ಗದಗ್‌ನಲ್ಲಿ ರೈತರ ಹಿಂದೆ ಬಿದ್ದ ಕಳ್ಳರು..! ಅನ್ನದಾತರ ಬೆವರಿನ ಫಲಕ್ಕೆ ಕನ್ನ..!

ವಿಕ ವಿಶೇಷ : ಅನ್ನದಾತನ ಮುಂಗಾರು ಹಂಗಾಮಿನ ವರ್ಷದ ಹರ್ಷದ ಮೇಲೆ ಈಗ ಕಳ್ಳರ ಕಣ್ಣು ಬಿದ್ದಿದೆ. ಭಾರಿ ಮಳೆಯ ಮಧ್ಯೆಯೂ ಬೆಳೆದ ಮುಂಗಾರು ಹಂಗಾಮಿನ ಮಾರಿದ ರೈತರ ಹಣ ಕಳ್ಳರ ಜೇಬು ಸೇರುತ್ತಿರುವುದು ಸಮೂಹದ ಆತಂಕಕ್ಕೆ ಕಾರಣವಾಗಿದೆ. ಶನಿವಾರ ಒಂದೇ ದಿನ -ಬೆಟಗೇರಿ ಅವಳಿ ನಗರದಲ್ಲಿ ಮೂವರು ರೈತರು ಹಣ ಕಳೆದುಕೊಂಡಿದ್ದಾರೆ. ಅದರಲ್ಲಿ ಗದಗ ಎಪಿಎಂಸಿಯಲ್ಲಿ ಹೆಸರು ಮಾರಾಟ ಮಾಡಿ, ಹಣ ತೆಗೆದುಕೊಂಡು ಹೊರಟಾಗ ಕಳ್ಳತನಕ್ಕೆ ಒಳಗಾದ ಕೊಪ್ಪಳ ಜಿಲ್ಲೆಯ ರೈತ ಮಾತ್ರ ದೂರು ದಾಖಲಿಸಿದ್ದಾರೆ. 44 ಸಾವಿರ ಕಳ್ಳತನ: ಕೊಪ್ಪಳ ಜಿಲ್ಲೆ ಕವಲೂರ ಗ್ರಾಮದ ರೈತ ಕೊಟ್ರಪ್ಪ ರುದ್ರಪ್ಪ ನಿಟ್ಟಾಲಿ ಅವರು ಹೆಸರು ಮಾರಿದ 44 ಸಾವಿರ ರೂ. ಕಳೆದುಕೊಂಡಿದ್ದಾರೆ. ರೈತ ಕೊಟ್ರಪ್ಪ ಅವರು ಆಗಸ್ಟ್ 18ರಂದು ಗದಗ ಎಪಿಎಂಸಿಗೆ ಬಂದು ಹೆಸರು ಮಾರಾಟ ಮಾಡಿದ್ದಾರೆ. ಒಟ್ಟು 44,570 ರೂ. ತೆಗೆದುಕೊಂಡು ಗದಗ ಹೊಸ ಬಸ್‌ ನಿಲ್ದಾಣಕ್ಕೆ ಬಂದಿದ್ದಾರೆ. ನಿಲ್ದಾಣದಲ್ಲಿ ಕೊಪ್ಪಳ ಬಸ್‌ ಹತ್ತುವಾಗ ನೂಕುನುಗ್ಗಲು ಉಂಟಾಗಿದೆ. ಆದರೂ ಪ್ರಯಾಸಪಟ್ಟು ರೈತ ಕೊಟ್ರಪ್ಪ ಸೀಟು ಹಿಡಿದು ಕುಳಿತಿದ್ದಾರೆ. ಅನುಮಾನಗೊಂಡ ಜೇಬು ನೋಡಿಕೊಂಡಾಗ ಕತ್ತರಿ ಹಾಕಿ ಹಣ ಲಪಟಾಯಿಸಿದ್ದು ಗಮನಕ್ಕೆ ಬಂದಿದೆ. ಮತ್ತೆ ತಕ್ಷಣ ಬಸ್‌ನಿಂದ ಇಳಿದು ಹುಡುಕಾಡಿದ್ದಾರೆ. ಅಕ್ಕಪಕ್ಕದವರನ್ನು ವಿಚಾರಿಸಿದ್ದಾರೆ. ದಿಕ್ಕು ತೋಚದ ರೈತ, ಕುಟುಂಬದ ಸದಸ್ಯರನ್ನು ಕರೆಸಿ ಬೆಟಗೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಮುಂಡರಗಿ ಮತ್ತು ಗಜೇಂದ್ರಗಡ ತಾಲೂಕಿನ ಇಬ್ಬರು ರೈತರೂ ಸಹ ಒಟ್ಟು 13.5 ಸಾವಿರ ರೂ. ಕಳೆದುಕೊಂಡಿದ್ದಾರೆ. ಆದರೆ ಕಳ್ಳರ ಕೈಚಳಕದಿಂದ ಹಣ ಕಳೆದುಕೊಂಡಿದ್ದೋ ಅಥವಾ ಬೇಜವಾಬ್ದಾರಿಯಿಂದ ಕಳೆದುಕೊಂಡಿದ್ದೋ ಎನ್ನುವ ಗೊಂದಲದಿಂದ ಅವರು ಪೊಲೀಸರಿಗೆ ದೂರು ಕೊಟ್ಟಿಲ್ಲ. ಆದರೆ ಕಳೆದುಕೊಂಡ ಹಣ ಮಾತ್ರ ಬೆಳೆ ಮಾರಿದ್ದು ಎನ್ನುತ್ತಾರೆ ರೈತರು. ನಗದು ವ್ಯವಹಾರ ಬೇಡ: ಎಪಿಎಂಸಿಗೆ ಆಗಮಿಸುವ ರೈತರು ಸಾಧ್ಯವಾದಷ್ಟು ಚೆಕ್‌ ಮೂಲಕ ಇಲ್ಲವೇ ಆನ್‌ಲೈನ್‌ ಮೂಲಕ ಹಣದ ವ್ಯವಹಾರ ನಡೆಸುವುದು ಒಳಿತು. ಇದರಿಂದ ಕಳ್ಳತನಕ್ಕೆ ಅವಕಾಶ ಸಿಗುವುದಿಲ್ಲ. ಜತೆಗೆ ಹಣ ತೆಗೆದುಕೊಂಡು ಹೋಗುವಾಗ ಗರಿಷ್ಠ ಮಟ್ಟದ ಎಚ್ಚರಿಕೆ ವಹಿಸುವುದು ಬಿಟ್ಟು ಬೇರೆ ದಾರಿ ಇಲ್ಲಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು. ತಪ್ಪದ ಕಳ್ಳರ ಭೀತಿ: ಈ ಹಿಂದಿನ ವರ್ಷಗಳಲ್ಲಿ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ಮೇಲೆ ದೃಷ್ಟಿ ಹಾಯಿಸಿದ್ದರು. ಈರುಳ್ಳಿ ಮತ್ತು ಮೆಣಸಿನಕಾಯಿಗೆ ಬಂಗಾರದ ಬೆಲೆ ಬಂದ ಕಾರಣ, ಕಳ್ಳರು ರಾತ್ರಿ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ಕಳ್ಳತನ ಮಾಡುತ್ತಿದ್ದರು. ಕಳ್ಳರ ಹಾವಳಿಯಿಂದ ಬೇಸತ್ತ ಜಿಲ್ಲೆಯ ರೈತರು ರಾತ್ರಿ ವೇಳೆ ಲಾಠಿ ಹಿಡಿದು ಬೆಳೆ ಕಾಯುವಂತಾಗಿತ್ತು. ಸದ್ಯ ಬೆಳೆ ಮಾರಿದ ಹಣದ ಮೇಲೆ ಕಳ್ಳರ ದೃಷ್ಟಿ ಬಿದ್ದಿದ್ದು, ರೈತರ ಕಳ್ಳರ ಬಗ್ಗೆ ಎಚ್ಚರಿಕೆಯಿಂದಿರಬೇಕಿದೆ. 3.15 ಲಕ್ಷ ರೂ. ಬಂಗಾರ ಕಳ್ಳತನ: ಬೆಳೆ ಮಾರಿದ ಹಣ ಕಳ್ಳತನದ ಜತೆಗೆ ಅವಳಿ ನಗರದಲ್ಲಿ ಮಹಿಳೆಯೊಬ್ಬರ 3.15 ಲಕ್ಷ ರೂ. ಮೊತ್ತದ ಬಂಗಾರದ ಆಭರಣದ ಬ್ಯಾಗ್‌ ಸಹ ಕಳ್ಳತನವಾಗಿದೆ. ವಾರದ ಹಿಂದಷ್ಟೇ ಉತ್ತರ ಕನ್ನಡ ಜಿಲ್ಲೆ ಕುಮಟಾದ ಸೌಮ್ಯ ಸತೀಶ ಅವರು ಗದಗನಲ್ಲಿರುವ ತಮ್ಮ ಅಕ್ಕನ ಮನೆಗೆ ಭೇಟಿ ನೀಡಿ, ವಾಪಸ್‌ ಹೋಗುವಾಗ ಹೊಸ ಬಸ್‌ ನಿಲ್ದಾಣದಲ್ಲೇ ಕಳ್ಳತನಕ್ಕೆ ಒಳಗಾಗಿದ್ದಾರೆ. ಕಿವಿಯೋಲೆ, ಮಾಂಗಲ್ಯ ಸರ ಸೇರಿದಂತೆ ಒಟ್ಟು 3.15 ಲಕ್ಷ ರೂ. ಮೌಲ್ಯದ ಆಭರಣಗಳಿದ್ದ ಬ್ಯಾಗ್‌ಅನ್ನು ಖದೀಮರು ಲಪಟಾಯಿಸಿರುವುದು ಅವಳಿ ನಗರದ ಜನರಲ್ಲಿ ಭೀತಿ ಮೂಡಿಸಿದೆ. ಈ ಕುರಿತು ಬೆಟಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.


from India & World News in Kannada | VK Polls https://ift.tt/3DbGPLm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...