ಭಾರತ ಟಾಸ್‌ ಗೆದ್ದಿದ್ದರೆ ಟೂರ್ನಿಯ ಚಿತ್ರಣ ಬೇರೆಯೇ ಇರುತ್ತಿತ್ತೆಂದ ಪಣೇಸರ್!

ಹೊಸದಿಲ್ಲಿ: ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಹನ್ನೆಲೆಯಲ್ಲಿ ಕೊಹ್ಲಿ ಪಡೆ ಸಾಕಷ್ಟ ಟೀಕೆಗಳಿಗೆ ಗುರಿಯಾಗಿದೆ. ಇದರ ನಡುವೆ ಇಂಗ್ಲೆಂಡ್‌ ತಂಡದ ಮಾಜಿ ಸ್ಪಿನ್ನರ್‌ ಟೀಮ್‌ ಇಂಡಿಯಾ ಹಾಗೂ ನಾಯಕ ವಿರಾಟ್‌ ಕೊಹ್ಲಿಯನ್ನು ಬೆಂಬಲಿಸಿದ್ದಾರೆ. ಈಗಾಗಲೇ ಆರಂಭಿಕ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ತಂಡಕ್ಕೆ ಸೆಮಿಫೈನಲ್‌ ಹಾದಿ ಬಹುತೇಕ ಬಂದ್‌ ಆಗಿದೆ. ಇದರ ಹೊರತಾಗಿಯೂ ಅಂಕಿಅಂಶಗಳ ಆಧಾರದ ಮೇಲೆ ಕೊಹ್ಲಿ ಪಡೆ ನಾಕೌಟ್‌ ಹಂತ ತಲುಪಲು ಇನ್ನೂ ಒಂದು ಕಟ್ಟ ಕಡೆಯ ಅವಕಾಶವಿದೆ. ಅಂದಹಾಗೆ ನಾಯಕ , ಕೋಚ್‌ ರವಿಶಾಸ್ತ್ರಿ ಮತ್ತು ಮೆಂಟರ್‌ ಎಂಎಸ್‌ ಧೋನಿ ಒಂದು ಕಡೆ ಕುಳಿತು ಸಂಗತಿಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಪಣೇಸರ್‌ ಸಲಹೆ ನೀಡಿದ್ದಾರೆ. ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಗೆದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಣಕ್ಕೆ ಇಳಿದ ಭಾರತ ತಂಡ, ತನ್ನ ಆರಂಭಿಕ ಪಂದ್ಯದಲ್ಲಿಯೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಬಳಿಕ ನ್ಯೂಜಿಲೆಂಡ್‌ ಕೂಡ 8 ವಿಕೆಟ್‌ಗಳಿಂದ ಪರಾಭವಗೊಂಡಿತ್ತು. ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾಂಟಿ ಪಣೇಸರ್‌, ಕೆಲ ಸಂಗತಿಗಳು ನಡೆದರೆ ಭಾರತ ತಂಡ ಈಗಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಭಾರತ ಈಗಲೂ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಆದರೆ, ವಿರಾಟ್‌ ಕೊಹ್ಲಿ ಪಡೆಗೆ ಅನುಕೂಲವಾಗುವಂಥ ಸಂಗತಿಗಳು ನಡೆಯಬೇಕಷ್ಟೆ. ಇದರ ಜೊತೆಗೆ ವಿರಾಟ್‌ ಕೊಹ್ಲಿ, ರವಿ ಶಾಸ್ತ್ರಿ ಹಾಗೂ ಎಂಎಸ್ ಧೋನಿ ಒಂದು ಕಡೆ ಕುಳಿತುಕೊಂಡು ಮುಂದೆ ಮಾಡಬಹುದಾದ ಸಂಗತಿಗಳ ಬಗ್ಗೆ ಚರ್ಚೆ ನಡೆಸಬೇಕು ಹಾಗೂ ತಂಡ ಕಮ್‌ಬ್ಯಾಕ್‌ ಮಾಡಲು ತಂತ್ರ ರೂಪಿಸಬೇಕು," ಎಂದು ಪಣೇಸರ್‌ ತಿಳಿಸಿದ್ದಾರೆ. ವಿರಾಟ್‌ ಕೊಹ್ಲಿ ವಿರುದ್ಧದ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಪಣೇಸರ್, "ವಿರಾಟ್‌ ಕೊಹ್ಲಿ ಅದ್ಭುತ ಬ್ಯಾಟ್ಸ್‌ಮನ್‌ ಹಾಗೂ ಉತ್ತಮ ರನ್‌ ಚೇಸರ್‌ ಎಂಬುದನ್ನು ಜನರು ನೆನಪಿಸಿಕೊಳ್ಳಬೇಕು. ನಾಯಕನಾಗಿ ಕಠಿಣ ಸನ್ನಿವೇಶದಿಂದ ತಂಡವನ್ನು ಪಾರು ಮಾಡುವಲ್ಲಿ ವಿಫಲರಾಗುತ್ತಿರುವ ಹಿನ್ನೆಲೆಯಲ್ಲಿ ಕೊಹ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಅಂದಹಾಗೆ ಭಾರತ ಇನ್ನುಳಿದ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆಯುವ ಅಗತ್ಯವಿದೆ," ಎಂದರು. ಇಂದು(ಬುಧವಾರ) ಭಾರತ ತಂಡ ಅಬು ಧಾಬಿಯಲ್ಲಿ ಅಫ್ಗಾನಿಸ್ತಾನ ವಿರುದ್ಧ ಸೆಣಸಲಿದ್ದು, ನಂತರದ ಪಂದ್ಯಗಳಲ್ಲಿ ಕ್ರಮವಾಗಿ ಸ್ಕಾಟ್ಲೆಂಡ್‌ ಮತ್ತು ನಮೀಬಿಯಾ ವಿರುದ್ಧ ಕಾದಾಟ ನಡೆಸಲಿದೆ. ಅಂದಹಾಗೆ, ನ್ಯೂಜಿಲೆಂಡ್‌ ತಂಡ ಕೂಡ ಇನ್ನೂ ಮೂರು ಪಂದ್ಯಗಳಿದ್ದು, ಇದರಲ್ಲಿ ಒಂದೇ ಒಂದು ಪಂದ್ಯದಲ್ಲಿ ಕಿವೀಸ್‌ ಸೋತರೂ ಭಾರತಕ್ಕೆ ಅವಕಾಶದ ಬಾಗಿಲು ತೆರೆದುಕೊಳ್ಳಲಿದೆ. ಭಾರತ ಟಾಸ್‌ ಗೆದ್ದಿದ್ದರೆ ಫಲಿತಾಂಶ ವಿಭಿನ್ನವಾಗಿರುತ್ತಿತ್ತು: ಪಣೇಸರ್‌ ಭಾರತ ತಂಡದ ಆರಂಭಿಕ ಎರಡು ಪಂದ್ಯಗಳಲ್ಲಿನ ವೈಫಲ್ಯಕ್ಕೆ ಟಾಸ್‌ ಕೂಡ ಪ್ರಮುಖ ಕಾರಣ ಎಂದು ಮಾಂಟಿ ಪಣೇಸರ್‌ ಹೇಳಿದ್ದಾರೆ. ಒಂದು ವೇಳೆ ಭಾರತ ತಂಡ ಒಂದು ಪಂದ್ಯದಲ್ಲಿ ಟಾಸ್‌ ಗೆದ್ದಿದ್ದರೆ ಸಂಗತಿಗಳು ವಿಭಿನ್ನವಾಗಿರುತ್ತಿದ್ದವು ಎಂದಿದ್ದಾರೆ. "ಈ ಟೂರ್ನಿಯಲ್ಲಿ ಟಾಸ್‌ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದೆ. ಯುಎಇಯಲ್ಲಿ ಟಾಸ್‌ ಗೆದ್ದ ತಂಡಗಳು ಪಂದ್ಯದಲ್ಲಿ ಒಂದು ಕೈ ಮೇಲುಗೈ ಸಾಧಿಸುತ್ತವೆ. ಒಂದು ವೇಳೆ ಭಾರತ ತಂಡ ಟಾಸ್‌ ಗೆದ್ದಿದ್ದರೆ, ನಿಜಕ್ಕೂ ಟೂರ್ನಿಯ ಚಿತ್ರಣ ವಿಭಿನ್ನವಾಗಿರುತ್ತಿತ್ತು," ಎಂದು ಇಂಗ್ಲೆಂಡ್‌ ಮಾಜಿ ಸ್ಪಿನ್ನರ್‌ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jZBAX6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...