ಕಬ್ಬು ಬೆಳೆಗಾರರಿಗೆ ಕಟಾವು ಗ್ಯಾಂಗ್‌ಗಳಿಂದ ಮೋಸ; ಅನಧಿಕೃತ ವಸೂಲಿ!

ಶಿವಾನಂದ ಹಿರೇಮಠ, ಬೆಂಗಳೂರು ಬೆಂಗಳೂರು: ಕಟಾವು, ಲೋಡಿಂಗ್‌, ಸಾಗಣೆ ಮತ್ತು ಅನ್‌ಲೋಡಿಂಗ್‌ಗಾಗಿ ರೈತರು ಎರಡೆರಡು ಬಾರಿ ಬಿಲ್‌ ಪಾವತಿಸುತ್ತಿದ್ದು, ಕಾರ್ಖಾನೆಗಳಿಗೆ ಅಧಿಕೃತ ಮತ್ತು ಕಟಾವು ಗ್ಯಾಂಗ್‌ಗಳಿಗೆ(ಗುಂಪು) ಅನಧಿಕೃತವಾಗಿ ಹಣ ಪಾವತಿಸಿ ನಷ್ಟದ ಸುಳಿಗೆ ಸಿಲುಕಿದ್ದಾರೆ. ರೈತರಿಂದ ಮಾಡುವ ಗ್ಯಾಂಗ್‌ಗಳು ಹಣ ಸುಲಿಗೆ ಆರಂಭಿಸಿವೆ. ಸಕ್ಕರೆ ಕಾರ್ಖಾನೆಗಳ ಕುಮ್ಮಕ್ಕಿನಿಂದ ಕಟಾವು ಮಾಡುವ ಗ್ಯಾಂಗ್‌ಗಳು ಅನಧಿಕೃತ ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ರಾಜ್ಯ ಸರಕಾರದ ಎಚ್ಚರಿಕೆ ನೋಟಿಸ್‌ ನಡುವೆಯೂ ಸಾವಿರಾರು ರೂ. ಸುಲಿಗೆ ಮಾಡುತ್ತಿರುವ ಗ್ಯಾಂಗ್‌ಮನ್‌ಗಳ ವರ್ತನೆಯಿಂದ ರೈತರು ರೋಸಿ ಹೋಗಿದ್ದು, ಬೆಳೆದು ನಿಂತ ಕಬ್ಬು ಕಾರ್ಖಾನೆಗೆ ಸಾಗಣೆ ಆದರಾಯಿತು ಎಂಬ ಭಯದಿಂದ ಅವರು ಕೇಳಿದಷ್ಟು ಹಣ ನೀಡುತ್ತಿದ್ದಾರೆ. ಡಬಲ್‌ ಪೇಮೆಂಟ್‌ ಹೇಗೆ?ಕಬ್ಬು ಕಟಾವು ಮಾಡುವ ನುರಿತ ಗುಂಪಿನಿಂದ (ಗ್ಯಾಂಗ್‌) ಇಂತಿಷ್ಟು ಭದ್ರತಾ ಠೇವಣಿ ಇರಿಸಿಕೊಳ್ಳುವ ರಾಜ್ಯದ ಸಕ್ಕರೆ ಕಾರ್ಖಾನೆಗಳು, ತಮ್ಮ ವ್ಯಾಪ್ತಿಯ ರೈತರ ಕಬ್ಬು ಕಟಾವಿಗಾಗಿ ಇದೇ ಗುಂಪನ್ನು ಬಳಸಿಕೊಳ್ಳುತ್ತವೆ. ಕಬ್ಬು ಬೆಳೆಗಾರರ ವಲಯದಲ್ಲಿಇವರಿಗೆ ಗ್ಯಾಂಗ್‌ಗಳೆಂದು ಪದ ಬಳಸಲಾಗುತ್ತಿದೆ. ಕಟಾವು, ಲೋಡಿಂಗ್‌, ಕಬ್ಬು ಸಾಗಣೆ ಹೊರೆಯನ್ನು ವೈಯಕ್ತಿಕವಾಗಿ ಹೊರಲಾರದ ರೈತರೂ ಸಕ್ಕರೆ ಕಾರ್ಖಾನೆಗಳು ಕಳುಹಿಸಿದ ಮೂಲಕವೇ ಕಟಾವು ಮಾಡಿಸಿಕೊಳುತ್ತಾರೆ. ಅಲ್ಲದೆ, ಗ್ಯಾಂಗ್‌ಗಳಿಂದ ಠೇವಣಿ ಇಟ್ಟುಕೊಂಡಿರುವ ಕಾರ್ಖಾನೆಗಳು, ರೈತರ ಕಬ್ಬಿನ ಬಿಲ್‌ನಲ್ಲಿ ಕಟಾವಿನ ಕೂಲಿ ಕಡಿತಗೊಳಿಸಿ ಗ್ಯಾಂಗ್‌ಗಳಿಗೆ ಪಾವತಿಸುತ್ತವೆ. ಇದು ಅಧಿಕೃತ ಪಾವತಿಯಾದರೆ, ಕಟಾವಿನ ಸಂದರ್ಭದಲ್ಲೇ ಟನ್‌ ಕಬ್ಬು, ಒಂದು ಲೋಡ್‌ ಕಬ್ಬಿಗೆ ಇಂತಿಷ್ಟು ಕೂಲಿ, ಊಟ ವಸತಿ, ಸಾಗಣೆ ಎಂದು ರೈತರಿಂದ ಗ್ಯಾಂಗ್‌ಗಳು ವಸೂಲಿಗಿಳಿದಿವೆ. ಕಬ್ಬು ಒಣಗುವುದರೊಳಗಾಗಿ ಕಾರ್ಖಾನೆಗೆ ಸಾಗಿಸಬೇಕೆಂದು ಭರದಲ್ಲಿರುವ ರೈತರು ವಿಧಿಯಿಲ್ಲದೇ ಗ್ಯಾಂಗ್‌ಗಳಿಗೆ ತಲೆ ಬಾಗಬೇಕಿದೆ. ಅನಧಿಕೃತ ಪಾವತಿ ಒಂದು ಟನ್‌ ಕಬ್ಬು ಕಟಾವಿಗೆ 250 ರೂ., ಒಂದು ಲೋಡ್‌ ಕಬ್ಬು ಸಾಗಣೆಗೆ ಡ್ರೈವರ್‌ಗೆ 1000 ದಿಂದ 3000 ರೂ., ಕೂಲಿ ಪಡೆದರೂ ಊಟ, ವಸತಿ, ವಾರಕ್ಕೊಮ್ಮೆ ಮಾಂಸಾಹಾರದ ಊಟದ ವ್ಯವಸ್ಥೆಯನ್ನು ರೈತರೇ ಮಾಡಬೇಕು. ಅಧಿಕೃತ ಪಾವತಿ ರೈತರು ಪಾವತಿಸಬೇಕಿರುವ ಬಿಲ್‌ನಲ್ಲಿ ಟನ್‌ ಕಬ್ಬಿಗೆ ಸರಾಸರಿ 120 ರೂ. ಕಡಿತಗೊಳಿಸಿ ಗ್ಯಾಂಗ್‌ ಮಾಲೀಕರಿಗೆ ನೀಡಲಾಗುತ್ತದೆ. ಜತೆಗೆ ಸಾಗಣೆ ವೆಚ್ಚವೆಂದು 1 ಕಿ.ಮೀ.ಗೆ ಅಂದಾಜು 30 ರಿಂದ 50 ರೂ. ಕಡಿತಗೊಳಿಸಲಾಗುತ್ತದೆ. ಈ ವೆಚ್ಚವು ಸ್ಥಳದಿಂದ ಸ್ಥಳಕ್ಕೆ ಮತ್ತು ಕಾರ್ಖಾನೆಯಿಂದ ಕಾರ್ಖಾನೆಗೆ ವ್ಯತ್ಯಾಸವಿರುತ್ತದೆ. ಈ ಹಣವನ್ನು ನೇರವಾಗಿ ಗ್ಯಾಂಗ್‌ ಮಾಲೀಕನ ಖಾತೆಗೆ ಕಾರ್ಖಾನೆಗಳು ಜಮೆ ಮಾಡುತ್ತವೆ. ಸರಕಾರಿ ಆದೇಶಗ್ಯಾಂಗ್‌ಮನ್‌ಗಳು ಕಾರ್ಖಾನೆಯಲ್ಲಿ ಇಟ್ಟಿರುವ ಠೇವಣಿ ಹಣದಲ್ಲಿ ರೈತರಿಂದ ವಸೂಲಿ ಮಾಡಿದ ಹಣವನ್ನು ಮುರಿದುಕೊಂಡು ಪಾವತಿಸಬೇಕು ಎಂದು ಸರಕಾರ ಆದೇಶ ಹೊರಡಿಸಿದೆ. ಕಟಾವಿನ ಸಂದರ್ಭದಲ್ಲಿ ಕಾರ್ಖಾನೆ ಸಿಬ್ಬಂದಿ ಸ್ಥಳದಲ್ಲೇ ಇದ್ದು ಈ ರೀತಿಯ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸಲು ಆದೇಶದಲ್ಲಿ ಸೂಚಿಸಿದೆ. ಆದರೂ, ಇಂತಹ ಅಕ್ರಮ ಚಟುವಟಿಕೆಗೆ ಕಡಿವಾಣ ಬೀಳದೇ ಇರುವುದರಿಂದ ಸಕ್ಕರೆ ಕಾರ್ಖಾನೆ ಸಿಬ್ಬಂದಿಗಳೂ ಈ ಅಕ್ರಮದಲ್ಲಿ ಭಾಗಿ ಆಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಕಬ್ಬು ತೂಕ ಮಾಡುವ ಸಂದರ್ಭದಲ್ಲೂ ಮೋಸವಾಗುತ್ತಿದೆ. ಹೊರಗಿನ ವ್ಹೇಯಿಂಗ್‌ ಮಷಿನ್‌ಗೂ ಕಾರ್ಖಾನೆಗಳಲ್ಲಿನ ತೂಕದ ಯಂತ್ರಕ್ಕೂ 1 ರಿಂದ 2 ಟನ್‌ವರೆಗೂ ವ್ಯತ್ಯಾಸವಾಗುತ್ತಿದ್ದು, ರೈತರಿಗೆ ಟನ್‌ ತೂಕದಲ್ಲಿ ಕೊರತೆಯಾಗಿ ಬಿಲ್‌ ಕಡಿಮೆಯಾಗುತ್ತಿದೆ. ಕುರುಬೂರು ಶಾಂತಕುಮಾರ್‌, ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕಟಾವು ಗುಂಪಿಗೆ ರೈತರಿಂದ ಹಣ ವಸೂಲಿ ಮಾಡುವ ಅಧಿಕಾರವಿಲ್ಲ. ಯಾವುದಾರೂ ಗ್ಯಾಂಗ್‌ ಈ ರೀತಿಯ ಅಕ್ರಮ ನಡೆಸುತ್ತಿದ್ದರೆ ಬರವಣಿಗೆ ಮೂಲಕ ದೂರು ದಾಖಲಿಸಲಿ. ಶಿವಾನಂದ ಕಲಕೇರಿ, ಆಯುಕ್ತರು, ಕಬ್ಬು ಮತ್ತು ಸಕ್ಕರೆ ಮಂಡಳಿ


from India & World News in Kannada | VK Polls https://ift.tt/3mDTqAP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...