ಸತತ 3ನೇ ಟೆಸ್ಟ್‌ನಲ್ಲಿಯೂ ಅಶ್ವಿನ್‌ಗೆ ಚಾನ್ಸ್‌ ನೀಡದ ಬಗ್ಗೆ ಶಮಿ ಪ್ರತಿಕ್ರಿಯೆ!

ಲೀಡ್ಸ್‌: ವಿರುದ್ಧ ಹೆಡಿಂಗ್ಲೆ ಟೆಸ್ಟ್‌ಗೆ ಹಿರಿಯ ಆಫ್‌ ಸ್ಪಿನ್ನರ್‌ ಅವರನ್ನು ಆಯ್ಕೆ ಮಾಡದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಹಿರಿಯ ವೇಗಿ , ಟೀಮ್‌ ಮ್ಯಾನೇಜ್‌ಮೆಂಟ್‌ ಆಯ್ಕೆ ಮಾಡಿರುವ ಪ್ಲೇಯಿಂಗ್‌ ಇಲೆವೆನ್‌ಗೆ ಬೆಂಬಲಿಸುವುದು ಮುಖ್ಯ ಎಂದು ಹೇಳಿದ್ದಾರೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 78 ರನ್‌ಗಳಿಗೆ ಆಲ್‌ಔಟ್‌ ಆಯಿತು. ನಂತರ, ವಿಕೆಟ್‌ ತುಂಬಾ ನಿಧಾನಗತಿಯಾಗಿ ಮಾರ್ಪಟ್ಟಿತು. ಇದನ್ನು ಸದುಪಯೋಗಪಡಿಸಿಕೊಂಡ ಜೋ ರೂಟ್‌, ಪ್ರಸಕ್ತ ಸರಣಿಯಲ್ಲಿ ಮೂರನೇ ಶತಕ ಪೂರೈಸಿದರು. ಆ ಮೂಲಕ ಇಂಗ್ಲೆಂಡ್‌ ತಂಡಕ್ಕೆ ಎರಡನೇ ದಿನದಾಟದ ಅಂತ್ಯಕ್ಕೆ 423 ರನ್‌ ಗಳಿಸಲು ನೆರವಾದರು. ನಿಧಾನಗತಿಯ ಪಿಚ್‌ಗಳಲ್ಲಿ ಆರ್‌ ಅಶ್ವಿನ್‌ ಅತ್ಯಂತ ಪರಿಣಾಮಕಾರಿಯಾಗಿ ಬೌಲ್ ಮಾಡಬಲ್ಲರು ಹಾಗೂ ವಿಶೇಷವಾಗಿ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಸರಾಗವಾಗಿ ಒತ್ತಡ ಹೇರಬಲ್ಲರು. ಇದಕ್ಕಿಂತ ಮುಖ್ಯವಾಗಿ ಅದ್ಭುತ ಫಾರ್ಮ್‌ನಲ್ಲಿರುವ ಜೋ ರೂಟ್‌ ಅವರನ್ನು ಆರ್‌ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು ಐದು ಬಾರಿ ಔಟ್‌ ಮಾಡಿದ್ದಾರೆ. ಈ ಎಲ್ಲಾ ಕಾರಣಗಳ ಹೊರತಾಗಿಯೂ ಅಶ್ವಿನ್‌ಗೆ ಚಾನ್ಸ್ ನೀಡದ ಬಗ್ಗೆ ಹಲವು ಕ್ರಿಕೆಟ್‌ ಪಂಡಿತರು ಬೇಸರ ಹೊರಹಾಕಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೊಹಮ್ಮದ್‌ ಶಮಿ, "ಪ್ಲೇಯಿಂಗ್‌ ಇಲೆವೆನ್‌ ಆಯ್ಕೆಯ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಇದು ಟೀಮ್‌ ಮ್ಯಾನೇಜ್‌ಮೆಂಟ್‌ ನಿರ್ಧಾರ. ಮೈದಾನದಲ್ಲಿರುವ 11 ಮಂದಿ ಆಟಗಾರರು ತಮ್ಮ-ತಮ್ಮ ಕಾರ್ಯವನ್ನು ನಿರ್ವಹಿಸಬೇಕಾಗಿದೆ. ಟೀಮ್‌ ಮ್ಯಾನೇಜ್‌ಮೆಂಟ್‌ ಆಯ್ಕೆ ಮಾಡಿರುವ ಆಡುವ ಬಳಗವನ್ನು ನಾವು ಬೆಂಬಲಿಸುವ ಅಗತ್ಯವಿದೆ. ಹಾಗಾಗಿ, ಇದರ ಬಗ್ಗೆ ಜಾಸ್ತಿ ಚಿಂತಿಸುವ ಅಗತ್ಯವಿಲ್ಲ," ಎಂದು ಹೇಳಿದರು. ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ ತಂಡ 345 ರನ್‌ಗಳ ಬೃಹತ್‌ ಮುನ್ನಡೆ ಪಡದುಕೊಂಡಿದೆ. ಆ ಮೂಲಕ ಭಾರತ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಕಠಿಣ ಸವಾಲು ನೀಡುವತ್ತಾ ಸಾಗಿದೆ. ಕಳೆದ ಪಂದ್ಯಗಳಲ್ಲಿ ಯಶಸ್ವಿಯಾಗಿದ್ದ ಟೀಮ್‌ ಇಂಡಿಯಾ ವೇಗಿಗಳು ಹೆಡಿಂಗ್ಲೆ ಪಿಚ್‌ನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ತೋರಲಾಗಲಿಲ್ಲ. ಪಿಚ್‌ ತುಂಬಾ ನಿಧಾನಗತಿಯಿಂದ ಕೂಡಿದ್ದರಿಂದ ಬೌನ್ಸ್‌, ಸ್ವಿಂಗ್‌ ಹಾಗೂ ರಿವರ್ಸ್ ಸ್ವಿಂಗ್‌ ಮಾಡಲು ಸಾಧ್ಯವಾಗಲಿಲ್ಲ ಎಂದು ಶಮಿ ಹೇಳಿದರು. "ಇಲ್ಲಿನ ಪಿಚ್‌ ತುಂಬಾ ನಿಧಾನಗತಿಯಿಂದ ಕೂಡಿತ್ತು. ಈ ಕಾರಣದಿಂದ ಬೌನ್ಸ್ ಅಷ್ಟೊಂದು ಇರಲಿಲ್ಲ ಹಾಗೂ ವಿಕೆಟ್‌ ಕೀಪರ್‌ ಕೈಗೆ ಚೆಂಡು ಸರಿಯಾಗಿ ಸಿಗುತ್ತಿರಲಿಲ್ಲ. ಸ್ವಿಂಗ್‌ ಹಾಗೂ ಸೀಮಿಂಗ್‌ ಇಲ್ಲದ ಹೊರತಾಗಿಯೂ ಇಲ್ಲಿನ ನಿಧಾನಗತಿಯ ವಿಕೆಟ್‌ನಲ್ಲಿ ಹಲವು ಬಾರಿ ಬ್ಯಾಟ್ಸ್‌ಮನ್‌ಗಳಿಗೆ ಎಡ್ಜ್‌ ಮಾಡಿಸಿದ್ದೆವು. ಪಿಚ್‌ ಹಸಿರಿನಿಂದ ಕೂಡಿದ್ದರೆ ಮಾತ್ರ ರಿವರ್ಸ್ ಮಾಡಲು ಸಾಧ್ಯವಾಗುತ್ತದೆ," ಎಂದರು. "ಒಟ್ಟಾರೆ ಇಲ್ಲಿನ ಪಿಚ್‌ ಅಂತೂ ತುಂಬಾ ನಿಧಾನವಾಗಿತ್ತು. ಈ ವೇಳೆ ನಾವು ಜಾಸ್ತಿ ಯೋಚನೆ ಮಾಡಬಾರದು ಹಾಗೂ ಪಿಚ್‌ ಹೇಗೆ ವರ್ತಿಸುತ್ತದೆ ಅದಕ್ಕೆ ತಕ್ಕಂತೆ ನಾವು ಬೌಲ್‌ ಮಾಡುವುದು ಇಲ್ಲಿ ಮುಖ್ಯವಾಗುತ್ತದೆ. ಒಂದು ವೇಳೆ ಪಿಚ್‌ ನಿಧಾನವಾಗಿದ್ದರೆ, ಲೈನ್‌ ಅಂಡ್‌ ಲೆನ್ತ್‌ ಬೌಲ್‌ ಮಾಡಬೇಕಾಗುತ್ತದೆ," ಎಂದು ಮೊಹಮ್ಮದ್‌ ಶಮಿ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/38jZLcC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...