ಜನಾಶೀರ್ವಾದ ಯಾತ್ರೆಯಲ್ಲಿ ಗಾಳಿಯಲ್ಲಿ ಗುಂಡು: ಖೂಬಾ, ಚಿಂಚನಸೂರು ಬಂಧನಕ್ಕೆ ಕಾಂಗ್ರೆಸ್ ಆಗ್ರಹ

: ಜನಾಶೀರ್ವಾದ ಯಾತ್ರೆಯಲ್ಲಿ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ , ಬಾಬುರಾವ್ ಚಿಂಚನಸೂರ್‌ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರ ಮೇಲೆ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಘಟಕ ಆಗ್ರಹಿಸಿದೆ. ಈ‌ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಗುಂಡು ಹಾರಿಸಿದ ಪ್ರಕರಣದಲ್ಲಿ ಭಗವಂತ್ ಖೂಬಾ, ಬಾಬುರಾವ್ ಚಿಂಚನಸೂರ್‌ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರ ಮೇಲೆ ಕೇಸ್ ದಾಖಲಿಸಿ ಬಂಧಿಸಬೇಕು. ಇವರೇ ಈ ಪ್ರಕರಣದ ಹೊಣೆಗಾರರು. ಬಿಜೆಪಿ ಪಕ್ಷ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿರುವ ಶಂಕೆ ಇದ್ದು, ಪೊಲೀಸರು ಬಿಜೆಪಿ ಕಚೇರಿಗಳನ್ನು ಶೋಧಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಬಂದೂಕು ಹಿಡಿದು ಅಟ್ಟಹಾಸಗೈದಿದ್ದು ಮಾಜಿ ಸಚಿವ ಬಾಬುರಾವ್ ಮತ್ತು ಇತರೆ ಬಿಜೆಪಿ ಮುಖಂಡರು. ಆದರೆ ಪೊಲೀಸರು ಬಂಧಿಸಿದ್ದು ಕೇವಲ ಕಾರ್ಯಕರ್ತರನ್ನು ಮಾತ್ರ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಮಾಜಿ ಸಚಿವರ ಮೇಲೆ ಕೇಸ್ ದಾಖಲಿಸಿ, ಬಂಧಿಸದಿರುವುದೇಕೆ? ತನ್ನ ರಾಜಕೀಯ ಹಿತಾಸಕ್ತಿಗೆ ಅಮಾಯಕ ಕಾರ್ಯಕರ್ತರನ್ನ ಬಲಿ ಕೊಡುವುದು ತಾಲಿಬಾನ್ ಸಂಸ್ಕೃತಿಯ ಬಿಜೆಪಿಗೆ ಹಳೆಯ ಚಾಳಿ ಎಂದು ಕಾಂಗ್ರೆಸ್ ಟೀಕಿಸಿದೆ.


from India & World News in Kannada | VK Polls https://ift.tt/3CZANNV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...