ಪಟ್ನಾ: ಕಳೆದ ತಿಂಗಳು ನಡೆದ ರಾಜ್ಯದ ಧನ್ಬಾದ್ ಉತ್ತಮ್ ಆನಂದ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಿದೆ. ನ್ಯಾಯಾಧೀಶರ ಹತ್ಯೆಗೂ ಮುನ್ನ ಕೆಲವು ಕರೆಗಳನ್ನು ಮಾಡುವುದಕ್ಕಾಗಿ ಆರೋಪಿಗಳು ಕದ್ದ ಫೋನ್ಗಳನ್ನು ಬಳಸಿದ್ದರು ಎನ್ನುವುದು ಬಹಿರಂಗವಾಗಿದೆ. ಇದಕ್ಕೂ ಮುನ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಜುಲೈ 29ರಂದು ಬಂಧಿಸಲಾಗಿತ್ತು. ನ್ಯಾಯಾಧೀಶರಿಗೆ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಆಟೋರಿಕ್ಷಾವನ್ನು ಕಳ್ಳವು ಮಾಡಲಾಗಿತ್ತು. ನ್ಯಾಯಾಧೀಶರ ಕೊಲೆಗೂ ಮುನ್ನ ಹಿಂದಿನ ರಾತ್ರಿ ಇಬ್ಬರು ಆರೋಪಿಗಳು ಪೂರ್ಣೇಂದು ವಿಶ್ವಕರ್ಮ ಎಂಬ ರೈಲ್ವೆ ಕಲೆಕ್ಟರ್ನಿಂದ ಮೂರು ಮೊಬೈಲ್ ಫೋನ್ಗಳನ್ನು ಕಳವು ಮಾಡಿದ್ದರು. ಆರೋಪಿಗಳು ಕಳವು ಮಾಡಿದ್ದ ಮೊಬೈಲ್ ಫೋನ್ಗಳಲ್ಲಿ ತಮ್ಮ ಸಿಮ್ ಕಾರ್ಡ್ಗಳನ್ನು ಹಾಕಿ ಕರೆಗಳನ್ನು ಮಾಡುತ್ತಿದ್ದರು. ತಮ್ಮ ಮೊಬೈಲ್ ಕಳುವಾಗಿದ್ದರ ಬಗ್ಗೆ ಪೂರ್ಣೇಂದು ಅವರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದರು. ಈ ಕರ್ತವ್ಯಲೋಪಕ್ಕೆ ಹೊಣೆಯಾಗಿಸಿ ಕಾನ್ಸ್ಟೆಬಲ್ ವಿಜಯ್ ಯಾದವ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ. ಆಟೋರಿಕ್ಷಾ ಕಳವು ಮಾಡಿದ ಬಳಿಕ ಧನ್ಬಾದ್ ಪೊಲೀಸ್ ಠಾಣೆ ಸಮೀಪ ಮದ್ಯಪಾನ ಮಾಡಿದ್ದ ಆರೋಪಿಗಳು, ಬಳಿಕ ಪೂರ್ಣೇಂದು ಮನೆಗೆ ನುಗ್ಗಿ ಮೊಬೈಲ್ ಫೋನ್ಗಳನ್ನು ಕಳವು ಮಾಡಿದ್ದರು. ಮಾರನೇ ದಿನ ಬೆಳಿಗ್ಗೆ ಉತ್ತಮ್ ಆನಂದ್ ಅವರು ವಾಯುವಿಹಾರ ಮಾಡುತ್ತಿದ್ದಾಗ ಆಟೋರಿಕ್ಷಾ ಡಿಕ್ಕಿ ಹೊಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳಾದ ಲಖನ್ ವರ್ಮಾ ಮತ್ತು ರಾಹುಲ್ ವರ್ಮಾ ಎಂಬಿಬ್ಬರನ್ನು ಸಿಬಿಐ ಮತ್ತಷ್ಟು ವಿಚಾರಣೆಗೆ ಒಳಪಡಿಸಿದೆ.
from India & World News in Kannada | VK Polls https://ift.tt/2Wf5EoC