ತಿರುವನಂತಪುರ (ಕೇರಳ): ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಸ್ವಾಮಿ ಯಾತ್ರೆಗೆ ದಿನಗಣನೆ ಆರಂಭವಾಗಿದೆ. ವಾರ್ಷಿಕ ಮಂಡಲ ಮಕರ ವಿಳಕ್ಕು ಯಾತ್ರೆಯು ನವೆಂಬರ್ 15ರಿಂದ ಆರಂಭಗೊಳ್ಳಲಿದ್ದು, ಈ ಬಾರಿ ಲಕ್ಷಾಂತರ ಯಾತ್ರೆ ಕೈಗೊಳ್ಳಲು ಮುಂಚಿತವಾಗಿಯೇ ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಕೇರಳ ಸರಕಾರ ನೀಡಿದ ಮಾಹಿತಿ ಪ್ರಕಾರ, ಈಗಾಗಲೇ ಹತ್ತು ಲಕ್ಷಕ್ಕೂ ಹೆಚ್ಚು ಭಕ್ತರು ತಮ್ಮ ಹೆಸರು ನೋಂದಾಯಿಸಿದ್ದು, ಸ್ವಾಮಿ ದರ್ಶನಕ್ಕೆ ಕಾತುರರಾಗಿದ್ದಾರೆ. ಈ ಬಾರಿ ಯಾತ್ರೆಗೆ ಪ್ರತಿ ದಿನ ತಲಾ 25 ಸಾವಿರ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಒಟ್ಟಾರೆ 15.25 ಲಕ್ಷ ಭಕ್ತರಿಗೆ ಈ ಋುತುವಿನಲ್ಲಿ ಮಣಿಕಂಠನ ದರ್ಶನ ಭಾಗ್ಯ ದೊರಕಲಿದೆ. 'ಸಂಬಂಧಪಟ್ಟ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಸಾಂಕ್ರಾಮಿಕದಿಂದಾಗಿ ಈ ಬಾರಿಯೂ ವರ್ಚ್ಯುಯಲ್ ಕ್ಯೂ ವ್ಯವಸ್ಥೆಯಲ್ಲಿ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ದರ್ಶನಕ್ಕೆ ಅವಕಾಶ ದೊರಕಲಿದೆ. ಪ್ರತಿ ದಿನ 25 ಸಾವಿರ ಭಕ್ತರಿಗೆ ಮಾತ್ರ ಸನ್ನಿಧಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಿದ್ದೇವೆ' ಎಂದು ಕೇರಳ ದೇವಸ್ವಂ ಸಚಿವರಾದ ಕೆ. ರಾಧಕೃಷ್ಣನ್ ಹೇಳಿದ್ದಾರೆ. '470 ಕೆಎಸ್ಆರ್ಟಿಸಿ ಬಸ್ಗಳನ್ನು ಭಕ್ತರ ಪ್ರಯಾಣಕ್ಕಾಗಿ ವ್ಯವಸ್ಥೆ ಮಾಡಲಾಗುವುದು. ಇವುಗಳಲ್ಲಿ 140 ಬಸ್ಗಳು ನೀಲಕ್ಕಲ್ ಮತ್ತು ಪಂಪಾ ಬೇಸ್ ಕ್ಯಾಂಪ್ನಿಂದ ಚೈನ್ ಸರ್ವೀಸ್ ನೀಡಲಿವೆ' ಎಂದರು. 'ಆರೋಗ್ಯ ಇಲಾಖೆಯು ನೀಲಕ್ಕಲ್ನಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರ ಸ್ಥಾಪಿಸಲಿದೆ. ಪಂಪಾ, ಸನ್ನಿಧಾನಂ ಮತ್ತು ನೀಲಕ್ಕಲ್ನಲ್ಲಿ ವಿಶೇಷ ಆಸ್ಪತ್ರೆಗಳು ಕಾರ್ಯನಿರ್ವಹಣೆ ಆರಂಭಿಸಲಿವೆ. ಐದು ತುರ್ತು ಚಿಕಿತ್ಸಾ ವೈದ್ಯಕೀಯ ಕೇಂದ್ರಗಳೂ ಇರಲಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ. ಬೇರೆ ಬೇರೆ ಸರಕಾರಿ ಇಲಾಖೆಗಳು ಜೊತೆಯಾಗಿ ಜಂಟಿ ಕ್ರಿಯಾ ಯೋಜನೆಯನ್ನು ಮಾಡಿಕೊಂಡು ಅದನ್ನು ಶಬರಿ ಮಲೆ ವಾರ್ಷಿಕ ತೀರ್ಥ ಯಾತ್ರೆಗೆ ಮುನ್ನ ಸರಕಾರಕ್ಕೆ ಸಲ್ಲಿಸಬೇಕು ಎಂದು ಕೆ. ರಾಧಕೃಷ್ಣನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ನಡುವೆ ಆರೋಗ್ಯ ಇಲಾಖೆಯು ಕ್ರಿಯಾ ಯೋಜನೆಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಲ್ಲಿಕೆ ಮಾಡಿದ ಕ್ರಿಯಾ ಯೋಜನೆ ಪ್ರಕಾರ ಎಲ್ಲಾ ಮಾಲಾಧಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಎರಡು ಲಸಿಕೆ ಪಡೆದಿರಬೇಕು ಅಥವಾ 72 ಗಂಟೆಯೊಳಗೆ ಮಾಡಿದ ಆರ್ಟಿ-ಪಿಸಿಆ ಪರೀಕ್ಷೆಯ ವರದಿಯನ್ನು ಹೊಂದಿರಬೇಕು. ಯಾತ್ರೆ ಕೈಗೊಳ್ಳುವ ಭಕ್ತರು ವರ್ಚ್ಯುಯಲ್ ಬುಕ್ಕಿಂಗ್ ವ್ಯವಸ್ಥೆ ಮೂಲಕ ಬುಕ್ಕಿಂಗ್ ಮಾಡುವುದು ಕಡ್ಡಾಯ. ಜೊತೆಗೆ ಎರಡು ಲಸಿಕೆ ಪಡೆದ ಸರ್ಟಿಫಿಕೇಟ್ ಅಥವಾ ಆರ್ಟಿ-ಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ತೋರಿಸಿ ದೇಗುಲ ಪ್ರವೇಶಿಸಬೇಕು ಎಂದು ಕೇರಳ ಸರಕಾರ ಮಾಹಿತಿ ನೀಡಿದೆ. ಉಳಿಯಲು ಅವಕಾಶವಿಲ್ಲ ಎಲ್ಲರಿಗೂ ನೆಯ್ಯಾಭಿಷೇಕ (ತುಪ್ಪದ ಅಭಿಷೇಕ) ನೀಡಲು ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ದರ್ಶನ ನಂತರ ಸನ್ನಿಧಾನದಲ್ಲಿ ಉಳಿಯಲು ಭಕ್ತರಿಗೆ ಅವಕಾಶ ನೀಡದೆ ಇರಲು ನಿರ್ಧರಿಸಲಾಗಿದೆ. ವಾಹನಗಳನ್ನು ನೀಲಕ್ಕಲ್ವರೆಗೆ ಮಾತ್ರ ಬರಲು ಅನುಮತಿಸಲಾಗುತ್ತದೆ. ಅಲ್ಲಿಂದ ಕೆಎಸ್ಆರ್ಟಿಸಿ ಬಸ್ಗಳನ್ನು ಬಳಸಬೇಕು. ಕೋವಿಡ್-19 ಪಾಸಿಟಿವ್ ಅಲ್ಲದೆ ಇತರೆ ರೋಗಗಳಿಂದ ಬಳಲುತ್ತಿದ್ದರೆ ಭಕ್ತರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಕೊಂಡು ಯಾತ್ರೆಗೆ ಬರಬೇಕು ಎಂದು ಸೂಚಿಸಲಾಗಿದೆ.
from India & World News in Kannada | VK Polls https://ift.tt/3wj8CXh