2015ರಲ್ಲಿ ವಿರಾಟ್‌ ಕೊಹ್ಲಿ ಹೇಳಿದ್ದ ಮಾತು ಸತ್ಯವಾಯಿತೆಂದ ಡೊನಾಲ್ಡ್‌!

ಹೊಸದಿಲ್ಲಿ: ಮುಂದಿನ ದಿನಗಳಲ್ಲಿ ಭಾರತವನ್ನು ವಿಶ್ವದ ಅತ್ಯುತ್ತಮ ತಂಡವನ್ನಾಗಿಸುತ್ತೇನೆಂದು 2015ರಲ್ಲಿ ನಾಯಕ ಹೇಳಿದ್ದ ಮಾತನ್ನು ಇದೀಗ ದಕ್ಷಿಣ ಆಫ್ರಿಕಾ ಬೌಲಿಂಗ್‌ ದಿಗ್ಗಜ ಸ್ಮರಿಸಿಕೊಂಡಿದ್ದಾರೆ. 2015ರಲ್ಲಿ ಭಾರತ ತಂಡ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಏಳನೇ ಸ್ಥಾನಕ್ಕೆ ಕುಸಿದಿತ್ತು. ಈ ವೇಳೆ ಭಾರತವನ್ನು ವಿಶ್ವದ ಅತ್ಯುತ್ತಮ ಟೆಸ್ಟ್‌ ತಂಡವನ್ನಾಗಿ ಕಟ್ಟುತ್ತೇನೆಂದು ವಿರಾಟ್‌ ಕೊಹ್ಲಿ ನನಗೆ ಹೇಳಿದ್ದರು. ಇದೀಗ ಅವರು ಹೇಳಿದಂತೆ ಭಾರತ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಂ.1 ತಂಡವಾಗಿದೆ ಎಂದು ಅಲಾನ್‌ ಡೊನಾಲ್ಡ್‌ ಹೇಳಿದ್ದಾರೆ. "ಭಾರತ ಮುಂದಿನ ದಿನಗಳಲ್ಲಿ ವಿಶ್ವದ ನಂ.1 ಟೆಸ್ಟ್‌ ತಂಡವಾಗಲಿದೆ ಎಂದು 2015ರಲ್ಲಿ ವಿರಾಟ್‌ ಕೊಹ್ಲಿ ನನಗೆ ಹೇಳಿದ್ದ ಪದಗಳು ಈಗಲೂ ನೆನಪಿದೆ. ಅವರು ಹೇಳಿದ್ದು ಸುಳ್ಳಾಗಲಿಲ್ಲ. ಅವರು ಯಾವ ಹಂತಕ್ಕೆ ತಲುಪಲಿದ್ದಾರೆಂಬುದು ಅವರಿಗೆ ತಿಳಿದಿತ್ತು. ನಾನು ಕೂಡ ಇಂತಹ ತಂಡವನ್ನು ನೋಡಲು ಬಯಸುತ್ತೇನೆ. ವಿಶ್ವದ ಯಾವುದೇ ನೆಲದಲ್ಲಿ ಬೇಕಾದರೂ ಯಾವುದೇ ತಂಡವನ್ನು ಸೋಲಿಸುವ ತಾಕತ್ತು ಈ ತಂಡಕ್ಕಿದೆ. ಆ ಮಟ್ಟಕ್ಕೆ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳಿದ್ದಾರೆ," ಎಂದು ಅಲನ್‌ ಡೊನಾಲ್ಡ್‌ ಭಾರತ ತಂಡವನ್ನು ಗುಣಗಾಣ ಮಾಡಿದ್ದಾರೆ. ಲಾರ್ಡ್ಸ್‌ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ತಂಡದ 151 ರನ್‌ಗಳ ಭರ್ಜರಿ ಗೆಲುವಿಗೆ ನೆರವಾಗಿದ್ದ ವೇಗಿ ಅವರನ್ನು ಕೂಡ ಇದೇ ವೇಳೆ ಡೊನಾಲ್ಡ್‌ ಶ್ಳಾಘಿಸಿದ್ದಾರೆ. ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ನಲ್ಲಿ ಅಜೇಯ 34 ರನ್‌ ಗಳಿಸಿದ್ದ ಜಸ್‌ಪ್ರಿತ್‌ ಬುಮ್ರಾ ಬೌಲಿಂಗ್‌ನಲ್ಲಿಯೂ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿ ಭಾರತದ ಗೆಲುವಿಗೆ ನೆರವಾಗಿದ್ದರು. ಅಷ್ಟೇ ಅಲ್ಲದೆ, 22 ಟೆಸ್ಟ್‌ ಪಂದ್ಯಗಳಿಂದ ಒಟ್ಟು 95 ವಿಕೆಟ್‌ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಲಾನ್‌ ಡೊನಾಲ್ಡ್ ಭಾರತ ತಂಡದ ವೇಗಿ ಜಸ್‌ಪ್ರಿತ್‌ ಬುಮ್ರಾ ಎಲ್ಲಾ ಸ್ವರೂಪದ ಕ್ರಿಕೆಟ್‌ಗೂ ಹೇಳಿ ಮಾಡಿಸಿದ ಆಟಗಾರರಾಗಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನನ್ನ ಪ್ರಕಾರ ಜಸ್‌ಪ್ರಿತ್‌ ಬುಮ್ರಾ ಅತ್ಯುತ್ತಮ ಬೌಲರ್‌ ಆಗಿದ್ದಾರೆ. ಟೆಸ್ಟ್‌, ಓಡಿಐ ಹಾಗೂ ಟಿ20 ಸೇರಿದಂತೆ ಎಲ್ಲಾ ಸ್ವರೂಪದ ಕ್ರಿಕೆಟ್‌ಗೂ ಜಸ್‌ಪ್ರಿತ್‌ ಬುಮ್ರಾ ಅದ್ಭುತವಾಗಿದ್ದಾರೆ. ಹಾಗಾಗಿ, ಈ ಸರಣಿಯಲ್ಲಿ ಅವರಿಂದ ಇನ್ನಷ್ಟು ಅದ್ಭುತ ಪ್ರದರ್ಶನವನ್ನು ನಾವು ನೋಡಲಿದ್ದೇವೆ," ಎಂದು ಅಲಾನ್‌ ಡೊನಾಲ್ಡ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲಾರ್ಡ್ಸ್ ಟೆಸ್ಟ್‌ ಗೆಲ್ಲುವ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಗಳಿಸಿರುವ ಭಾರತ ತಂಡ, ಆಗಸ್ಟ್‌ 25 ರಿಂದ ಇಂಗ್ಲೆಂಡ್‌ ವಿರುದ್ಧ ಲೀಡ್ಸ್‌ ಟೆಸ್ಟ್‌ನಲ್ಲಿ ಕಾದಾಟ ನಡೆಸಲಿದೆ. ಅಂದಹಾಗೆ, ಆರಂಭಿಕ ನಾಟಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯ ಐದನೇ ದಿನ ಮಳೆಯಾಗಿದ್ದರಿಂದ ಡ್ರಾ ಆಗಿತ್ತು. ಬಹುತೇಕ ಗೆಲುವಿನ ಸನಿಹದಲ್ಲಿದ್ದ ಭಾರತಕ್ಕೆ ಮಳೆ ನಿರಾಸೆ ಮೂಡಿಸಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3mk2nzl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...