ಪುತ್ತೂರು: ಪ್ರಧಾನಿ ತನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದ್ದಾರೆ. ಪುತ್ತೂರಿನ ಮಗಳಾದ ತಾನು ಮೋದಿ ಹೆಸರಿಗೆ ಕಪ್ಪು ಚುಕ್ಕೆ ಬಾರದಂತೆ ಕೆಲಸ ಮಾಡಿ ತೋರಿಸುವೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಹೇಳಿದರು. ಬಿಜೆಪಿ ವತಿಯಿಂದ ಸೋಮವಾರ ಇಲ್ಲಿನ ಮರಾಠಿ ಸಭಾಭವನದಲ್ಲಿ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮೂರು ಕೃಷಿ ಕಾಯಿದೆ ಬಗ್ಗೆ ಚರ್ಚೆಯಾಗುತ್ತಿದೆ. 10 ತಿಂಗಳಿನಿಂದ ದಿಲ್ಲಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ಈ ಸವಾಲಿನ ನಡುವೆ ಕೆಲಸ ಮಾಡಬೇಕಿದೆ. 2014ರಲ್ಲಿ ದೇಶದ ಜಿಡಿಪಿಗೆ ಕೃಷಿಯ ಕೊಡುಗೆ ಶೇ.14 ಇದ್ದಿದ್ದು, ಈಗ ಶೇ.20ಕ್ಕೆ ಏರಿದೆ. ಆಹಾರ ಉತ್ಪಾದನೆ ರಫ್ತಿನಲ್ಲಿ ದೇಶ 9ನೇ ಸ್ಥಾನಕ್ಕೆ ಏರಿದೆ. ಬಜೆಟ್ನಲ್ಲಿ ಕೃಷಿಗೆ ಯುಪಿಎ ಸರಕಾರ 23 ಸಾವಿರ ಕೋಟಿ ನೀಡಿದ್ದರೆ, ಮೋದಿ ಸರಕಾರ 1,31,000 ಕೋಟಿ ನೀಡಿದೆ. ದೇಶದ 27 ಕೋಟಿ ರೈತರ ಕುಟುಂಬಕ್ಕೆ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 1,57,000 ಕೋಟಿ ರೂ. ಜಮೆ ಮಾಡಲಾಗಿದೆ. ದೇಶದಲ್ಲಿ ಕೃಷಿ ಉತ್ಪಾದಕರ 10 ಸಾವಿರ ಸಂಘಗಳನ್ನು ಸ್ಥಾಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ತೆಂಗು ರಫ್ತಿನ ಮೇಲಿನ ನಿರ್ಬಂಧ ತೆರವು ಮಾಡಲಾಗಿದೆ ಎಂದರು. ಇತರ ರಾಜ್ಯಗಳಲ್ಲಿ ಮರ ಬೆಳೆಸಲು, ಮಾರಲು ಅವಕಾಶವಿದ್ದು, ಕರ್ನಾಟಕದಲ್ಲಿ ಮಾತ್ರ ದೇಶದಲ್ಲೇ ಅತ್ಯಂತ ಕಠಿಣ ಅರಣ್ಯ ಕಾನೂನುಗಳಿವೆ. ಇದನ್ನು ಸಡಿಲಿಸಿ ರೈತರು ಮರ ಕಡಿದು, ಮಾರಲು ಅವಕಾಶ ನೀಡುವ ಅಗತ್ಯವಿದೆ. ಮಣ್ಣು ಪರೀಕ್ಷಾ ಕೇಂದ್ರ ಪುತ್ತೂರಿನಲ್ಲಿ ತೆರೆಯಲು ಶಾಸಕರು ಮನವಿ ಮಾಡಿದ್ದಾರೆ. ಇದಕ್ಕೆ ದೊಡ್ಡ ಮಟ್ಟದ ಬಜೆಟ್ ಬೇಕಾದ ಕಾರಣ ಶಿವಮೊಗ್ಗ ಕೃಷಿ ವಿವಿಯಡಿ ಇದನ್ನು ನಡೆಸಲು ಕ್ರಮ ಕೈಗೊಳ್ಳಬೇಕಿದೆ. ಅದೇ ರೀತಿ ಖಾದ್ಯ ತೈಲದಲ್ಲಿ ದೇಶ ಸ್ವಾವಲಂಬಿಯಾಗಬೇಕು. ಈಗ ಶೇ.70 ಖಾದ್ಯ ತೈಲ ಆಮದಾಗುತ್ತಿದೆ ಎಂದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಅಭಿನಂದನಾ ಭಾಷಣ ಮಾಡಿ, ಕೃಷಿ ಕುಟುಂಬದ ಪುತ್ತೂರಿನ ಹೆಣ್ಮಗಳು ಕೇಂದ್ರ ಕೃಷಿ ಸಚಿವೆಯಾಗಿರುವುದು ಪುತ್ತೂರಿಗೆ ಹೆಮ್ಮೆ. ಹೋರಾಟದಿಂದಲೇ ಮೇಲೆ ಬಂದವರು ಶೋಭಾ. ಇಂದು ಪಂಚಾಯತ್ರಾಜ್ ವ್ಯವಸ್ಥೆಯಲ್ಲಿ ಪಿಡಿಒ ಎಂಬ ಪರಿಕಲ್ಪನೆ ಇದ್ದರೆ ಇದಕ್ಕೆ ಕಾರಣ ಕರಂದ್ಲಾಜೆ ಎಂದರು.
from India & World News in Kannada | VK Polls https://ift.tt/3yd3UJO