ವಿಜಯಪುರ: ಹಬ್ಬಕ್ಕೆ ಕೋವಿಡ್ ನಿರ್ಬಂಧ ಹಾಕಿದರೆ ನಾವು ಸುಮ್ಮನಿರಲ್ಲ ಎಂದು ಬಿಜೆಪಿ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಹೀಗೆಲ್ಲಾ ಕಾನೂನು ತಂದ್ರೆ ನಾವು ಕೇಳಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದೆ. ಕೇವಲ ಗಣಪತಿ ವಿಸರ್ಜನೆ ಹಾಗೂ ಹಿಂದೂ ಹಬ್ಬಗಳ ಮೇಲೆ ಕಾನೂನು ನಿರ್ಬಂಧ ಹೇರಿದರೆ ನಾವು ಬಿಜಾಪುರದಲ್ಲಿ ಸುಮ್ಮನಿರಲ್ಲ, ನನ್ನ ಮೇಲೆ ಗುಂಡು ಹಾರಿಸಬಹುದು ಎಂದಿದ್ದಾರೆ. ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ಇಷ್ಟೇ ಮಂದಿ ಹೋಗಬೇಕು ಎಂದು ನಿರ್ಬಂಧ ಹಾಕಬಾರದು. ನೀವೆಲ್ಲಾ ಸಭೆ ಸಮಾರಂಭಗಳನ್ನು ನಡೆಸುತ್ತೀರಿ. ಎಲ್ಲರಿಗೂ ನಿರ್ಬಂಧ ಹಾಕಿರಿ, ನಮಗೆ ಮಾತ್ರ ಬೇಡ ಎಂದರು. ಕರ್ನಾಟಕದಲ್ಲಿ ಉಳಿದವರಿಗೆ ಹಬ್ಬ ಮಾಡಲು ಬಿಡುತ್ತೀರಿ. ಆದರೆ ನಮಗೆ ಯಾಕಿಲ್ಲ. ಈ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡಿದ್ದೇನೆ. ಸಿಎಂ ಅನುಮತಿ ಕೊಟ್ಟಿದ್ದಾರೆ ಹಾಗೂ ಆದೇಶನೂ ಮಾಡಿದ್ದಾರೆ ಎಂದರು. ಕೋವಿಡ್ ಹಿನ್ನೆಲೆಯಲ್ಲಿ ಹಬ್ಬ ಹರಿದಿನಗಳಿಗೆ ನಿರ್ಬಂಧ ಹೇರಲಾಗಿದೆ. ಹಬ್ಬಗಳನ್ನು ಆಚರಣೆ ಮಾಡುವಾಗ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಎಲ್ಲ ಧರ್ಮಗಳ ಹಬ್ಬಗಳಿಗೂ ಈ ರೀತಿಯ ನಿರ್ಬಂಧಗಳನ್ನು ಸರ್ಕಾರ ಹೇರಿದೆ.
from India & World News in Kannada | VK Polls https://ift.tt/3sAK2PV