ಕರ್ನಾಟಕದಲ್ಲಿ ಹೆಚ್ಚುತ್ತಿದೆ ಡೆಂಗಿ, ಚಿಕೂನ್‌ ಗುನ್ಯಾ; ಇರಲಿ ಎಚ್ಚರ, ಸೊಳ್ಳೆಗಳ ನಿಯಂತ್ರಣ ಅತ್ಯಗತ್ಯ

ಕೋವಿಡ್‌ ವಿರುದ್ಧ ಕಾದಾಟ ನಡೆಯುತ್ತಲೇ ಇದೆ. ಇದರ ಮಧ್ಯೆ ಮುಂಗಾರು ಮಳೆ ಈ ವರ್ಷ ತೀವ್ರವಾಗಿದೆ. ಇದರಿಂದ ಸೊಳ್ಳೆಗಳ ಸಂತತಿ ವಿಪರೀತವಾಗಿದೆ. ಈಡೀಸ್‌ ಈಜಿಪ್ಟೈ ಎಂಬ ಹೆಣ್ಣು ಸೊಳ್ಳೆಯ ಕಡಿತದಿಂದ ಹಾಗೂ ಚಿಕೂನ್‌ಗುನ್ಯಾ ಹರಡುತ್ತದೆ. ಮಳೆಗಾಲದಲ್ಲಿಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರಾಜ್ಯದಲ್ಲಿ ಇದರ ಸೋಂಕು ಈಗ ಹೆಚ್ಚಿದೆ. ಮೇ 11ರ ತನಕ 813 ಮಂದಿ ಡೆಂಗಿಪೀಡಿತರಾಗಿದ್ದರು. 2020ರಲ್ಲಿ 3502 ಪ್ರಕರಣಗಳು ವರದಿಯಾಗಿದ್ದವು. ಇದೇ ಅವಧಿಯಲ್ಲಿ 1181 ಮಂದಿಗೆ ಚಿಕೂನ್‌ ಗೂನ್ಯಾ ಸೋಂಕು ತಗುಲಿತ್ತು. 2019ರಲ್ಲಿ 18,183 ಜನ ಡೆಂಗಿ ಪೀಡಿತರಾಗಿದ್ದರು. 17 ಮಂದಿ ಮೃತಪಟ್ಟಿದರು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಎಂದು ನಿರ್ಲಕ್ಷಿಸುವಂತೆಯೇ ಇಲ್ಲ. ಏಕೆಂದರೆ ನೆರೆ ರಾಜ್ಯಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಿದೆ. ಈ ಕಾರಣಕ್ಕೆ ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲ ಜಿಲ್ಲಾಡಳಿತಗಳಿಗೂ ಸುತ್ತೋಲೆ ಹೊರಡಿಸಿದೆ. ಕಟ್ಟೆಚ್ಚರ ವಹಿಸಿ ಪ್ರತಿಬಂಧಕ ಕ್ರಮಗಳನ್ನು ವಹಿಸಲು ಸೂಚಿಸಿದೆ. ಸ್ಥಳೀಯ ಆಡಳಿತ ಸಂಸ್ಥೆಗಳು ಸೊಳ್ಳೆ ನಿರೋಧಕ ಔಷಧ ಸಿಂಪಡಣೆಗೂ ಆದೇಶ ನೀಡಿದೆ. ಸ್ವಚ್ಛವಾದ ನಿಂತ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಹೆಚ್ಚಾಗಿ ಹಗಲಿನಲ್ಲಿ ಕಚ್ಚುತ್ತದೆ. ಈಡೀಸ್‌ ಸೊಳ್ಳೆಯು ಶುದ್ಧ ನೀರಿನಲ್ಲಿ ಮೊದಲಿಗೆ ಮೊಟ್ಟೆ, ನಂತರ ಲಾರ್ವಾ, ಪ್ಯೂಪ ಪ್ರಕ್ರಿಯೆಯಲ್ಲಿ ತನ್ನ ಜೀವನ ಚಕ್ರ ಪೂರ್ಣಗೊಳಿಸಲು 8ರಿಂದ 10 ದಿನ ತೆಗೆದುಕೊಳ್ಳುತ್ತದೆ. ಇದರ ಕಚ್ಚುವಿಕೆಯಿಂದ ಕೇವಲ ಡೆಂಗೆ ಮಾತ್ರವಲ್ಲದೇ ಗಂಭೀರವಾಗಿ ಕಾಡುವ ಸಹ ಬರುತ್ತದೆ. ಲಕ್ಷಣಗಳೇನು? ಡೆಂಗಿಗೆ ಜ್ವರ, ತಲೆನೋವು, ಮೈಕೈ ನೋವು, ವಾಕರಿಕೆ, ವಾಂತಿ ಕಂಡುಬಂದರೆ; ಚಿಕೂನ್‌ ಗುನ್ಯಾದಲ್ಲಿ ಜ್ವರ, ತಲೆನೋವಿನೊಂದಿಗೆ ಮಂಡಿ, ಮೊಣಕಾಲು, ಮೊಣಕೈಗಳಲ್ಲಿ ಹಾಗೂ ಕೀಲುಗಳ ಸಂಧಗಳಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಇದು ಬಂದರೆ ಡೆಂಗಿಯಂತೆ ಪ್ರಾಣಾಪಾಯ ಅಲ್ಲವಾದರೂ ಒಮ್ಮೆಗೆ ಗುಣ ಹೊಂದುವುದಿಲ್ಲ. ತೀವ್ರತರವಾದ ನೋವಿನಿಂದ ಕೂಡಿದ್ದು, ಹೈರಾಣಾಗಿಸಿ ಬಿಡುತ್ತದೆ. ಇದೇ ಲಕ್ಷಣಗಳು ಕೋವಿಡ್‌ನಲ್ಲೂ ಕಾಣಿಸಿಕೊಳ್ಳುವುದರಿಂದ ರೋಗಿಗಳಲ್ಲಿ ಭೀತಿ ಹೆಚ್ಚುತ್ತದೆ. ಚಿಕಿತ್ಸೆ ಏನು? ಈ ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಂಡು, ಸೂಕ್ತ ಚಿಕಿತ್ಸೆ ಪಡೆಯಬೇಕು. ಸೊಳ್ಳೆ ನಿಯಂತ್ರಣ ಮುಖ್ಯಮನೆಯ ಒಳಗೆ, ಹೊರಗೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಕುಡಿಯಲು ಶೇಖರಿಸಿದ ಹಾಗೂ ಸ್ನಾನ ಸೇರಿದಂತೆ ಬಳಕೆಗೆ ಸಂಗ್ರಹಿಸಿಟ್ಟ ನೀರಿನ ಡ್ರಮ್‌, ಬಿಂದಿಗೆ, ಪಾತ್ರೆ ಹಾಗೂ ತೊಟ್ಟಿಯ ಮೇಲೆ ಸರಿಯಾಗಿ ಮುಚ್ಚಳ ಮುಚ್ಚಬೇಕು. ಇದರಿಂದ ಸೊಳ್ಳೆ ಸಂತತಿ ಬೆಳೆಯುವುದಿಲ್ಲ. ವಾರಕ್ಕೆ 2 ಬಾರಿ ನೀರು ಖಾಲಿ ಮಾಡಿ ಅವುಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಮನೆಯ ಸಮೀಪ ಒಡೆದ ಟಯರ್‌, ತೆಂಗಿನ ಚಿಪ್ಪು, ಪ್ಲಾಸ್ಟಿಕ್‌ ಬಾಟಲಿ, ಕವರ್‌ಗಳು ರಾಶಿ ಹಾಕದಂತೆ ಎಚ್ಚರ ವಹಿಸಬೇಕು. ಹೂ ಕುಂಡಗಳಲ್ಲಿ ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಏರ್‌ಕೂಲರ್‌ಗಳಲ್ಲಿ ಆಗಾಗ ನೀರು ಬದಲಿಸಬೇಕು. ವೈಯಕ್ತಿಕ ಸ್ವಚ್ಛತೆಯೊಂದಿಗೆ, ಸೊಳ್ಳೆಗಳು ಉತ್ಪತ್ತಿಯಾಗದಂತೆ ಹಾಗೂ ಅವುಗಳಿಂದ ಕಚ್ಚಿಸಿಕೊಳ್ಳದಂತೆ ಎಚ್ಚರವಹಿಸಬೇಕು. ಕುರಿತೂ ಇರಲಿ ಎಚ್ಚರ ಸೊಳ್ಳೆಗಳಿಂದ ಹರಡುವ ರೋಗಗಳಲ್ಲಿ ಮಲೇರಿಯಾ ಸಹ ಒಂದು. ಇದು ಅನಾಫಿಲೀಸ್‌ ಎಂಬ ಸೊಳ್ಳೆ ಕಡಿತದಿಂದ ಬರುತ್ತದೆ. ಮಳೆಗಾಲದಲ್ಲೂ ಈ ರೋಗ ಹೆಚ್ಚು. ಮಲೇರಿಯಾ ರೋಗಿಗೆ ಕಚ್ಚಿದ ಸೊಳ್ಳೆ ಆರೋಗ್ಯವಂತರಿಗೆ ಕಚ್ಚಿದ 10ರಿಂದ 14 ದಿನಗಳೊಳಗೆ ರೋಗ ಹರಡುತ್ತದೆ. ಮಲೇರಿಯಾ ಪರಾವಲಂಬಿ ಜೀವಿಗಳು ಮನುಷ್ಯನ ದೇಹಕ್ಕೆ ಸೇರಿದ 10 ದಿನದೊಳಗೆ ಚಳಿ ಜ್ವರ ಪ್ರಾರಂಭವಾಗುತ್ತದೆ. ಹೀಗೆ ಸೊಳ್ಳೆ ಕಚ್ಚುವಿಕೆಯಿಂದ ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.


from India & World News in Kannada | VK Polls https://ift.tt/3z15Bvs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...