ಶತಕದ ಬಗ್ಗೆ ಚಿಂತೆಯಿಲ್ಲ, ನಾನು ಸ್ವಾರ್ಥಿಯಲ್ಲ, ತಂಡದ ಬಗ್ಗೆ ಯೋಚಿಸುತ್ತೇನೆ: ಅಜಿಂಕ್ಯ ರಹಾನೆ

ಆ್ಯಂಟಿಗುವಾ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದಲ್ಲಿ 'ಮಿಸ್ಟರ್ ಡಿಪೆಂಡಬಲ್' ಎಂದೆನಿಸಿಕೊಂಡಿರುವ , ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ರಹಾನೆ ಅರ್ಧಶತಕದ ನೆರವಿನಿಂದ ಮೊದಲ ದಿನದಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 203 ರನ್ ಪೇರಿಸಿತ್ತು. ಸ್ವಲ್ಪದರಲ್ಲೇ ಶತಕ ಮಿಸ್ ಮಾಡಿಕೊಂಡರೂ ರಹಾನೆ 81 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿದರು. ಆದರೂ ಕಳೆದ 28 ಇನ್ನಿಂಗ್ಸ್‌ಗಳಿಂದ ಶತಕದ ಬರ ಎದುರಿಸುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ರಹಾನೆ ಶತಕ ಗಳಿಸಿಲ್ಲ. 2017ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯದಾಗಿ ಶತಕವನ್ನು ಬಾರಿಸಿದ್ದರು. ಆದರೆ ತಾವು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ನಾನು ಕ್ರೀಸಿನಲ್ಲಿ ಇರುವ ಹೊತ್ತಿನ ವರೆಗೂ ತಂಡದ ಬಗ್ಗೆ ಯೋಚಿಸುತ್ತೇನೆ. ನಾನು ಸ್ವಾರ್ಥಿಯಲ್ಲ. ಹಾಗಾಗಿ ಶತಕದ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ತಂಡವೀಗ ಸನ್ಮಾನಜನಕ ಹಂತವನ್ನು ತಲುಪಿರುವುದೇ ಸಂತಸದಾಯಕವಾಗಿದೆ ಎಂದರು. ಮಾಧ್ಯಮ ಮಿತ್ರರಿಂದ ತಮಗೆ ಇಂತಹದೊಂದು ಪ್ರಶ್ನೆ ಎದುರಾಗಲಿದೆ ಎಂಬುದು ತಿಳಿದಿತ್ತು ಎಂದು ನಗು ಮುಖದಿಂದಲೇ ಉತ್ತರಿಸಿದ ರಹಾನೆ, ತಂಡಕ್ಕಾಗಿ ಕೊಡುಗೆ ನೀಡುವುದು ಮುಖ್ಯ. ಹೌದು, ಶತಕದ ಬಗ್ಗೆ ಯೋಚನೆಯಿತ್ತು. ಆದರೆ ಅದಕ್ಕಿಂತಲೂ ಮಿಗಿಲಾಗಿ ತಂಡವು ಸಂಕಷ್ಟದಲ್ಲಿತ್ತು. ಹಾಗಾಗಿ ಶತಕದ ಬಗ್ಗೆಚಿಂತೆ ಕಾಡುತ್ತಿಲ್ಲ. ಅದು ಆಟೋಮ್ಯಾಟಿಕ್ ಆಗಿ ಬರಲಿದೆ ಎಂದು 31ರ ಹರೆಯದ ರಹಾನೆ ಸೇರಿಸಿದರು. ಅದೇ ಹೊತ್ತಿಗೆ ಏಕದಿನ ವಿಶ್ವಕಪ್ ವೇಳೆ ಇಂಗ್ಲಿಷ್ ಕೌಂಟಿಯಲ್ಲಿ ಆಡಿರುವುದು ತಮ್ಮ ಬ್ಯಾಟಿಂಗ್‌ನಲ್ಲಿಸುಧಾರಣೆ ತರುವಲ್ಲಿ ನೆರವಾಗಿದೆ ಎಂದರು. ಹಾಗೆಯೇ ಕೆಎಲ್ ರಾಹುಲ್ ಜತೆಗಿನ ಜತೆಯಾಟವು ತಂಡವನ್ನು ಅಪಾಯದಿಂದ ಪಾರು ಮಾಡಲು ನಿರ್ಣಾಯಕವೆನಿಸಿತು ಎಂದು ಸೇರಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2zjFsdO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...