ಹೊಸದಿಲ್ಲಿ: ಗಣರಾಜ್ಯೋತ್ಸವಕ್ಕೆ ದೇಶ ಸಜ್ಜುಗೊಳ್ಳುತ್ತಿರುವ ಹೊತ್ತಲ್ಲಿ ದಿಲ್ಲಿ, ಉತ್ತರ ಪ್ರದೇಶ ಸೇರಿ ಹಲವು ಕಡೆ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ 12 ಉಗ್ರರನ್ನು ಬಂಧಿಸಲಾಗಿದೆ. ದಿಲ್ಲಿಯಲ್ಲಿ ಮೂವರು ಹಾಗೂ ಗುಜರಾತಿನಲ್ಲಿಒಬ್ಬ ಹಾಗೂ ತಮಿಳುನಾಡಿನಲ್ಲಿ8 ಉಗ್ರರನ್ನು ಪೊಲೀಸ್ ಹಾಗೂ ಉಗ್ರ ನಿಗ್ರಹ ದಳ ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸಿದ್ದು, ಇವರೆಲ್ಲರೂ ಐಸಿಸ್ ಜತೆ ನಂಟು ಹೊಂದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ದಿಲ್ಲಿಯ ವಝೀರಾಬಾದ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿವಾಸಿಸುತ್ತಿದ್ದ ಖಾಜಾ ಮೊಯಿದ್ದೀನ್(52), ಅಬ್ದುಲ್ ಸಾಮದ್(28) ಮತ್ತು ಸಯ್ಯದ್ ಅಲಿ ನವಾಜ್(32) ಬಂಧಿತರು. ಇವರು ಎನ್ಸಿಆರ್ ಮತ್ತು ಉತ್ತರ ಪ್ರದೇಶದಲ್ಲಿದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದ್ದು, ಪೊಲೀಸರು 14 ಸುತ್ತು ಗುಂಡಿನ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದಾರೆ. ಭಾರಿ ಪ್ರಮಾಣದ ಶಸ್ತಾ್ರಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಇವರೆಲ್ಲರೂ ಮೂಲದವರು. ತಮಿಳುನಾಡಿನ ತಿರುವಳ್ಳುವರ್ ಜಿಲ್ಲೆಯಲ್ಲಿ ನಡೆದಿದ್ದ ಹಿಂದೂ ಮುನ್ನಾನಿ ನಾಯಕ ಕೆ.ಪಿ.ಸುರೇಶ್ ಅವರ ಕೊಲೆ ಪ್ರಕರಣದ ಈ ಮೂವರು ಆರೋಪಿಗಳ ಪೈಕಿ ಇಬ್ಬರು ಜಾಮೀನಿನ ಮೇಲೆ ಹೊರಗಿದ್ದರು. ತಲೆಮರೆಸಿಕೊಂಡಿದ್ದ ಇವರು ಇತರ ಮೂವರ ಜತೆ ಸೇರಿ ನೇಪಾಳಕ್ಕೆ ತೆರಳಿ ಅಲ್ಲಿ ಪಾಕ್ ಮೂಲದ ಹ್ಯಾಂಡ್ಲರ್ಗಳ ಜತೆ ಸಭೆ ನಡೆಸಿ ಬಳಿಕ ದಿಲ್ಲಿಗೆ ಬಂದು ವಝೀರಾಬಾದ್ನಲ್ಲಿ ಬಾಡಿಗೆ ಮನೆಯಲ್ಲಿವಾಸವಿದ್ದರು. ವಡೋದಾರದಲ್ಲಿಒಬ್ಬನ ಸೆರೆ: ಉಗ್ರ ನಿಗ್ರಹ ದಳ ವಡೋದರಾದಲ್ಲಿ ಕಾರ್ಯಾಚರಣೆ ನಡೆಸಿ ತಮಿಳುನಾಡಿನ ಕಡಲೂರು ಜಿಲ್ಲೆಮೂಲದ ಐಸಿಸ್ ಉಗ್ರ ಜಫರ್ ಅಲಿಯನ್ನು ಬಂಧಿಸಿದೆ. ಗುಜರಾತಿನಲ್ಲಿಐಸಿಸ್ ಮಾದರಿಯಲ್ಲಿ ದಾಳಿ ನಡೆಸಲು ಈತ ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಬೆಂಗಳೂರಿನ ಮೂವರು ತಮಿಳುನಾಡಿನಲ್ಲಿನಡೆದ ಕಾರಾರಯಚರಣೆಯಲ್ಲಿ ಜಿಹಾದ್ ಸಮರಕ್ಕೆ ಸಜ್ಜಾಗಿದ್ದ 8 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿಬೆಂಗಳೂರಿನ ಮೊಹಮ್ಮದ್ ಹನೀಫ್ ಖಾನ್ (29), ಇಮ್ರಾನ್ ಖಾನ್ (32) ಹಾಗೂ ಮೊಹಮ್ಮದ್ ಝೈದ್ ( 24) ಸೇರಿದ್ದಾರೆ. ಉಳಿದವರು ತಮಿಳುನಾಡಿನವರು. ಕರ್ನಾಟಕದ ಪೊಲೀಸರು ಕೂಡಾ ಕಾರ್ಯಾಚರಣೆಗೆ ಕೈಜೋಡಿಸಿದ್ದರು. ಬಂಧಿತರಿಂದ ಮೂರು ಪಿಸ್ತೂಲ್ ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
from India & World News in Kannada | VK Polls https://ift.tt/2Ne4CBY