ಬಿಳಿ ಜೋಳಕ್ಕೆ ಮಧ್ಯವರ್ತಿಗಳ ಕಾಟ, ದಿಢೀರ್‌ ಬೆಲೆ ಇಳಿಕೆ; ಕಂಗಾಲಾದ ಬೆಳೆಗಾರರು!

ಡಿ.ಪಿ.ಶಂಕರ್‌ ಯಳಂದೂರು: ಕಷ್ಟಪಟ್ಟು ಬೆಳೆದ ಬಿಳಿ ಜೋಳಕ್ಕೆ ಉತ್ತಮ ಬೆಲೆ ಸಿಗದೆ, ಬೆಂಬಲ ಬೆಲೆಯೂ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಮಧ್ಯವರ್ತಿಗಳು ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ. ತಾಲೂಕಿನ ಹೊನ್ನೂರು ಗ್ರಾಮದ ರೈತರು 250 ಹೆಕ್ಟೇರ್‌ ಪ್ರದೇಶದಲ್ಲಿ18ರಿಂದ 20 ಸಾವಿರ ಕ್ವಿಂಟಾಲ್‌ ಹೈಬ್ರಿಡ್‌ ಬೆಳೆದಿದ್ದು, ಫಸಲು ಕಟಾವು ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಬೆಂಬಲ ಬೆಲೆ ಇಲ್ಲದೆ ನಷ್ಟ ಅನುಭವಿಸಬೇಕಾದ ಆತಂಕದಲ್ಲಿದ್ದಾರೆ. ಒಂದು ಕ್ವಿಂಟಾಲ್‌ ಹೈಬ್ರಿಡ್‌ ಬಿಳಿ ಜೋಳಕ್ಕೆ 10 ದಿನಗಳ ಹಿಂದೆ 1600 ರೂ. ಇತ್ತು. ಆದರೀಗ ಕಟಾವು ಕಾರ್ಯ ಆರಂಭವಾದ ನಂತರ 350 ರೂ. ಕಡಿಮೆಯಾಗಿದೆ. 1200ರಿಂದ 1250 ರೂ.ಗಳನ್ನು ದಲ್ಲಾಳಿಗಳು ನಿಗದಿಪಡಿಸಿದ್ದಾರೆ. ಈ ಜೋಳ ತಮಿಳುನಾಡಿಗೆ ಮಾರಾಟವಾಗುತ್ತಿದೆ. ಸ್ಥಳೀಯ ದಲ್ಲಾಳಿಗಳು ತಮಿಳುನಾಡಿನಿಂದ ಜೋಳ ಕೊಂಡುಕೊಳ್ಳಲು ಬರುವ ದಲ್ಲಾಳಿಗಳನ್ನು ಇಲ್ಲಿಗೆ ಬರಲು ಬಿಡುತ್ತಿಲ್ಲ. ಅವರು ಬಂದರೆ ದರ ಹೆಚ್ಚಾಗಿ ನಿಗದಿಪಡಿಸುತ್ತಾರೆ ಎಂಬ ಉದ್ದೇಶದಿಂದ ಜೋಳವನ್ನು ನಾವೇ ಖರೀದಿಸಿ ತಮಿಳುನಾಡಿಗೆ ತಲುಪಿಸುತ್ತೇವೆ ಎಂದು ಬೆದರಿಕೆ ಹಾಕಿ ತಡೆದಿದ್ದಾರೆ. ಈಗ ಇವರೇ ದರವನ್ನು ನಿಗದಿಪಡಿಸಿಕೊಂಡು ಜೋಳವನ್ನು ಖರೀದಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ರೈತರು ಜೋಳದ ತೆನೆ ಕಟಾವು ಮಾಡಿಸಿ ಅದನ್ನು ಯಂತ್ರದ ಮೂಲಕ ಜೋಳ ಮಾಡುವವರೆಗೆ ಒಂದು ಎಕರೆಗೆ 5ರಿಂದ 6 ಸಾವಿರ ರೂ. ಆಗುತ್ತದೆ. ಇದರಿಂದ ರೈತರಿಗೆ ಯಾವುದೇ ಲಾಭಾಂಶ ಸಿಗುವುದಿಲ್ಲ. ಆದ್ದರಿಂದ ಕೃಷಿ ಇಲಾಖೆಯಿಂದ ಬೆಂಬಲ ಬೆಲೆ ನಿಗದಿಪಡಿಸಿ ಕೊಂಡುಕೊಂಡರೆ ರೈತರಿಗೆ ಅನುಕೂಲವಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ರೈತರು ಒತ್ತಾಯಿಸಿದ್ದಾರೆ.


from India & World News in Kannada | VK Polls https://ift.tt/3kiG6zD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...