ಹೊಸದಿಲ್ಲಿ: ನ್ಯೂಜಿಲೆಂಡ್ ವಿರುದ್ಧ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಹಣಾಹಣಿಯಲ್ಲಿ ಸೋಲು ಅನುಭವಿಸಿದ ಬಳಿಕ ಟೀಕೆಗಳಿಗೆ ಒಳಗಾಗಿದ್ದ ಭಾರತ ತಂಡದ ನಾಯಕ , ವಿರುದ್ಧ ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ಗೆದ್ದು ಟೀಕಾಕಾರರಿಗೆ ತಿರುಗೇಟು ನೀಡಿದ್ದರು. ಲಾರ್ಡ್ಸ್ ಮೈದಾನದಲ್ಲಿ ಐದನೇ ದಿನ ಸೋಲಿನ ಭೀತಿಯಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ್ದ ಭಾರತ ತಂಡ, ಆದಷ್ಟು ಬೇಗ ರಿಷಭ್ ಪಂತ್ ಹಾಗೂ ಇಶಾಂತ್ ಶರ್ಮಾ ಅವರ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆದರೆ, 9ನೇ ವಿಕೆಟ್ಗೆ ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ 89 ರನ್ ಜೊತೆಯಾಟವಾಡುವ ಮೂಲಕ ಪಂದ್ಯದ ದಿಕ್ಕನ್ನು ಬದಲಿಸಿದ್ದರು. ಶಮಿ ಹಾಗೂ ಬುಮ್ರಾ ಜೋಡಿಯ ಅದ್ಭುತ ಜೊತೆಯಾಟದಿಂದ ಭಾರತ ತಂಡ, ಇಂಗ್ಲೆಂಡ್ ತಂಡಕ್ಕೆ 272 ರನ್ ಗುರಿ ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ತಂಡವನ್ನು ಭಾರತ ತಂಡದ ಬೌಲರ್ಗಳು ಕೇವಲ 120 ರನ್ಗಳಿಗೆ ಆಲೌಟ್ ಮಾಡಿದ್ದರು. ಆ ಮೂಲಕ ಭಾರತ ತಂಡ 151 ರನ್ಗಳ ಭರ್ಜರಿ ಗೆಲುವು ಪಡೆದು, ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಗಳಿಸಿತು. ಡ್ರೆಸ್ಸಿಂಗ್ ಕೊಠಡಿಯಲ್ಲಿ ಆಟಗಾರರ ನಡುವೆ ಅತ್ಯುತ್ತಮ ಬಾಂಧವ್ಯವಿದೆ. ಈ ಕಾರಣದಿಂದಾಗಿಯೇ ಭಾರತ ಇತ್ತೀಚಿನ ದಿನಗಳಲ್ಲಿ ಯಶಸ್ಸಿಯಾಗುತ್ತಿದೆ ಎಂದು ಮಾಜಿ ವಿಕೆಟ್ ಕೀಪರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಇತ್ತೀಚಿನ ದಿನಗಳಲ್ಲಿ ಭಾರತ ತಂಡದ ಡ್ರೆಸ್ಸಿಂಗ್ ಕೊಠಡಿಯನ್ನು ನೋಡಬಹುದು. ವೇಗಿ ಇಶಾಂತ್ ಶರ್ಮಾ, ವಿರಾಟ್ ಕೊಹ್ಲಿ ಜೊತೆ ತಿರುಗಾಡುತ್ತಿರುವುದನ್ನು ನೋಡಿದ್ದೇವೆ. ಅಲ್ಲದೆ, ವಿಭಿನ್ನ ವ್ಯಕ್ತಿತ್ವ ಹೊಂದಿರುವ ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾಧವ್ ಜೊತೆಯಲ್ಲಿಯೇ ಇರುವುದನ್ನು ಕೂಡ ಕಂಡಿದ್ದೇವೆ," ಎಂದರು. "ಮತ್ತೊಂದೆಡೆ, ವಿಕೆಟ್ ಕೀಪರ್ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಜೊತೆ ಕಾಣಿಸಿಕೊಳ್ಳುತ್ತಾರೆ. ಇದರಲ್ಲಿ ಒಬ್ಬರದು ನಾರ್ಥ್ ಹಾಗೂ ಮತ್ತೊಬ್ಬರದು ವೆಸ್ಟ್. ಈಸ್ಟ್ನಿಂದಲೂ ಹಲವು ಆಟಗಾರರು ಭಾರತ ತಂಡದಲ್ಲಿ ಇದ್ದಾರೆ ಎಂದು ಭಾವಿಸುತ್ತೇನೆ," ಎಂದು ಪಾರ್ಥಿವ್ ಪಟೇಲ್ ಪ್ಲೇಯರ್ಸ್ ಲೌಂಗ್ ಪಾಡ್ಕಾಸ್ಟ್ನಲ್ಲಿ ತಿಳಿಸಿದ್ದಾರೆ. "ಇನ್ನು ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್/ಕೃಣಾಲ್ ಪಾಂಡ್ಯ ಅವರನ್ನು ನೋಡುವುದಾದರೆ, ಇವರು ಉತ್ತಮ ಸ್ನೇಹಿತರು. ಒಬ್ಬರಿಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ, ಮತ್ತೊಬ್ಬರು ಹಿಂದಿ ಮಾತನಾಡುತ್ತಾರೆ. ಆದರೂ ಇವರೆಲ್ಲಾ ಒಟ್ಟಿಗೆ ಇರುತ್ತಾರೆ. ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ತೋರಲು ಕಾರಣವೇನೆಂದರೆ, ಎಲ್ಲಾ ಆಟಗಾರರು ಒಟ್ಟಾಗಿ ಇದ್ದಾರೆ. ಅಲ್ಲದೆ, ಇದರ ಶ್ರೇಯ ಐಪಿಎಲ್ ಟೂರ್ನಿಗೂ ಸಲ್ಲಬೇಕೆಂದು," ಪಾರ್ಥಿವ್ ಪಟೇಲ್ ಹೇಳಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3mjY2fK