ಬೆಳಗಾವಿಯಲ್ಲಿ ಹಬ್ಬದ ಖರೀದಿ, ಸಿದ್ಧತೆ ಭರ್ಜರಿ; ಮನೆ- ಮಾರುಕಟ್ಟೆಯಲ್ಲಿ ದೀಪಾವಳಿ ಸಂಭ್ರಮ!

ಬೆಳಗಾವಿ: ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಜೋರಾಗಿದ್ದು, ಮನೆ ಮನಗಳಲ್ಲಿ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೋವಿಡ್‌ ಕಾರಣದಿಂದ ಎರಡು ವರ್ಷಗಳ ಕಾಲ ಸಾಂಪ್ರದಾಯಿಕ ಹಬ್ಬದ ಆಚರಣೆಯಿಂದ ದೂರ ಉಳಿದಿದ್ದ ಜನರು ಈಗ ಉತ್ಸಾಹ ತೋರುತ್ತಿದ್ದಾರೆ. ಶಾಲೆ-ಕಾಲೇಜು ಆರಂಭಗೊಂಡಿರುವುದರಿಂದ ಮಕ್ಕಳಲ್ಲೂ ಹುರುಪು ಕಂಡು ಬರುತ್ತಿದ್ದು ಹೊಸ ಬಟ್ಟೆ, ವಾಹನ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಬೆಳಗಾವಿ ನಗರದ ಗಣಪತಿ ಗಲ್ಲಿ, ಖಡೇಬಜಾರ್‌, ಪಾಂಗುಳ ಗಲ್ಲಿ, ಕಿರ್ಲೋಸ್ಕರ್‌ ರಸ್ತೆ, ಶನಿವಾರ ಕೂಟ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿಕಳೆದೆರಡು ದಿನಗಳಿಂದ ಹಬ್ಬದ ಖರೀದಿಗಾಗಿ ಭರ್ಜರಿಯಾಗಿ ನಡೆದಿದೆ. ಅಂಗಡಿ ಮುಂಗಟ್ಟುಗಳನ್ನು ಅಲಂಕರಿಸಿರುವುದರಿಂದ ಮಾರುಕಟ್ಟೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಚಿನ್ನ-ಕಾರಿಗೆ ಬೇಡಿಕೆ ಚಿನ್ನ, ಕಾರು, ಬೈಕು, ಇಲೆಕ್ಟ್ರಾನಿಕ್ಸ್‌ ವಸ್ತುಗಳ ಖರೀದಿಗೆ ಜನ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಅಟೋಮೊಬೈಲ್‌ ಕ್ಷೇತ್ರ ಸೇರಿದಂತೆ ಒಟ್ಟಾರೆ ಮಾರುಕಟ್ಟೆಗೆ ಹೊಸ ಚೈತನ್ಯ ಬಂದಾಗಿದೆ. ಕಾರಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆಯಾದರೂ ಬೇಡಿಕೆಗೆ ತಕ್ಕಂತೆ ಕಾರುಗಳು ಸಿಗುತ್ತಿಲ್ಲ. ಹೊಸ ತಂತ್ರಜ್ಞಾನ ಅಳವಡಿಕೆ ಕಾರಣದಿಂದ ಹೊಸ ಕಾರುಗಳು ಗ್ರಾಹಕರಿಗೆ ಸಿಗುವುದು ವಿಳಂಬವಾಗುತ್ತಿದೆ. ಚಿನ್ನದ ಖರೀದಿಗೆ ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಕಳೆದೊಂದು ವಾರದಿಂದ ಚಿನ್ನದ ಅಂಗಡಿಗಳಲ್ಲಿಗ್ರಾಹಕರ ದಟ್ಟಣೆ ಕಡಿಮೆಯಾಗುತ್ತಿಲ್ಲ. ಹೊಸ ಬಟ್ಟೆ ಖರೀದಿಯೂ ಜೋರಾಗಿದೆ. ಆದರೆ, ಹಲವು ಕಡೆ ಬಹಳಷ್ಟು ಜನರಿಗೆ ತಮ್ಮ ಸೈಜಿನ ಬಟ್ಟೆಗಳು ಸಿಗುತ್ತಿಲ್ಲ. ಟಿವಿ, ಫ್ರಿಜ್‌, ವಾಶಿಂಗ್‌ ಮಶಿನ್‌ ಸೇರಿದಂತೆ ಇಲೆಕ್ಟ್ರಾನಿಕ್ಸ್‌ ವಸ್ತುಗಳ ಖರೀದಿಯಲ್ಲೂ ಕೋವಿಡ್‌ ಮುಂಚಿನ ವಹಿವಾಟು ಕಂಡು ಬರಲಾರಂಭಿಸಿದೆ ಎನ್ನುತ್ತಾರೆ ವ್ಯಾಪಾರಿಗಳು. ಬೆಲೆ ಏರಿಕೆ ಬಿಸಿದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಇಂಧನ ಬೆಲೆ ಏರಿಕೆ ತರಕಾರಿ, ಹೂವು-ಹಣ್ಣುಗಳ ಬೆಲೆ ಮೇಲೂ ಪರಿಣಾಮ ಬೀರಿದೆ. ಆದರೂ ಖರೀದಿ ಭರಾಟೆ ಕಡಿಮೆ ಏನಿಲ್ಲ, ಎಪಿಎಂಸಿ ಹಾಗೂ ಸಗಟು ಹೂವಿನ ಮಾರುಕಟ್ಟೆ ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ದೀಪಾವಳಿ ಹಬ್ಬಕ್ಕೆ ನಾನಾ ತಿಂಡಿ ತಿನಿಸು ತಯಾರಿಸಲಾಗುತ್ತದೆ. ಹಲವರು ತಿಂಡಿ ತಿನಿಸು ತಯಾರಿಸಲು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರೆ, ಇನ್ನು ಕೆಲವರು ಅಂಗಡಿಯಲ್ಲಿ ಸಿಗುವ ತಿಂಡಿ ಖರೀದಿಸುತ್ತಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳಿಂದಲೂ ಅಲ್ಲಲ್ಲಿ ತಿನಿಸುಗಳ ಮಾರಾಟ ಮಾಡಲಾಗುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಸಾಂಪ್ರದಾಯಿಕ ವಸ್ತುಗಳ ಮಾರಾಟ ಹೆಚ್ಚಾಗಿ ಕಂಡು ಬರುತ್ತಿದೆ. ದೀಪಾವಳಿ ಮೆರುಗು ಹೆಚ್ಚಿಸುವ ದೀಪಗಳು ಮತ್ತು ನಾನಾ ಬಗೆಯ ಆಕಾಶ ಬುಟ್ಟಿಗಳು ಮಾರುಕಟ್ಟೆಗೆ ಬಂದಿವೆ. ಸಂಭ್ರಮದಲ್ಲೂ ಎಚ್ಚರಿಕೆ ಇರಲಿ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸದ್ಯಕ್ಕೆ ನಿಯಂತ್ರಣದಲ್ಲಿ ಇದ್ದರೂ ಕೋವಿಡ್‌ ಮೂರನೆ ಅಲೆಯ ಆತಂಕ ಇದ್ದೇ ಇದೆ. ಹಾಗಾಗಿ ಸಾರ್ವಜನಿಕರು ಮಾಸ್ಕ್‌ ಧರಿಸುವುದನ್ನು ಮರೆಯಬಾರದು. ಆಗಾಗ ಕೈತೊಳೆದುಕೊಳ್ಳುವುದು ಮತ್ತು ಸಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ನಿರಾಸಕ್ತಿ ತೋರುವುದು ಬೇಡ. ಜತೆಗೆ ಹವಾಮಾನ ವೈಪರೀತ್ಯದಿಂದ ಸಾಮಾನ್ಯವಾಗಿ ಕಂಡುಬರುವ ಶೀತ, ಕೆಮ್ಮು, ಜ್ವರ ಮತ್ತು ಮೈಕೈ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಆರೋಗ್ಯದ ಕಾಳಜಿ ವಹಿಸಲೇಬೇಕಿದೆ. ಖರೀದಿ ಸಮಯ ಹೆಚ್ಚಳ ಬೆಳಗಾವಿಯಲ್ಲಿ ವ್ಯಾಪಾರ-ವಹಿವಾಟಿಗೆ ನಿಗದಿಪಡಿಸಲಾಗಿದ್ದ ಸಮಯವನ್ನು ಜಿಲ್ಲಾಡಳಿತ ಹೆಚ್ಚಿಸಿದೆ. ಈ ಮೊದಲು ರಾತ್ರಿ 11 ಗಂಟೆವರೆಗೆ ಇದ್ದ ವ್ಯಾಪಾರ-ವಹಿವಾಟು ಸಮಯವನ್ನು ಅರ್ಧ ಗಂಟೆ ಹೆಚ್ಚಿಸುವಂತೆ ಸ್ಥಳೀಯ ವ್ಯಾಪಾರಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ವ್ಯಾಪಾರ ವಹಿವಾಟು ಸಮಯವನ್ನು 11.30 ಗಂಟೆ ವರೆಗೆ ವಿಸ್ತರಣೆ ಮಾಡಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ. ಕೋವಿಡ್‌ ಕಾರಣದಿಂದ ಭಾರೀ ಪೆಟ್ಟು ತಿಂದಿದ್ದ ಅಟೋಮೊಬೈಲ್‌ ಕ್ಷೇತ್ರದಲ್ಲಿ ಚೇತರಿಕೆ ಕಂಡು ಬರುತ್ತಿರುವುದು ಹೊಸ ಉತ್ಸಾಹ ಮೂಡಿಸಿದೆ. ಬೈಕು ಹಾಗೂ ಕಾರು ಖರೀದಿಗೆ ಹೆಚ್ಚಿನ ಗ್ರಾಹಕರು ಒಲವು ತೋರುತ್ತಿದ್ದಾರೆ. ಕಿರಣ ಅಗಡಿಎಂಡಿ, ನಾಗಶಾಂತಿ ಅಟೊಮೊಬೈಲ್ಸ್‌


from India & World News in Kannada | VK Polls https://ift.tt/3BFJivC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...