'ಮಾನಸಿಕವಾಗಿ ದಣಿದಿದ್ದೇವೆ ಅನ್ನೋದನ್ನೆಲ್ಲಾ ಪಕ್ಕಕ್ಕಿಡಿ': ಇರ್ಫಾನ್ ಪಠಾಣ್‌!

ಹೊಸದಿಲ್ಲಿ: ಪ್ರಶಸ್ತಿ ಗೆಲ್ಲುವ ಫೇವರಿಟ್‌ ಟೀಮ್‌ ಇಂಡಿಯಾ ನೀಡಿದ ಕಳಪೆ ಪ್ರದರ್ಶನ ಕಂಡು ಕ್ರಿಕೆಟ್‌ ಜಗತ್ತು ಅಕ್ಷರಶಃ ನಿಬ್ಬೆರಗಾಗಿದೆ. ಅಂದಹಾಗೆ ಈ ನಡುವೆ ಬಯೋ ಬಬಲ್‌ ಜೀವನವೇ ಭಾರತೀಯ ಆಟಗಾರರ ವೈಫಲ್ಯಕ್ಕೆ ಪ್ರಮುಖ ಕಾರಣ ಎಂಬ ಚರ್ಚೆ ಶುರುವಾಗಿದೆ. ಟೂರ್ನಿಯ ಸೂಪರ್‌ 12 ಹಂತದಲ್ಲಿ ಭಾರತ ತಂಡ ಮೊದಲಿಗೆ ಪಾಕಿಸ್ತಾನ ಎದುರು 10 ವಿಕೆಟ್‌ಗಳಿಂದ ಸೋತರೆ, ನಂತರ ನ್ಯೂಜಿಲೆಂಡ್‌ ಎದುರು 8 ವಿಕೆಟ್‌ಗಳ ಸೋಲಿನ ಆಘಾತಕ್ಕೊಳಗಾಯಿತು. ಈಗ ಟೂರ್ನಿಯಲ್ಲಿ ಸೆಮಿಫೈನಲ್‌ ಆಸೆ ಜೀವಂತವಾಗಿ ಉಳಿಯಬೇಕಾದರೆ ಎದುರು ಭಾರತ ತಂಡ ಬೃಹತ್‌ ಅಂತರದ ಜಯ ದಾಖಲಿಸಬೇಕಿದೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಲ್‌ರೌಂಡರ್‌ , ಆಟಗಾರರು ಬಯೋ ಬಬಲ್‌ನಿಂದಾಗಿ ಮಾನಸಿಕ ಒತ್ತಡ ಅನುಭವಿಸಿದ್ದೇ ಎಂದೆಲ್ಲಾ ಏಳುವುದನ್ನು ಬಿಟ್ಟು ಮುಂದಿನ ಪಂದ್ಯಗಳ ಕಡೆಗೆ ಗಮನ ನೀಡಬೇಕು ಎಂದಿದ್ದಾರೆ. ಅಂದಹಾಗೆ ನ್ಯೂಜಿಲೆಂಡ್‌ ವಿರುದ್ಧದ ಸೋಲಿನ ಬಳಿಕ ಭಾರತ ತಂಡದ ವೇಗಿ ಬಬಯೋ ಬಬಲ್‌ನಿಂದ ಎದುರಿಸುತ್ತಿರುವ ಮಾನಸಿಕ ಒತ್ತಡದ ಬಗ್ಗೆ ಮಾತನಾಡಿದ್ದರು. "ನೋಡಿ ಭಾರತ ತಂಡ ಸತತ ಪ್ರವಾಸದಲ್ಲಿದೆ ಎಂಬುದನ್ನು ಅರಿತುಕೊಳ್ಳಬೇಕು. ಮೊದಲಿಗೆ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌, ನಂತರ ಇಂಗ್ಲೆಂಡ್‌ ಪ್ರವಾಸ, ಬಳಿಕ ಐಪಿಎಲ್‌ ಎಲ್ಲಾ ಮುಗಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಆಡುವುದು ಅಷ್ಟು ಸುಲಭವಲ್ಲ. ಆದರೆ, ಬಹುತೇಕ ತಂಡಗಳ ಪರಿಸ್ಥಿತಿ ಕೂಡ ಇದೇ ಆಗಿದೆ. ಹೀಗಾಗಿ ಮಾನಸಿಕ ಒತ್ತಡ ಎಂಬುದನ್ನೆಲ್ಲಾ ಬದಿಗಿಟ್ಟು, ಧನಾತ್ಮಕವಾಗಿ ಆಲೋಚಿಸಬೇಕು. ಒಮ್ಮೆ ಆಲೋಚಿಸಿ ಕಳೆದ 2 ವರ್ಷಗಳಲ್ಲಿ ಹಲವರು ಕೆಲಸ ಕಳೆದುಕೊಂಡಿದ್ದಾರೆ. ನೀವು ಕೆಲಸ ಮಾಡುತ್ತಿದ್ದೀರಿ ಅದೂ ಕೂಡ ದೇಶವನ್ನು ಪ್ರತಿನಿಧಿಸುತ್ತಿದ್ದೀರಿ. ಇದಕ್ಕಿಂತಲೂ ಹೆಮ್ಮೆಯ ವಿಚಾರ ಬೇಕೆ," ಎಂದು ಸ್ಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಇರ್ಫಾನ್‌ ಪಠಾಣ್‌ ಹೇಳಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ತನ್ನ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಬದಲಾವಣೆ ತಂದುಕೊಂಡಿತ್ತು ಇಶಾನ್‌ ಕಿಶನ್‌ ಅವರನ್ನು ಆರಂಭಿಕರನ್ನಾಗಿ ಆಡಿಸಿ ರೋಹಿತ್‌ ಶರ್ಮಾ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸಲಾಯಿತು. ಈ ಬಗ್ಗೆಯೂ ವ್ಯಾಪಕ ಟೀಕೆ ವ್ಯಕ್ತವಾಗಿದೆ. "ಮೊದಲು ಬ್ಯಾಟಿಂಗ್‌ ಸಂಯೋಜನೆಯನ್ನು ಸರಿ ಮಾಡಿದೆ. ಸರಿಯಾದ ಆಟಗಾರರಿಗೆ ಸರಿಯಾದ ಬ್ಯಾಟಿಂಗ್ ಕ್ರಮಾಂಕ ಕೊಡಿ. ರೋಹಿತ್‌ ಆರಂಭಿಕರಾಗಿಯೇ ಆಡಬೇಕು. ಅವರು ಸೆಟ್‌ ಆದರೆ ಆಟವೇ ಬೇರೆ. ಅಬುಧಾಬಿ ಪಿಚ್‌ ಸ್ಪಿನ್ನರ್‌ಗಳ ಜೊತೆಗೆ ವೇಗಿಗಳಿಗೂ ನೆರವಾಗುತ್ತದೆ. ಇಲ್ಲಿ ಬ್ಯಾಟಿಂಗ್‌ ಕೊಂಚ ಸುಲಭ. ದುಬೈನಲ್ಲಿ ಆಗಿದ್ದನ್ನು ಮರೆತು ಬಿಡಿ. ಶಾರ್ಜಾದಲ್ಲಿ ಏನಾಗುತ್ತಿದೆ ಗಮನ ಕೊಡಬೇಡಿ. ನಿಮ್ಮ ಆಟದ ಕಡೆಗಷ್ಟೇ ಗಮನ ನೀಡಿ," ಎಂದು ಇರ್ಫಾನ್‌ ಹೇಳಿದ್ದಾರೆ. "ಅಬುಧಾಬಿ ಪಿಚ್ ಉತ್ತಮವಾಗಿದೆ. ಪಿಚ್‌ನಲ್ಲಿ ಲಭ್ಯವಾಗುವ ಹೆಚ್ಚುವರಿ ಬೌನ್ಸ್‌ ಬ್ಯಾಟ್ಸ್‌ಮನ್‌ಗಳಿಗೆ ಹಿಡಿಸಲಿದೆ. ಕೆಎಲ್‌ ರಾಹುಲ್‌, ರೋಹಿತ್ ಮತ್ತು ವಿರಾಟ್‌ಗೆ ಈ ಪಿಚ್‌ ಬಹಳಾ ಉತ್ತಮವಾದುದ್ದಾಗಿದೆ. ಅಂಗಣದಲ್ಲಿ ಕೊಂಚ ಸಮಯ ಕಳೆದು ಲಯ ಕಂಡುಕೊಳ್ಳಬೇಕಷ್ಟೆ. ಎದುರಾಳಿ ತಂಡದಲ್ಲಿನ ಗುಣಮಟ್ಟದ ಸ್ಪಿನ್ನರ್‌ಗಳ ಬಗ್ಗೆ ಅಂಜುವ ಅಗತ್ಯವಿಲ್ಲ. ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಯಾವುದೇ ಸ್ಪಿನ್ನರ್‌ಗಳೆದುರು ಅಬ್ಬರಿಸುವ ಸಾಮರ್ಥ್ಯವಿದೆ," ಎಂದಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jXPk4M

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...