‘ಭಾರತ ರಾಜ್ಯಗಳ ಒಕ್ಕೂಟ, ರಾಷ್ಟ್ರದ ಪರಿಕಲ್ಪನೆ ಇಲ್ಲ’ ಎಂದ ರಾಗಾ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾದ ಬಿಜೆಪಿ

ಹೊಸದಿಲ್ಲಿ: ಸಂಸತ್‌ನ ಬಜೆಟ್‌ ಅಧಿವೇಶನದಲ್ಲಿ ಕಾಂಗ್ರೆಸ್‌ ನಾಯಕ ಬುಧವಾರ ಭಾಷಣ ಮಾಡಿದ್ದರು. ಈ ಸುದೀರ್ಘ ಭಾಷಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ತನ್ನ ಭಾಷಣದಲ್ಲಿ ದೇಶದ ಭದ್ರತೆ, ರಾಜ್ಯಗಳ ಹಕ್ಕುಗಳು, ಜನರ ಸಮಸ್ಯೆ, ಕೇಂದ್ರದ ವೈಫಲ್ಯ ಸೇರಿದಂತೆ ಅನೇಕ ವಿಚಾರಗಳ ಕುರಿತು ಮಾತನಾಡಿ ಕೆಲವೊಂದು ಭಾವನಾತ್ಮಕ ಸಂಗತಿಗಳನ್ನೂ ಪ್ರಸ್ತಾಪಿಸಿದ್ದರು. ಇದೀಗ ರಾಹುಲ್‌ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಬಿಜೆಪಿ ಮುಂದಾಗಿದೆ.! ತಮ್ಮ ಭಾಷಣದ ಮೂಲಕ ದೇಶದ ಜನರನ್ನು ತಪ್ಪು ದಾರಿಯಲ್ಲಿ ನಡೆಯಲು ಪ್ರಚೋದಿಸಿದ್ದಾರೆ ಎಂಬ ಆಪಾದನೆ ಹೊರಿಸಿ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಗುರುವಾರ ಹಕ್ಕುಚ್ಯುತಿ ನಿಲುವಳಿ ಮಂಡಿಸಲು ನೋಟಿಸ್‌ ನೀಡಿದ್ದಾರೆ. ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಕೂಡ ಕಾಂಗ್ರೆಸ್‌ ನಾಯಕನ ಮಾತಿನ ಧಾಟಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಬುಧವಾರ ಮಾತನಾಡಿದ್ದ ರಾಹುಲ್‌, ಮೋದಿ ಸರಕಾರದ ಕಾರ್ಯಶೈಲಿ ವಿರುದ್ಧ ಕುಹಕವಾಡಿದ್ದರು. ‘ಭಾರತವು ರಾಜ್ಯಗಳ ಒಕ್ಕೂಟ. ಈ ಒಕ್ಕೂಟ ವ್ಯವಸ್ಥೆ ಬಗ್ಗೆಯೇ ಸಂವಿಧಾನದಲ್ಲಿ ಉಲ್ಲೇಖ ಇದೆ. ‘ರಾಷ್ಟ್ರ’ ಎನ್ನುವ ಪರಿಕಲ್ಪನೆ ಬಗ್ಗೆ ಇಲ್ಲ. ಭಾರತದಲ್ಲಿ ಒಬ್ಬ ವ್ಯಕ್ತಿ ರಾಜ್ಯಗಳ ಜನತೆಯ ಮೇಲೆ ಆಡಳಿತ ನಡೆಸಲು ಸಾಧ್ಯವಿಲ್ಲ. ಭಿನ್ನ ಭಾಷೆಗಳು ಹಾಗೂ ಸಂಸ್ಕೃತಿಯ ವೈವಿಧ್ಯತೆಯನ್ನು ದಮನಿಸಲು ಆಗದು. ಇದೊಂದು ಸಹಭಾಗಿತ್ವವೇ ಹೊರತು, ಅಧಿಪತ್ಯ ಅಲ್ಲ. ಇದನ್ನೆಲ್ಲ ಮರೆತಿರುವ ಬಿಜೆಪಿ, ದಂಡ ಹಿಡಿದು ಆಡಳಿತ ಮಾಡಲು ಹೊರಟಿದೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ದುಬೆ, ‘ರಾಹುಲ್‌ ಗಾಂಧಿ ಕಟ್ಟುಕತೆಗಳನ್ನು ಸೃಷ್ಟಿ ಮಾಡುವ ನಾಯಕ. ಅವರಿಗೆ ವಾಸ್ತವ ಅರ್ಥ ಆಗುವುದೇ ಇಲ್ಲ. ಆರಾಮ ಕುರ್ಚಿಯಲ್ಲಿ ಕುಳಿತು ರಾಜಕಾರಣ ಮಾಡುವ ಸೋಗಲಾಡಿ ಮನುಷ್ಯ. ಸಂವಿಧಾನದ ಆಶಯಗಳ ಮುನ್ನುಡಿಯನ್ನೇ ಇವರು ಓದಿಲ್ಲ. ಸಂವಿಧಾನದ ಪ್ರಸ್ತಾವನೆಯು ‘ನಾವು, ಭಾರತದ ಜನರು, ಭಾರತವನ್ನು ಸಾರ್ವಭೌಮ ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣ-ರಾಜ್ಯವಾಗಿ ರೂಪಿಸಲು ನಿರ್ಧರಿಸಿದ್ದೇವೆ’ ಎಂದು ಸ್ಪಷ್ಟವಾಗಿ ಹೇಳುತ್ತದೆ. ಈ ಆಶಯದಲ್ಲಿ ಬಳಕೆಯಾಗಿರುವ ‘ಗಣರಾಜ್ಯ’ ಎನ್ನುವ ಪದ ಸ್ಪಷ್ಟವಾಗಿ ರಾಷ್ಟ್ರ ಎನ್ನುವುದನ್ನೇ ಸಂಕೇತಿಸುತ್ತದೆ. ಆದರೆ, ಕಾಂಗ್ರೆಸ್‌ನ ಘನತೆವೆತ್ತ ಸಂಸದನಿಗೆ ಇದರ ಅರ್ಥವಾಗದೇ ಇರುವುದು ದುರದೃಷ್ಟಕರ’ ಎಂದಿದ್ದಾರೆ. ‘ಕೇಂದ್ರ ಸರಕಾರದ ವಿದೇಶಾಂಗ ನೀತಿ ಸಹ ಸರಿ ಇಲ್ಲ. ಅದರ ಪರಿಣಾಮವಾಗಿ ಭಾರತದ ವಿರುದ್ಧ ಪಾಕಿಸ್ತಾನ- ಚೀನಾಗಳು ಒಂದಾಗಿವೆ’ ಎಂದೂ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ‘ರಾಹುಲ್‌ ನಿಯಂತ್ರಣ ಮೀರಿ ಮಾತಾಡಿದ್ದಾರೆ. ಪದ ಬಳಕೆಯ ಮಿತಿಗಳೇ ಅವರಿಗೆ ಅರ್ಥವಾಗಿಲ್ಲ. ಅಥವಾ ಅರ್ಥವಾಗಿದ್ದರೂ ದುರುದ್ದೇಶದ ಪಿತೂರಿ ಇರಬಹುದು. ಸಂವಿಧಾನದ ಬಗ್ಗೆ ತಪ್ಪು ಮಾಹಿತಿ ನೀಡಿ ದೇಶದ ಜನರನ್ನು ದಾರಿ ತಪ್ಪಿಸುವ ದುರುದ್ದೇಶ ಅವರ ಮಾತಿನ ಹಿಂದಿದೆ’ ಎಂದು ನಿಶಿಕಾಂತ್‌ ದುಬೆ ಹಕ್ಕುಚ್ಯುತಿ ನೋಟಿಸ್‌ನಲ್ಲಿ ದೂರಿದ್ದಾರೆ.


from India & World News in Kannada | VK Polls https://ift.tt/dmwcMh0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...