ವಿಶ್ವಸಂಸ್ಥೆಯಲ್ಲಿ ಭಾರತದ ಠಕ್ಕರ್‌: ಅಲ್ಪಸಂಖ್ಯಾತರ ಮತಾಂತರ, ಉಗ್ರರಿಗೆ ಪಿಂಚಣಿ ಇದು ಪಾಕಿಸ್ತಾನದ 70 ವರ್ಷದ ಸಾಧನೆ!

ನ್ಯೂಯಾರ್ಕ್‌: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಸುಳ್ಳಿನ ಕಂತೆಗೆ ಭಾರತ ವಿಶ್ವಸಂಸ್ಥೆಯಲ್ಲಿ ತಕ್ಕ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಪರ್ಮನೆಂಟ್ ಮಿಷನ್‌ನ ಮೊದಲ ಕಾರ್ಯದರ್ಶಿ ಮಿಜಿಟೋ ವಿನಿಟೋ ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದಲ್ಲಿ ಪಾಕಿಸ್ತಾನಕ್ಕೆ ಹೇಳಿಕೆಗೆ ತಿರುಗೇಟು ನೀಡಿದ್ದು, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರವು ಭಾರತದ "ಅವಿಭಾಜ್ಯ ಮತ್ತು ಅಳಿಸಲಾಗದ" ಭಾಗವಾಗಿದೆ ಎಂದು ಭಾರತ ಪರ ಅವರು ಪುನರುಚ್ಚರಿಸಿದರು.ಅಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ತಂದ ನಿಯಮಗಳು ಮತ್ತು ಶಾಸನಗಳು ದೇಶದ ಆಂತರಿಕ ವ್ಯವಹಾರಗಳಾಗಿವೆ. ಇದರಲ್ಲಿ ಯಾರು ತಲೆ ಹಾಕುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಜಮ್ಮು-ಕಾಶ್ಮೀರ ವಿಚಾರವಾಗಿ ನಾವು ಶಾಂತಿಯಿಂದ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ದ ಎಂದಿದ್ದ ಪಾಕ್‌ ಪಿಎಂ ಇಮ್ರಾನ್‌ ಖಾನ್‌ಗೆ ಮುಖಭಂಗವಾಗಿದೆ.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರವು ಭಾರತದ "ಅವಿಭಾಜ್ಯ ಮತ್ತು ಅಳಿಸಲಾಗದ" ಭಾಗವಾಗಿದೆ ಎಂದು ಭಾರತ ಪರ ಅವರು ಪುನರುಚ್ಚರಿಸಿದರು.ಅಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ತಂದ ನಿಯಮಗಳು ಮತ್ತು ಶಾಸನಗಳು ದೇಶದ ಆಂತರಿಕ ವ್ಯವಹಾರಗಳಾಗಿವೆ. ಇದರಲ್ಲಿ ಯಾರು ತಲೆ ಹಾಕುವ ಅಗತ್ಯವಿಲ್ಲ ಎಂದು ಕಾರ್ಯದರ್ಶಿ ಮಿಜಿಟೋ ವಿನಿಟೋ ಹೇಳಿದರು.


ವಿಶ್ವಸಂಸ್ಥೆಯಲ್ಲಿ ಭಾರತದ ಠಕ್ಕರ್‌: ಅಲ್ಪಸಂಖ್ಯಾತರ ಮತಾಂತರ, ಉಗ್ರರಿಗೆ ಪಿಂಚಣಿ ಇದು ಪಾಕಿಸ್ತಾನದ 70 ವರ್ಷದ ಸಾಧನೆ!

ನ್ಯೂಯಾರ್ಕ್‌:

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಸುಳ್ಳಿನ ಕಂತೆಗೆ ಭಾರತ ವಿಶ್ವಸಂಸ್ಥೆಯಲ್ಲಿ ತಕ್ಕ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಪರ್ಮನೆಂಟ್ ಮಿಷನ್‌ನ ಮೊದಲ ಕಾರ್ಯದರ್ಶಿ ಮಿಜಿಟೋ ವಿನಿಟೋ ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದಲ್ಲಿ ಪಾಕಿಸ್ತಾನಕ್ಕೆ ಹೇಳಿಕೆಗೆ ತಿರುಗೇಟು ನೀಡಿದ್ದು, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರವು ಭಾರತದ "ಅವಿಭಾಜ್ಯ ಮತ್ತು ಅಳಿಸಲಾಗದ" ಭಾಗವಾಗಿದೆ ಎಂದು ಭಾರತ ಪರ ಅವರು ಪುನರುಚ್ಚರಿಸಿದರು.ಅಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ತಂದ ನಿಯಮಗಳು ಮತ್ತು ಶಾಸನಗಳು ದೇಶದ ಆಂತರಿಕ ವ್ಯವಹಾರಗಳಾಗಿವೆ. ಇದರಲ್ಲಿ ಯಾರು ತಲೆ ಹಾಕುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಜಮ್ಮು-ಕಾಶ್ಮೀರ ವಿಚಾರವಾಗಿ ನಾವು ಶಾಂತಿಯಿಂದ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ದ ಎಂದಿದ್ದ ಪಾಕ್‌ ಪಿಎಂ ಇಮ್ರಾನ್‌ ಖಾನ್‌ಗೆ ಮುಖಭಂಗವಾಗಿದೆ.



ಖಾನ್‌ಗೆ ಮಾತಿನ ಕಪಾಳಮೋಕ್ಷ!
ಖಾನ್‌ಗೆ ಮಾತಿನ ಕಪಾಳಮೋಕ್ಷ!

ಪಾಕಿಸ್ತಾನದ ಪ್ರಧಾನಿ ಹೇಳಿಕೆಯು ಕೀಳುಮಟ್ಟದ್ದಾಗಿದ್ದು ಕೆಟ್ಟ ಸುಳ್ಳುಗಳು, ವೈಯಕ್ತಿಕ ನಿಂದನೆ, ಆಕ್ರಮಣಶೀಲತೆಯಿಂದ ಕೂಡಿವೆ. ಪಾಕಿಸ್ತಾನದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಗಡಿಯಾಚೆಗಿನ ಭಯೋತ್ಪಾದನೆ ವಿಷಯವನ್ನು ಮುಚ್ಚಿಡಲಾಗಿದೆ. ಇದಕ್ಕೆ ತಕ್ಕ ತಿರುಗೇಟು ನೀಡುವ ಹಕ್ಕು ಎಲ್ಲರಿಗಿದೆ. ಅದನ್ನು ಬಿಟ್ಟು ಈ ಜಾಗದಲ್ಲಿ ನಿಂತು ನಮ್ಮ ಭೂ ಭಾಗದ ಬಗ್ಗೆ ಅವರಿಗೆ ಮಾತನಾಡಲು ಯಾವುದೇ ಹಕ್ಕಿಲ್ಲ. ಅಷ್ಟಕ್ಕೂ ಅವರಿಗೆ ಯಾವುದೇ ಸಾಧನೆಗಳಿಲ್ಲ. ಜಗತ್ತಿಗೆ ಸಲಹೆ ನೀಡಲು ಅವರೇ ಸರಿಯಿಲ್ಲ. ಭಾರತದ ಬಗ್ಗೆ ಅವರು ಏನು ಹೇಳಿದರೋ ಅದೆಲ್ಲ ಅವರ ನೈಜ ಮುಖವೇ ಆಗಿದೆ ಎಂದು ಭಾರತ ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. ಅಲ್ಲದೆ ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಉಳಿದಿರುವ ಏಕೈಕ ವಿವಾದ ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಬಗ್ಗೆಗ್ಗಿನದ್ದು. ಆಕ್ರಮಣ ಮಾಡಿರುವ ಭಾರತದ ಪ್ರದೇಶಗಳನ್ನು ಖಾಲಿ ಮಾಡುವಂತೆ ನಾವು ಪಾಕಿಸ್ತಾನಕ್ಕೆ ಕರೆ ನೀಡುತ್ತೇವೆ ಎಂದು ಟಾಂಗ್‌ ಕೊಟ್ಟರು.

ಭಾರತೀಯ ಉಪಖಂಡದಲ್ಲಿರುವ ಅಲ್‌ ಕೈದಾ ದೊಡ್ಡ ದಾಳಿಗೆ ಅಸಮರ್ಥವಾಗಿದೆ: ಅಮೆರಿಕ



70 ವರ್ಷದ ಸಾಧನೆ ಇದುವೇ!
70 ವರ್ಷದ ಸಾಧನೆ ಇದುವೇ!

ಇನ್ನು ಹಿಂದೂಗಳು, ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಇತರರು ಸೇರಿದಂತೆ ಅಲ್ಪಸಂಖ್ಯಾತರ ಧರ್ಮವನ್ನು ನಿಂದಿಸುವುದು. ತನ್ನ ಕಾನೂನುಗಳ ಮೂಲಕ ಬಲವಂತದ ಮತಾಂತರಗಳನ್ನು ಮಾಡುವುದು ಇದುವೇ ಪಾಕಿಸ್ತಾನದ 70 ವರ್ಷಗಳ ವೈಭವದ ಸಾಧನೆ. ಭಯೋತ್ಪಾದನೆ, ಜನಾಂಗೀಯ ಶುದ್ಧೀಕರಣ, ಬಹುಸಂಖ್ಯಾತ ಮೂಲಭೂತವಾದ ಮತ್ತು ರಹಸ್ಯ ಪರಮಾಣು ವಹಿವಾಟು ಇದರ ಸಾಧನೆ. ಇದನ್ನೇ ಇದೀಗ ಈ ದೇಶ ಜಗತ್ತಿನ ಮುಂದೆ ಹೇಳಬೇಕಿದೆ ಎಂದು ಭಾರತ ಪಾಕ್‌ನ ನೈಜ ಮುಖವಾಡವನ್ನು ತೆರೆದಿಟ್ಟಿತು.

ಕೊಂದು ಕ್ಷಮೆ ಕೇಳಿದ ಕಿಮ್ ಜಾಂಗ್: ಉ.ಕೊರಿಯಾ ಸರ್ವಾಧಿಕಾರಿ ಬದಲಾಗಿದ್ದಾನಾ?



ಉಗ್ರರ ದೇಶ ಪಾಕಿಸ್ತಾನ!
ಉಗ್ರರ ದೇಶ ಪಾಕಿಸ್ತಾನ!

ಇನ್ನು ಸದಾ ತನ್ನ ಮಡಿಲಿನಲ್ಲಿ ಉಗ್ರರನ್ನು ಬೆಳೆಸುವ ಪಾಕಿಸ್ತಾನದ ಮತ್ತೊಂದು ಮುಖವನ್ನು ತೆರೆದಿಟ್ಟ ಭಾರತದ ಮಿಜಿಟೋ ವಿನಿಟೋ, ಅವರ ಪ್ರಧಾನಿಯೇ ಅಮೆರಿಕದಲ್ಲಿ ತಮ್ಮ ದೇಶದಲ್ಲಿ ಸುಮಾರು 30,000-40,000 ಉಗ್ರರಿದ್ದಾರೆ. ಅವರಿಗೆ ಪಾಕಿಸ್ತಾನದಿಂದ ತರಬೇತಿ ನೀಡಲಾಗುತ್ತಿದೆ. ಅವರನ್ನು ಅಫ್ಘಾನಿಸ್ತಾನ ಮತ್ತು ಜಮ್ಮು-ಕಾಶ್ಮೀರದಲ್ಲಿ ಹೋರಾಡಲು ಬಿಟ್ಟಿದ್ದೇವೆ ಎಂದು ಹೇಳಿರುವುದಾಗಿ ಸದಸ್ಯ ರಾಷ್ಟ್ರಗಳಿಗೆ ಮನನ ಮಾಡಿಸಿದರು. ಅಲ್ಲದೇ ಪಾಕಿಸ್ತಾನ ಈ ಉಗ್ರರಿಗೆ ಪಿಂಚಣಿ ನೀಡುತ್ತಿದೆ ಎಂದು ಆರೋಪಿಸಿದರು.





from India & World News in Kannada | VK Polls https://ift.tt/333BJ3S

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...