: ಈ ಉಪ ಚುನಾವಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಾತ್ರವಲ್ಲ, ಇಡೀ ಬಿಜೆಪಿಗೆ ಮುಖಭಂಗ ಎಂದು ಕೆಪಿಸಿಸಿ ಅಧ್ಯಕ್ಷ ಬಣ್ಣಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರವಾದ ಹಾನಗಲ್ನಲ್ಲೇ ಸೋಲುಂಡಿರೋದು ಕಾಂಗ್ರೆಸ್ಗೆ ವರವಾಗಿದೆ. ಜನ ರಾಜ್ಯದಲ್ಲಿ ಬದಲಾವಣೆ ಬಯಸಿದ್ದಾರೆ ಎಂದು ಪ್ರತಿಪಾದಿಸಿದ ಡಿಕೆಶಿ, ಸಿಂದಗಿಯಲ್ಲಿ ಜೆಡಿಎಸ್ ಸೀಟು ಬಿಜೆಪಿ ಪಾಲಾಗಿದೆ. ಇನ್ನು ಹಾನಗಲ್ನಲ್ಲಿ ಬಿಜೆಪಿ ಸೀಟು ಕಾಂಗ್ರೆಸ್ ಪಡೆದಿದೆ. ಈ ಮೂಲಕ ಇಡೀ ದೇಶಕ್ಕೆ ಫಲಿತಾಂಶವು ಸಂದೇಶವೊಂದನ್ನು ನೀಡಿದೆ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಬೈ ಎಲೆಕ್ಷನ್ ಚಾಳಿ ತಪ್ಪಿಸಬೇಕಿದೆ ಎಂದು ಅಭಿಪ್ರಾಯಪಟ್ಟ ಡಿಕೆಶಿ, ಮತದಾರ ಕಾಂಗ್ರೆಸ್ ಕಡೆ ನೋಡ್ತಿದಾರೆ. ಹೀಗಾಗಿ ನಾವು ಮತದಾರರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡ್ತೇವೆ. ಕರ್ನಾಟಕ ರಾಜ್ಯ 20 ವರ್ಷ ಹಿಂದೆ ಹೋಗಿದೆ. ಹೀಗಾಗಿ, ನಾವು ಮುಂದೆ ತರುವ ಕೆಲಸ ಮಾಡ್ತೇವೆ ಎಂದು ಡಿ. ಕೆ. ಶಿವಕುಮಾರ್ ಭರವಸೆ ನೀಡಿದರು. ದೀಪಾವಳಿ ಬೆಳಕು ತರಲಿ ಎಂದು ಆಶೀಸುತ್ತೇನೆ ಎಂದ ಡಿಕೆಶಿ, ಈ ಉಪ ಚುನಾವಣೆ ಫಲಿತಾಂಶ 2023ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈಗ ಜನರು ನನ್ನ ಮಾತಿಗೆ ಬೆಲೆ ಕೊಡ್ತಾರೋ? ಸಿಎಂ ಮಾತಿಗೆ ಬೆಲೆ ಕೊಡ್ತಾರೋ? ಎಂದು ಡಿಕೆಶಿ ಸವಾಲೆಸೆದರು. ಹಾನಗಲ್ ವಿಧಾನಸಭಾ ಕ್ಷೇತ್ರದ ಸ್ವಾಭಿಮಾನಿ ಮತದಾರರಿಗೆ ಹ್ಯಾಟ್ಸ್ ಆಪ್ ಎಂದ ಡಿಕೆಶಿ, ಇಡೀ ಸರ್ಕಾರವೇ ಉಪ ಚುನಾವಣೆಗೆ ಹೋಗಿತ್ತು. ಉಪ ಚುನಾವಣಾ ಪ್ರಚಾರ ಕಣದಲ್ಲಿ ಬಿಜೆಪಿಯ ಎಲ್ಲ ಘಟಾನುಘಟಿ ನಾಯಕರೂ ಭಾಗಿಯಾಗಿದ್ದರು ಎಂದು ಸ್ಮರಿಸಿದರು. ಇದೇ ವೇಳೆ, ಯಡಿಯೂರಪ್ಪ ಅವರ ಕಣ್ಣೀರಿಗೆ ಇಡೀ ಬಿಜೆಪಿ ಕೊಚ್ಚಿಕೊಂಡು ಹೋಗುತ್ತೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ, ಈಗಲೂ ನನ್ನ ಆ ಮಾತಿಗೆ ಬದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
from India & World News in Kannada | VK Polls https://ift.tt/3pYAEpP