ಹೊಸದಿಲ್ಲಿ: ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿರುವ 2020ನೇ ಸಾಲಿನ ಅಕ್ಟೋಬರ್ 18ರಿಂದ 15ರ ವರೆಗೆ ನಡೆಯಲಿದೆ. ಇದರಂತೆ ಬಹುತೇಕ ತಂಡಗಳು ಪೂರ್ವ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಟೀಮ್ ಇಂಡಿಯಾ ಕೂಡಾ ಸೂಕ್ತ ಹೊಂದಾಣಿಕೆಯ ತಂಡದ ಹುಡುಕಾಟದಲ್ಲಿದೆ. ಈ ಮಧ್ಯೆ ಮಾಜಿ ದಿಗ್ಗಜ ಮುಂಬರುವ ಟಿ20 ವಿಶ್ವಕಪ್ಗೆ ಭಾರತದ ಸಾಧ್ಯತಾ ತಂಡವನ್ನು ಆರಿಸಿದ್ದಾರೆ. ಆದರೆ ಅಚ್ಚರಿಯೆಂಬಂತೆ ಮಾಜಿ ನಾಯಕ ಹಾಗೂ ಅನುಭವಿ ಎಡಗೈ ಆರಂಭಿಕ ಶಿಖರ್ ಧವನ್ರನ್ನು ಕೈಬಿಡಲಾಗಿದೆ. ಧೋನಿ ನಾಯಕತ್ವದಲ್ಲಿ 2007ರಲ್ಲಿ ಭಾರತ ತಂಡವು ಚೊಚ್ಚಲ ಟಿ20 ವಿಶ್ವಕಪ್ ಜಯಿಸಿತ್ತು. ಆದರೆ 2019 ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ರಂಗದಿಂದ ದೂರವುಳಿದಿದ್ದಾರೆ. ಧೋನಿ ಕಡೆಗಣಿಸಿರುವ ಲಕ್ಷ್ಮಣ್, ಯುವ ವಿಕೆಟ್ ಕೀಪರ್ ರಿಷಬ್ ಪಂತ್ರಿಗೆ ಮಣೆ ಹಾಕಿದ್ದಾರೆ. ಇನ್ನೊಂದೆಡೆ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಶಿಖರ್ ಧವನ್ರನ್ನು ಸಹ ಲಕ್ಷ್ಮಣ್ ಕಡೆಗಣಿಸಿದ್ದಾರೆ. ಇನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆರನ್ನು ಆಯ್ಕೆ ಮಾಡಿರುವುದು ಗಮನಾರ್ಹವೆನಿಸುತ್ತದೆ. ಅದೇ ಹೊತ್ತಿಗೆ ವಾಷಿಂಗ್ಟನ್ ಸುಂದರ್ ಹಾಗೂ ಕೃುಣಾಲ್ ಪಾಂಡ್ಯರನ್ನು ಕೈಬಿಡಲಾಗಿದೆ. ಕೆಎಲ್ ರಾಹುಲ್ರನ್ನು ಎರಡನೇ ವಿಕೆಟ್ ಕೀಪರ್ ಆಗಿ ಪರಿಗಣಿಸಿರುವ ಲಕ್ಷ್ಮಣ್, ಕೇರಳ ಮೂಲದ ವಿಕೆಟ್ ಕೀಪರ್ ಸಂಜು ಸ್ಯಾಮನ್ರಿಗೂ ಗೇಟ್ ಪಾಸ್ ನೀಡಿದ್ದಾರೆ. ಯುವ ವೇಗಿ ನವದೀಪ್ ಸೈನಿ ಕೂಡಾ, ಲಕ್ಷ್ಮಣ್ ವಿಶ್ವಕಪ್ ತಂಡದಲ್ಲಿ ಗುರುತಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಅತ್ತ ಗಾಯದಿಂದ ಬಳಲುತ್ತಿರುವ ಅನುಭವಿ ಭುವನೇಶ್ವರ್ ಕುಮಾರ್ಗೆ ಅವಕಾಶ ನೀಡಿದ್ದಾರೆ. ಲಕ್ಷ್ಮಣ್ ಆರಿಸಿದ 15 ಸದಸ್ಯ ಬಳಗದ ಭಾರತ ಟಿ20 ವಿಶ್ವಕಪ್ ತಂಡ ಇಂತಿದೆ: 1. ವಿರಾಟ್ ಕೊಹ್ಲಿ (ನಾಯಕ) 2. ರೋಹಿತ್ ಶರ್ಮಾ 3. ಕೆಎಲ್ ರಾಹುಲ್ 4. ಶ್ರೇಯಸ್ ಅಯ್ಯರ್ 5. ರಿಷಬ್ ಪಂತ್ 6. ಹಾರ್ದಿಕ್ ಪಾಂಡ್ಯ 7. ಜಸ್ಪ್ರೀತ್ ಬುಮ್ರಾ 8. ಯುಜ್ವೇಂದ್ರ ಚಹಲ್ 9. ಕುಲ್ದೀಪ್ ಯಾದವ್ 10. ಮನೀಶ್ ಪಾಂಡೆ 11. ಶಿವಂ ದುಬೆ 12. ರವೀಂದ್ರ ಜಡೇಜಾ 13. ಮೊಹಮ್ಮದ್ ಶಮಿ 14. ದೀಪಕ್ ಚಹರ್ 15. ಭುವನೇಶ್ವರ್ ಕುಮಾರ್.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2tHevBk