ಹರವೆ ಮಹೇಶ್ ಕಳೆದ ಮುಂಗಾರು ಹಂಗಾಮಿನಲ್ಲಿ ಬಿದ್ದ ಮಳೆಗೆ ಜಿಲ್ಲೆಯ ನಾನಾ ಕಡೆ ಬಡವರ ಬಾದಾಮಿ ಬಿತ್ತನೆ ಮಾಡಲಾಗಿದ್ದು, ಇತ್ತೀಚೆಗೆ ಬಿದ್ದ ಮಳೆಯ ಪರಿಣಾಮ ಹಸಿರಿನಿಂದ ಕಂಗೊಳಿಸುತ್ತಿದೆ. ಪ್ರತಿ ವರ್ಷ ರೋಹಿಣಿ ಮಳೆಯ ಸಂದರ್ಭದಲ್ಲಿ ನೆಲಗಡಲೆಯನ್ನು ಬಿತ್ತನೆ ಮಾಡಲಾಗುತ್ತಿದ್ದು, ಕೆಲವೆಡೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿ ಕೊಂಡು ಬಿತ್ತನೆ ಕಾರ್ಯ ಮಾಡಲಾಗುತ್ತಿದೆ. ಮನೆಯಲ್ಲೇ ಸ್ವಂತ ಎತ್ತುಗಳಿದ್ದವರು ಸಾಲು ಹೊಡೆಸಿ ನೆಲಗಡಲೆ ಬಿತ್ತನೆ ಮಾಡುತ್ತಾರೆ. ರಸ್ತೆಯ ಬದಿಯ ಜಮೀನುಗಳಲ್ಲಿ ನೆಲಗಡಲೆ ಹಸಿರಿನಿಂದ ನಳನಳಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಎಣ್ಣೆಕಾಳು ಬೆಳೆಯಾದ ನೆಲಗಡಲೆ ಖಾದ್ಯ ತೈಲಗಳ ಬೆಳೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದು ಮೂರು ತಿಂಗಳ ಬೆಳೆಯಾಗಿದ್ದು, ಈಗಾಗಲೇ ನೆಲಗಡಲೆ ಬಿತ್ತನೆಯಾಗಿ ಒಂದು ತಿಂಗಳೇ ಆಗಿದೆ. ಜಿಲ್ಲೆಯಲ್ಲಿ ಚಾಮರಾಜನಗರ ತಾಲೂಕಿನಲ್ಲಿ ಬಿತ್ತನೆಯ ಗುರಿ- 1950 ಹೆಕ್ಟೇರ್ಗೆ -760, ಗುಂಡ್ಲುಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 4500 ಹೆಕ್ಟೇರ್ ಗುರಿ ಇದ್ದರೆ, 4681 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಉಳಿದಂತೆ ಕೊಳ್ಳೇಗಾಲದಲ್ಲಿ 460 ಹೆಕ್ಟೇರ್ಗೆ 177, ಹನೂರಿನಲ್ಲಿ1090 ಹೆಕ್ಟೇರ್ಗೆ 543, ಯಳಂದೂರು ತಾಲೂಕಿನಲ್ಲಿ ನೆಲಗಡಲೆ ಬಿತ್ತನೆಯಾಗಿಲ್ಲ. ಕೃಷಿ ಇಲಾಖೆವರು ಈ ಬಾರಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್ನಲ್ಲಿ ನೆಲಗಡಲೆ ಬಿತ್ತನೆ ಮಾಡುವ ಗುರಿಹೊಂದಿತ್ತು, ಸಾಧನೆ ಮಾಡಿರುವುದು 6161 ಹೆಕ್ಟೇರ್ನಲ್ಲಿ ಮಾತ್ರ. ಮಳೆಯ ಪ್ರಮಾಣ ಜಿಲ್ಲೆಯ ಚಾಮರಾಜನಗರ ತಾಲೂಕಿನಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಆಗಸ್ಟ್ ತಿಂಗಳ 18ರವರೆಗೆ ವಾಡಿಕೆ ಮಳೆ 333, ಬಿದ್ದಮಳೆ -381 ಮಿ.ಮೀ. ಗುಂಡ್ಲುಪೇಟೆಯಲ್ಲಿ 352ಕ್ಕೆ ಅತಿ ಹೆಚ್ಚು 382 ಮಿ.ಮೀ, ಕೊಳ್ಳೇಗಾಲದಲ್ಲಿ 365ಕ್ಕೆ- 299, ಹನೂರಿನಲ್ಲಿ 311ಕ್ಕೆ -325, ಯಳಂದೂರು ತಾಲೂಕಿನಲ್ಲಿ 376ಕ್ಕೆ 336.2 ಮಿ.ಮೀ. ಮಳೆಯಾಗಿದ್ದು, ಒಟ್ಟು ಶೇಕಡಾವಾರು 97ರಷ್ಟು ಮಳೆಯಾಗಿದೆ. ನೆಲಗಡಲೆಗೆ ತುಂತುರು ಮಳೆಯಾದರೂ ಸಾಕು, ಬೆಳೆ ಉತ್ತಮವಾಗಿ ಬೆಳೆಯುತ್ತದೆ ಎನ್ನುತ್ತಾರೆ ರೈತರು.
from India & World News in Kannada | VK Polls https://ift.tt/3mk2fjA