇಕ್‌ ದೇಬ್‌ ರಾಯ್‌ ಉಪಸ್ಥಿತರಿದ್ದರು. ವಾರದಲ್ಲಿ12 ಸಭೆ
  • - ಮೋದಿ ಅವರು ಕಳೆದ ಒಂದು ವಾರದಲ್ಲಿ12 ಸಭೆಗಳನ್ನು ನಡೆಸಿದ್ದಾರೆ. ಉದ್ಯಮಿಗಳಾದ ಮುಕೇಶ್‌ ಅಂಬಾನಿ, ಗೌತಮ್‌ ಅದಾನಿ, ರತನ್‌ ಟಾಟಾ ಸೇರಿದಂತೆ ನಾನಾ ಉದ್ಯಮಿಗಳು ಭಾಗವಹಿಸಿದ್ದಾರೆ.
  • - ಬೆಳಗ್ಗೆ 9ರಿಂದ ರಾತ್ರಿ 10 ಗಂಟೆವರೆಗೆ ಸಭೆ ನಡೆಯುತ್ತಿದೆ. ಒಂದೊಂದು ಟೀಮ್‌ ಜತೆ ಸುಮಾರು 3 ಗಂಟೆಗಳ ಮಾತುಕತೆ.
  • - ಮಂತ್ರಿಗಳು ಮತ್ತು ಸಂಬಂಧಿತ ಇಲಾಖೆಗಳ ಜತೆಗೂ ಸಭೆ.
  • - ಹೆಚ್ಚಿನ ಸಭೆಗಳಲ್ಲಿ ಮೋದಿ ಅವರು ಕೇವಲ ಮಾತುಗಳನ್ನು ಆಲಿಸುತ್ತಾರೆ
ಬಜೆಟ್‌ ಮಾತ್ರವಲ್ಲ, 2025ಕ್ಕೆ 5 ಟ್ರಿಲಿಯನ್‌ ಆರ್ಥಿಕತೆ ಗುರಿ ಮೋದಿ ಅವರ ಚರ್ಚೆಯಲ್ಲಿಕೇವಲ ಆರ್ಥಿಕ ಪುನಶ್ಚೇತನವೊಂದೇ ವಿಷಯವಲ್ಲ. 2024ಕ್ಕೆ ದೇಶದ ಆರ್ಥಿಕ ಗಾತ್ರವನ್ನು 5 ಟ್ರಿಲಿಯನ್‌ ಡಾಲರ್‌ಗೆ ಏರಿಸುವ ನಿಟ್ಟಿನಲ್ಲೂಚರ್ಚೆ ನಡೆಯುತ್ತಿದೆ. ಎಲ್ಲವಿಭಾಗಗಳಲ್ಲಿ ಮಾಡಬಹುದಾದ ಸಾಧನೆ ಬಗ್ಗೆ ಮೋದಿ ಮಾಹಿತಿ ಕೇಳುತ್ತಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರಿಂದಲೂ ಆಹ್ವಾನ ಬಜೆಟ್‌ನಲ್ಲಿ130 ಕೋಟಿ ಭಾರತೀಯರ ಆಶಯಗಳನ್ನು ಒಳಗೊಳಿಸುವ ಉದ್ದೇಶವನ್ನು ಹೊಂದಿದ್ದು, ಸಾರ್ವಜನಿಕರು ತಮ್ಮ ಪ್ರಗತಿಪರ ಸಲಹೆಗಳನ್ನು, ಚಿಂತನೆಗಳನ್ನು ಹಂಚಿಕೊಳ್ಳಬಹುದು ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. "ಭಾರತದ ಆರ್ಥಿಕತೆಯ ತಳಪಾಯ ಅತ್ಯಂತ ಗಟ್ಟಿಯಾಗಿದೆ. ಹೀಗಾಗಿ ಮತ್ತೊಮ್ಮೆ ಎದ್ದುಬರುವ ಶಕ್ತಿಯನ್ನು ಅದು ಹೊಂದಿದೆ. ಪ್ರವಾಸೋದ್ಯಮ, ನಗರಾಭಿವೃದ್ಧಿ, ಮೂಲ ಸೌಕರ್ಯ ಮತ್ತು ಕೃಷಿ ಕ್ಷೇತ್ರಕ್ಕೆ ಆರ್ಥಿಕ ಪುನಶ್ಚೇತನ ಮತ್ತು ಉದ್ಯೋಗ ಸೃಷ್ಟಿಯ ತಾಕತ್ತಿದೆ." - ನರೇಂದ್ರ ಮೋದಿ, ಪ್ರಧಾನಿ (ನೀತಿ ಆಯೋಗದ ಸಭೆಯಲ್ಲಿ) ಹಣಕಾಸು ಸಚಿವೆ ಮಿಸ್ಸಿಂಗ್‌ ಪ್ರಧಾನಿ ನಡೆಸುತ್ತಿರುವ ಸಭೆಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಸೇರಿದಂತೆ ಹಲವರು ಈ ಅನುಪಸ್ಥಿತಿಯ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಆದರೆ, ನಿರ್ಮಲಾ ಸೀತಾರಾಮನ್‌ ಅವರು ಪಕ್ಷದ ನಾಯಕರ ಜತೆಗೆ ಬಜೆಟ್‌ ಪೂರ್ವ ಚರ್ಚೆಯಲ್ಲಿನಿರತರಾಗಿರುವುದು ಕಂಡುಬಂದಿದೆ. ಡಿ.19ರಿಂದ ಇದುವರೆಗೆ 11 ಸಭೆಗಳನ್ನು ಆಯೋಜಿಸಲಾಗಿದ್ದು, ಜ. 14ರವರೆಗೂ ನಡೆಯಲಿದೆ. ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಈ ಸಭೆ ಸಂಘಟಿಸುತ್ತಿದ್ದಾರೆ. ಹಿಂಜರಿತದ ಸುಳಿಯಲ್ಲಿ
  • - ಕಳೆದ ಆರು ತ್ರೈಮಾಸಿಕಗಳಲ್ಲಿಜಿಡಿಪಿ ನಿರಂತರ ಕುಸಿತ, ಸೆಪ್ಟೆಂಬರ್‌ನಲ್ಲಿ4.5%ಕ್ಕೆ ಇಳಿಕೆ
  • - 2018-19ರಲ್ಲಿದ್ದ ಶೇ. 6.8 ಜಿಡಿಪಿ ಪ್ರಮಾಣ 2019-20ಕ್ಕೆ 5%ಗೆ ಇಳಿಯುವ ಸಂಭಾವ್ಯತೆ
  • - ದೇಶದಲ್ಲಿಉದ್ಯೋಗವಕಾಶ ಪ್ರಮಾಣ ಇಳಿಕೆ, ಕೈಗಾರಿಕಾ ಪ್ರಗತಿಗೂ ಹಿನ್ನಡೆ
  • - ಈರುಳ್ಳಿ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ರೂಪಾಯಿಗೂ ಹಿನ್ನಡೆ
  • - ಜಾಗತಿಕ ಹಿಂಜರಿತ, ಅಮೆರಿಕ-ಇರಾನ್‌ ಸಮರ ಛಾಯೆಯಿಂದ ಕಚ್ಚಾ ತೈಲ ದುಬಾರಿ


from India & World News in Kannada | VK Polls https://ift.tt/39RPvrD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...