ದೊಡ್ಡವರಿಗೆ ಗೌರವ ಕೊಡೋದು ಕಲಿತುಕೋ: ಅಣ್ಣನಿಗೆ ಲಾಲು ಮಗನ ಪಾಠ, ಸಹೋದರರ ಕಿತ್ತಾಟ

ಪಟ್ನಾ: ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ಮತ್ತೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸೂಚನೆ ನೀಡಿದ ಬೆನ್ನಲ್ಲೇ, ಅವರ ಮಕ್ಕಳಲ್ಲಿ ಮತ್ತೊಮ್ಮೆ ಕಿತ್ತಾಟ ಶುರುವಾಗಿದೆ. ಬಿಹಾರದಲ್ಲಿ ನಾಯಕತ್ವ ವಹಿಸಿಕೊಂಡಿರುವ , ಯಾರ ಹಿಡಿತಕ್ಕೂ ಸಿಗದ ಅಣ್ಣ ವಿರುದ್ಧ ಹರಿಹಾಯ್ದಿದ್ದಾರೆ. 'ದೊಡ್ಡವರನ್ನು ಗೌರವಿಸುವಂತೆ ನಮ್ಮ ಪೋಷಕರು ನಮಗೆ ಹೇಳಿಕೊಟ್ಟಿದ್ದಾರೆ' ಎಂದು ಕಿಡಿಕಾರಿದ್ದಾರೆ. ಆರ್‌ಜೆಡಿ ಘಟಕದ ಅಧ್ಯಕ್ಷ ಹಾಗೂ ಅತಿ ಹಿರಿಯ ನಾಯಕ ಜಗದಾನಂದ ಸಿಂಗ್ ಅವರೊಂದಿಗೆ ತೇಜ್ ಪ್ರತಾಪ್ ಜಗಳವಾಡಿದ್ದಾರೆ. ಇದರಿಂದ ಕೋಪಗೊಂಡ ತೇಜಸ್ವಿ, ಅಣ್ಣನ ಮೇಲೆ ಅಸಮಾಧಾನ ತೋರಿಸಿದ್ದಾರೆ. 'ತೇಜ್ ಪ್ರತಾಪ್ ನನ್ನ ಅಣ್ಣನಿರಬಹುದು. ಆದರೆ ಹಿರಿಯರನ್ನು ಗೌರವಿಸುವಂತೆ ನಮ್ಮ ಪೋಷಕರು ನಮಗೆ ಕಲಿಸಿದ್ದಾರೆ. ರಾಜಕೀಯದಲ್ಲಿ ಅಸಮ್ಮತಿ ಹಾಗೂ ಕೋಪ ಸಾಮಾನ್ಯವಾಗಿದ್ದರೂ ನಾವು ಶಿಸ್ತಿನಿಂದ ಇರಬೇಕು' ಎಂದು ತೇಜಸ್ವಿ ಹೇಳಿದ್ದಾರೆ. ಬಿಹಾರ ರಾಜಕಾರಣದಲ್ಲಿ ತಮ್ಮನ್ನು 'ಕೃಷ್ಣ' ಎಂದು ಹೇಳಿಕೊಂಡಿದ್ದ ತೇಜ್ ಪ್ರತಾಪ್, ಕಿರಿಯ ಸಹೋದರನನ್ನು 'ಅರ್ಜುನ' ಎಂದು ಕರೆದಿದ್ದರು. ಆದರೆ 'ಅರ್ಜುನ'ನನ್ನು ನೇರವಾಗಿ ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂಬ ಕೋಪದಿಂದ 'ಕೃಷ್ಣ' ಶುಕ್ರವಾರ ಹೊರ ನಡೆದಿದ್ದಾರೆ ಎನ್ನಲಾಗಿದೆ. ತಮ್ಮ ಆಪ್ತನಾಗಿದ್ದ ಆರ್‌ಜೆಡಿ ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಕಾಶ್ ಯಾದವ್ ಅವರನ್ನು ಏಕಾಏಕಿ ಕಿತ್ತುಹಾಕಿರುವುದರಿಂದ ತೇಜ್ ಪ್ರತಾಪ್ ಆಕ್ರೋಶಗೊಂಡಿದ್ದರು. ಇದರಿಂದ ಜಗದಾನಂದ ಸಿಂಗ್ ವಿರುದ್ಧ ಕಿಡಿಕಾರಿದ್ದರು. ಈ ಕುರಿತಾಗಿ ಸಹೋದರನ ಜತೆ ಮಾತನಾಡಲು ತೆರಳಿದ್ದ ತೇಜ್ ಪ್ರತಾಪ್‌ಗೆ ತೇಜಸ್ವಿ ರಾಜಕೀಯ ಸಲಹೆಗಾರ ಸಂಜಯ್ ಯಾದವ್ ಅವಕಾಶ ನೀಡಿರಲಿಲ್ಲ. 'ಇಬ್ಬರು ಸಹೋದರರ ನಡುವೆ ಸಂಜಯ್ ಯಾದವ್ ಯಾರು? ನಾನು ತೇಜಸ್ವಿ ಜತೆ ಮಾತನಾಡುವುದನ್ನು ತಡೆದು ಆತನನ್ನು ಬೇರೆ ಕೊಠಡಿ ಸಮೀಪ ಕರೆದೊಯ್ದಿದ್ದಾರೆ. ಇದನ್ನು ನಾನು ಸಹಿಸುವುದಿಲ್ಲ' ಎಂದು ಮಾಧ್ಯಮದ ಮುಂದೆ ತೇಜ್ ಪ್ರತಾಪ್ ವಾಗ್ದಾಳಿ ನಡೆಸಿದರು. ಜೀವಕ್ಕೆ ಅಪಾಯವಿದೆ'ಪಕ್ಷದ ಸಂವಿಧಾನದ ಪ್ರಕಾರ ಯಾವುದೇ ನೋಟಿಸ್ ನೀಡದೆ ಆಕಾಶ್ ಯಾದವ್ ಅವರನ್ನು ತೆಗೆದುಹಾಕಿರುವುದು ಜಗದಾನಂದ ಸಿಂಗ್ ಅವರ ನಿರಂಕುಶ ಕ್ರಮವನ್ನು ತೋರಿಸುತ್ತದೆ. ಅವರು ಕಾರ್ಯಕರ್ತರನ್ನು ಅವಮಾನಿಸುವ ಮೂಲಕ ಪಕ್ಷಕ್ಕೆ ಹಾನಿ ಮಾಡುತ್ತಿದ್ದಾರೆ. ಇದನ್ನು ನನ್ನ ತಂದೆ ಲಾಲು ಪ್ರಸಾದ್ ತಮ್ಮ ಗಮನಕ್ಕೆ ತೆಗೆದುಕೊಳ್ಳಬೇಕು' ಎಂದು ಅವರು ಹೇಳಿದರು. ಜಗದಾನಂದ ಅವರನ್ನು ಮಹಾಭಾರತದ ದೃತರಾಷ್ಟ್ರ ಪಾತ್ರಕ್ಕೆ ಹೋಲಿಸಿದ ಅವರು, ಸಂಜಯ್ ಯಾದವ್‌ ಅವರನ್ನು ಶಕುನಿಗೆ ಹೋಲಿಸಿದ್ದಾರೆ. ಗುಪ್ತ ಶತ್ರುಗಳಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಕೆಲವು ದಿನಗಳ ಹಿಂದಷ್ಟೇ ತೇಜ್ ಪ್ರತಾಪ್ ಆರೋಪಿಸಿದ್ದರು.


from India & World News in Kannada | VK Polls https://ift.tt/3gkUO7I

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...