ಆರ್‌ಟಿಇ ವಿದ್ಯಾರ್ಥಿಗಳಿಗೂ ಶುಲ್ಕದ ಬರೆ; ಪೋಷಕರ ಭಯ ಭೀತಿಯೇ ಖಾಸಗಿ ಶಾಲೆಗಳಿಗೆ ವರದಾನ!

ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರಿಗೆ ಶುಲ್ಕದ ಹೊರೆ ಸಾಮಾನ್ಯ ಎನ್ನುವಂತಾಗಿದೆ. ಶೇ.25ರ ಪ್ರಮಾಣದಲ್ಲಿ ಖಾಸಗಿ ವಲಯದಲ್ಲೂ ಶುಲ್ಕ ರಹಿತ ಶಿಕ್ಷಣ ನೀಡಬೇಕೆನ್ನುವ ನಿಯಮವಿದ್ದರೂ ಅಡಿಯಲ್ಲಿ ದಾಖಲಾತಿ ಪಡೆದ ಮಕ್ಕಳಿಂದ ಖಾಸಗಿ ಶಾಲೆಗಳು ಅನಧಿಕೃತವಾಗಿ ಸಮವಸ್ತ್ರ, ಪುಸ್ತಕ, ನಿರ್ವಹಣೆ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಶುಲ್ಕ ಕೇಳಿದ ಶಾಲೆಗಳ ಬಗ್ಗೆ ದೂರು ನೀಡಿದರೆ ವಿದ್ಯಾರ್ಥಿಗಳನ್ನು ತರಗತಿಗಳಲ್ಲಿ ಟಾರ್ಗೆಟ್‌ ಮಾಡಲಾಗುತ್ತದೆ ಎನ್ನುವ ಆತಂಕದಿಂದ ಪೋಷಕರು ಇಕ್ಕಟ್ಟಿಗೆ ಸಿಲುಕಿದ್ದು, ಆಡಳಿತ ಮಂಡಳಿ ಕೇಳಿದ ಶುಲ್ಕದಲ್ಲಿ ರಿಯಾಯಿತಿ ಪಡೆದು ಪಾವತಿ ಮಾಡಿ ಮೌನಕ್ಕೆ ಶರಣಾಗುತ್ತಿದ್ದಾರೆ. ಈ ದುಸ್ಥಿತಿಯಿಂದಾಗಿ ಬಡವರ ಮಕ್ಕಳು ಆರ್‌ಟಿಇ ಅಡಿಯಲ್ಲು ಶುಲ್ಕ ನೀಡಿ ಶಿಕ್ಷಣ ಪಡೆಯುವಂತಾಗಿದೆ. ಒಂದೆಡೆ ಪೋಷಕರಿಂದ ಶುಲ್ಕ ಪಡೆಯುವ ಖಾಸಗಿ ಶಾಲೆಗಳು ಯಾವುದೇ ರಸೀದಿಯನ್ನು ನೀಡದೆ ತಪ್ಪಿಸಿಕೊಳ್ಳುತ್ತಿದ್ದು, ಆ ಬಳಿಕ ಸರಕಾರದ ಅನುದಾನವನ್ನು ಪಡೆಯುತ್ತಿವೆ. ಎರಡೂ ಕಡೆ ಲಾಭವನ್ನು ದೋಚುತ್ತಿವೆ. ಕೋರ್ಟ್‌ ಮೊರೆ'ಬೆಂಗಳೂರಿನ ಗೌರಿಪಾಳ್ಯ, ಚಂದ್ರಾಲೇಔಟ್‌, ಯಲಹಂಕ ಮತ್ತಿತರ ಪ್ರದೇಶಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಕೆಲ ಖಾಸಗಿ ಶಾಲೆಗಳು ಆರ್‌ಟಿಇ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹ ಮಾಡಿರುವ ಬಗ್ಗೆ ಕೆಲ ಪೋಷಕರಿಂದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಅಲ್ಲದೆ ಆರ್‌ಟಿಇ ಕಾಯ್ದೆ ಬಲಪಡಿಸುವುದು, 8ನೇ ತರಗತಿ ಬಳಿಕ ಮಕ್ಕಳ ಸ್ಥಿತಿ, ಪ್ರಮಾಣ ಪತ್ರ ವಿತರಣೆ, ಕೈಗಾರಿಕೆಗಳ ರೀತಿ ಖಾಸಗಿ ಶಾಲೆಗಳಿಂದಲೂ ಸಿಎಸ್‌ಆರ್‌ ನಿಧಿಯಡಿ ಉಚಿತ ಶಿಕ್ಷಣಕ್ಕೆ ಅವಕಾಶ ಸೇರಿದಂತೆ ನಾನಾ ಅಂಶಗಳನ್ನು ಮುಂದಿಟ್ಟುಕೊಂಡು ಕೋರ್ಟ್‌ ಮೊರೆ ಹೋಗಲು ತೀರ್ಮಾನಿಸಲಾಗಿದೆ' ಎಂದು ಆರ್‌ಟಿಇ ಕಾರ್ಯಪಡೆ ತಿಳಿಸಿದೆ. ಆರ್‌ಟಿಇ ಕಾರ್ಯಪಡೆ ವಾದ
  • ಖಾಸಗಿ ಶಾಲೆಗಳ ಶುಲ್ಕದಾಹಕ್ಕೆ ಮೂಗುದಾರ ಹಾಕಬೇಕು
  • ಆರ್‌ಟಿಇ ಮಕ್ಕಳನ್ನು ಪ್ರತ್ಯೇಕಗೊಳಿಸುವುದಕ್ಕೆ ಕಡಿವಾಣ ಅಗತ್ಯ
  • ಅರ್ಥ ಕಳೆದುಕೊಳ್ಳುತ್ತಿರುವ ಆರ್‌ಟಿಇ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು.
  • ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ನೋಡಿಕೊಳ್ಳಲು ನಿಗಾ ಕಾರ್ಯಪಡೆ ರಚನೆ ಅಗತ್ಯ
ಖಾಸಗಿ ವಲಯದ ವಾದ
  • ಕಳೆದ ವರ್ಷದಲ್ಲಿ ಬಾಕಿ ಉಳಿದ 250ಕೋಟಿಯಷ್ಟು ಆರ್‌ಟಿಇ ನಿಧಿ ಶೀಘ್ರ ಬಿಡುಗಡೆಗೊಳಿಸಿ.
  • ಸರಕಾರ ಆರ್‌ಟಿಇ ಮಕ್ಕಳಿಗೆ ವಾರ್ಷಿಕ 16 ಸಾವಿರ ರೂ. ನಿಗದಿಪಡಿಸಿದೆ
  • ಈ ಮೊತ್ತದಿಂದ ಶೇ.25ರಷ್ಟು ಮಕ್ಕಳಿಗೆ ಸೌಕರ್ಯ ಒದಗಿಸುವುದು ಕಷ್ಟ
  • ಆಯಾ ಶಾಲೆಯ ಗುಣಮಟ್ಟ, ಸೌಕರ್ಯಕ್ಕನುಗುಣವಾದ ಅನುದಾನ ಒದಗಿಸಬೇಕು
  • ಶೇ.25ರಷ್ಟು ಆರ್‌ಟಿಇ ಮಕ್ಕಳ ಶುಲ್ಕವನ್ನು ಉಳಿದವರಿಂದ ಸಂಗ್ರಹಿಸಲಾದರು ಅವಕಾಶ ನೀಡಬೇಕು.
ಆರ್‌ಟಿಇ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕಾದದ್ದು ಖಾಸಗಿ ಶಾಲೆಗಳ ಕರ್ತವ್ಯ. ಈ ನಿಯಮ ಉಲ್ಲಂಘಿಸಿದ ಶಾಲೆಗಳ ದೂರುಗಳನ್ನಾಧರಿಸಿ ಸರಕಾರ ಕ್ರಮ ಕೈಗೊಳ್ಳಲಿ. ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘಟನೆ ರಾಜ್ಯದಲ್ಲಿ ಶೇ.90ರಷ್ಟು ಖಾಸಗಿ ಶಾಲೆಗಳು ಆರ್‌ಟಿಇ ಅಡಿ ದಾಖಲಾದ ಮಕ್ಕಳ ಪೋಷಕರಿಂದ ಸಮವಸ್ತ್ರ, ಪುಸ್ತಕ ಸೇರಿದಂತೆ ನಾನಾ ನೆಪದಲ್ಲಿ ಪೂರ್ಣ ಶುಲ್ಕ ಸಂಗ್ರಕ್ಕಿಳಿದಿದ್ದು, ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಲಾಗಿದೆ. ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ನಾಗಸಿಂಹ ಜಿ. ರಾವ್‌, ಸದಸ್ಯರು, ಆರ್‌ಟಿಇ ಕಾರ್ಯಪಡೆ ಆರ್‌ಟಿಇ ಮಕ್ಕಳಿಂದ ಶುಲ್ಕ ಸಂಗ್ರಹಿಸಲಾಗುತ್ತಿರುವ ಶಾಲೆಗಳ ವಿವರಗಳನ್ನು ಕಾರ್ಯಪಡೆ ಸದಸ್ಯರು ನೀಡಿದರೆ, ಖಚಿತವಾಗಿ ಕ್ರಮ ಜರುಗಿಸಲಾಗುತ್ತದೆ. ಬಿ.ಸಿ.ನಾಗೇಶ್‌, ಶಿಕ್ಷಣ ಸಚಿವರು ಶೀಘ್ರದಲ್ಲೇ ಜಿಲ್ಲಾವಾರು ಸಭೆಗಳನ್ನು ನಡೆಸಲಿದ್ದು, ಪೋಷಕರಿಂದ ಶಾಲೆಗಳ ಸಮಸ್ಯೆಗಳ ಕುರಿತ ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ. ಡಾ.ಆಂತೋನಿ ಸಬಾಸ್ಟೀನ್‌, ಅಧ್ಯಕ್ಷರು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ


from India & World News in Kannada | VK Polls https://ift.tt/3BRNOYh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...