'ಈತ ಭಾರತದ ಅತ್ಯಂತ ಕೆಟ್ಟ ವೇಗಿ' ಕೊಹ್ಲಿಯೇ ಇದಕ್ಕೆ ಉತ್ತರಿಸಬೇಕೆಂದ ವಾನ್‌!

ಲೀಡ್ಸ್‌: ಹಿರಿಯ ಬೌಲರ್‌ ಅವರನ್ನು ಅತ್ಯಂತ ಕೆಟ್ಟ ವೇಗಿ ಎಂದು ವ್ಯಂಗ್ಯವಾಡಿದ ಇಂಗ್ಲೆಂಡ್ ಮಾಜಿ ನಾಯಕ , ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನವನ್ನು ಬಲಗೈ ವೇಗಿಯಿಂದ ಆರಂಭಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಹೆಡಿಂಗ್ಲೆ ಟೆಸ್ಟ್‌ ಪಂದ್ಯದ ಆರಂಭಿಕ ಎರಡು ದಿನಗಳು ಇಶಾಂತ್‌ ಶರ್ಮಾ ಪಾಲಿಗೆ ಅತ್ಯಂತ ಕಠಿಣವಾಗಿದ್ದವು. ತಾನು ಮಾಡಿದ ಪ್ರತಿಯೊಂದು ಓವರ್‌ನಲ್ಲಿಯೂ ಇಶಾಂತ್‌ ಶರ್ಮಾ ಸರಾಸರಿ 4ರಷ್ಟು ರನ್‌ ಬಿಟ್ಟುಕೊಟ್ಟಿದ್ದರು. ಇದರಿಂದಾಗಿ ಇಂಗ್ಲೆಂಡ್‌, ಸ್ಕೋರ್ ಬೋರ್ಡ್‌ನಲ್ಲಿ ವೇಗವಾಗಿ ಬೆಳೆಯಲು ಸಾಧ್ಯವಾಗಿತ್ತು. ಹೆಡಿಂಗ್ಲೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳದ ಕಾರಣ ಟೀಮ್‌ ಇಂಡಿಯಾ ಎದುರಾಳಿ ಇಂಗ್ಲೆಂಡ್‌ ವಿರುದ್ಧ ದುಬಾರಿಯಾಗಿದೆ ಎಂದು ಆರೋಪಿಸಿದ ಮೈಕಲ್‌ ವಾನ್‌, ಮೂರನೇ ಟೆಸ್ಟ್‌ ಪಂದ್ಯದಲ್ಲಿ ಅನುಸರಿಸಿದ ಕೆಲ ತಂತ್ರಗಳ ಬಗ್ಗೆ ಉತ್ತರ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. "ಮೂರನೇ ಟೆಸ್ಟ್‌ ಪಂದ್ಯದ ಮೊದಲನೇ ದಿನವನ್ನು ನೀವು ನೋಡಿದ್ದೀರಿ. ನಿನ್ನೆ(ಬುಧವಾರ) ಭಾರತದ ಪರ ಇಶಾಂತ್‌ ಶರ್ಮಾ ಅತ್ಯಂತ ಕೆಟ್ಟ ವೇಗಿಯಾಗಿದ್ದರು. ಇದರ ಹೊರತಾಗಿಯೂ ಎರಡನೇ ದಿನವನ್ನೂ ಇವರಿಂದಲೇ ನೀವು ಆರಂಭಿಸಿದ್ದೀರಿ. ಆದರೆ, ಇಶಾಂತ್ ಬದಲು ನೀವು ಉತ್ತಮ ವೇಗಿ ಜಸ್‌ಪ್ರಿತ್‌ ಬುಮ್ರಾ ಅವರಿಂದ ಆರಂಭಿಸಬೇಕಾಗಿತ್ತು. ಅಂದಹಾಗೆ, ಮೊಹಮ್ಮದ್‌ ಶಮಿ ನಿನ್ನೆ ಹೊಸ ಚೆಂಡಿನಲ್ಲಿ ಏಕೆ ಬೌಲ್‌ ಮಾಡಲಿಲ್ಲ ಎಂಬುದು ನನಗೆ ತಿಳಿದಿಲ್ಲ. ಈ ಎಲ್ಲಾ ಪ್ರಶ್ನೆಗಳಿಗೂ ವಿರಾಟ್‌ ಕೊಹ್ಲಿ ಉತ್ತರಿಸಬೇಕಾದ ಅಗತ್ಯವಿದೆ," ಎಂದು ವಾನ್‌ ಟೆಸ್ಟ್ ಮ್ಯಾಚ್‌ ಸ್ಪೆಷಲ್ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದರು. ಭಾರತ ವಿಶ್ವ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗುಣಮಟ್ಟದ ತಂಡವಾಗಬೇಕೆಂದರೆ, ಹೇಗೆ ಎಲ್ಲಾ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು ಎಂಬ ಬಗ್ಗೆ ಕಲಿಯುವ ಅಗತ್ಯವಿದೆ ಎಂದು ಆಶಷ್‌ ಟೆಸ್ಟ್‌ ಸರಣಿ ವಿಜೇತ ನಾಯಕ ಮೈಕಲ್‌ ವಾನ್‌ ಸಲಹೆ ನೀಡಿದ್ದಾರೆ. "ವಿಶ್ವದ ಅತ್ಯುತ್ತಮ ತಂಡ ಎಲ್ಲಾ ಪರಿಸ್ಥಿತಿಗಳಿಗೂ ಹೊಂದಿಕೊಳ್ಳುತ್ತದೆ. ಈಗಿನ ಭಾರತ ತಂಡ ಕೂಡ ಅತ್ಯುತ್ತಮವಾಗಿದೆ. ಆದರೆ, ನೀವು ವಿಶ್ವದ ಯಾವುದೇ ದೇಶಕ್ಕೆ ಪ್ರವಾಸ ಮಾಡಿದಾಗ, ಅಲ್ಲಿ ನೀವು ಪ್ರಾಬಲ್ಯ ಸಾಧಿಸಬೇಕೆಂದರೆ, ಅಲ್ಲಿನ ಪರಿಸ್ಥಿತಿಗಳಿಗೆ ಆದಷ್ಟು ಬೇಗ ಹೊಂದಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ನೀವು ವಿಶ್ವದ ಶ್ರೇಷ್ಠ ತಂಡ ಎಂದು ಕರೆಸಿಕೊಳ್ಳಲು ಸಾಧ್ಯ," ಎಂದು ಮೈಕಲ್‌ ವಾನ್‌ ಹೇಳಿದ್ದಾರೆ. ರೂಟ್‌ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ: ಶಮಿ ಹೆಡಿಂಗ್ಲೆ ಟೆಸ್ಟ್‌ ಎರಡನೇ ದಿನದಾಟದ ಬಳಿಕ ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ, ಇಂಗ್ಲೆಂಡ್‌ ನಾಯಕ ಎಷ್ಟೇ ರನ್‌ ಗಳಿಸಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಪಂದ್ಯದ ಅಂತಿಮ ಫಲಿತಾಂಶದ ಕಡೆಗೆ ನಾವು ಗಮನಹರಿಸುತ್ತೇವೆಂದು ಹೇಳಿದ್ದಾರೆ. "ನೀವು ಹೊರಗಡೆ ನಿಂತು ಈ ಬಗ್ಗೆ ನೋಡಬೇಕಾಗುತ್ತದೆ. ಜೋ ರೂಟ್‌ ಮುಂದೆ ನಮ್ಮ ಬೌಲರ್‌ಗಳು ಹಿನ್ನಡೆ ಅನುಭವಿಸುತ್ತಿಲ್ಲ, ಬದಲಿಗೆ ಜೋ ರೂಟ್‌ ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಯಾವುದೇ ಬ್ಯಾಟ್ಸ್‌ಮನ್‌ ಫಾರ್ಮ್‌ನಲ್ಲಿದ್ದರೆ, ಖಂಡಿತಾ ಸಾಕಷ್ಟು ರನ್‌ ಗಳಿಸುತ್ತಾರೆ. ಇಂತಹ ಸಮಯದಲ್ಲಿ ಅವರನ್ನು ಯಾವುದೇ ಬೌಲರ್‌ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ," ಎಂದು ಹೇಳಿದರು. ಜೋ ರೂಟ್‌ ರನ್‌ ಹೊಳೆ ಹರಿಸುತ್ತಿದ್ದರೂ ಭಾರತ ತಂಡ ಪ್ರಸ್ತುತ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ ಎಂಬ ಅಂಶವನ್ನು 30ರ ಪ್ರಾಯದ ವೇಗಿ ಒತ್ತಿ ಹೇಳಿದರು. "ಲಾರ್ಡ್ಸ್‌ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್‌ ಶತಕ ಗಳಿಸಿದ ಹೊರತಾಗಿಯೂ ಭಾರತ ಗೆದ್ದಿದೆ. ಅವರು ಹೆಚ್ಚೂ-ಕಡಿಮೆ 200ರ ಸನಿಹ ರನ್‌ ಗಳಿಸಿದ್ದರು. ಆದರೂ ನಾವು ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದ್ದೇವೆ. ರೂಟ್‌ ರನ್‌ ಹೊಳೆ ಹರಿಸುತ್ತಿರುವುದಕ್ಕೆ ಅಥವಾ ಬೇರೆ ಯಾವುದೇ ಬ್ಯಾಟ್ಸ್‌ಮನ್‌ ಬಗ್ಗೆಯೂ ನಾವು ಚಿಂತಿಸುವುದಿಲ್ಲ. ಆದರೆ, ಪಂದ್ಯದ ಅಂತಿಮ ಫಲಿತಾಂಶದ ಬಗ್ಗೆ ನಾವು ಕಾಳಜಿ ತೋರಿಸುತ್ತೇವೆ," ಎಂದು ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3BlLkS1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...