ಹೊಸದಿಲ್ಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಗುರುವಾರ ರಾತ್ರಿ ನಡೆದಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. 69 ಎಸೆತಗಳನ್ನು ಎದುರಿಸಿದ್ದ ಕರ್ನಾಟಕ ಬ್ಯಾಟ್ಸ್ಮನ್ ಅಜೇಯ 132 ರನ್ಗಳನ್ನು ಗಳಿಸುವ ಮೂಲಕ ತಮ್ಮ ತಂಡ 206 ರನ್ಗಳಿಸುವಲ್ಲಿ ನೆರವಾಗಿದ್ದರು. ನಂತರ ಗುರಿ ಹಿಂಬಾಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ಓವರ್ಗಳಲ್ಲಿ 109 ರನ್ಗಳಿಗೆ ಆಲೌಟ್ ಆಗಿ, 97 ರನ್ಗಳಿಂದ ಸೋಲು ಒಪ್ಪಿಕೊಂಡಿತ್ತು. ಆ ಮೂಲಕ ಪ್ರಸಕ್ತ ಆವೃತ್ತಿಯ ಆರ್ಸಿಬಿ ಮೊದಲ ಸೋಲು ಅನುಭವಿಸಿತ್ತು. ಕೆ.ಎಲ್ ರಾಹುಲ್ ಗಳಿಸಿದ್ದ ವೈಯಕ್ತಿಕ ದೊಡ್ಡ ಮೊತ್ತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕೆ.ಎಲ್ ರಾಹುಲ್ ಅವರನ್ನು ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ಹಾಗೂ ಭಾರತ ತಂಡದ ಮಾಜಿ ಆರಂಭಿಕ ಶ್ಲಾಘಿಸಿದ್ದರು. ಇಎಸ್ಪಿಎನ್ ಕ್ರಿಕ್ಇನ್ಫೋ ಟಿ20 ಟೈಮ್ ಔಟ್ನಲ್ಲಿ ಮಾತನಾಡಿದ ಇಯಾನ್ ಬಿಷಪ್,"ಕೆ.ಎಲ್ ರಾಹುಲ್ ತಮ್ಮ ಇನಿಂಗ್ಸ್ ಅನ್ನು ಸಮಯೋಜನೆ ಮಾಡಿದ್ದು ಅದ್ಭುತವಾಗಿತ್ತು. ಮೊದಲ ಅರ್ಧಶತಕ ಸಿಡಿಸಿದ ಹಾದಿಯನ್ನು ವೀಕ್ಷಿಸಿದೆ ಹಾಗೂ ಪವರ್ ಪ್ಲೇ ನಂತರ ಅವರು ಕ್ರೀಸ್ನಲ್ಲಿ ನೆಲೆಯೂರಲು ಆಡುತ್ತಿದ್ದಾರೆ ಎಂದು ಅನಿಸಿತ್ತು. ಆದರೆ, ಅವರು ತಮ್ಮ ಇನಿಂಗ್ಸ್ ಮೇಲೆ ಸಮತೋಲನ ಸಾಧಿಸಿದರು," ಎಂದು ಹೇಳಿದರು. "ಆದರೆ, ಅವರು ಇನಿಂಗ್ಸ್ ಅನ್ನು ಸುಂದರವಾಗಿ ಮುಗಿಸಿದರು. ವಿರಾಟ್ ಕೊಹ್ಲಿಯಿಂದ ಅವರು ಪಡೆದುಕೊಂಡ ಅವಕಾಶಗಳನ್ನು ಬಿಡಿ, ಅವರ ಕೊನೆಯಲ್ಲಿ ತೋರಿದ ಪ್ರದರ್ಶನ ನೋಡಿ, ಅವರ ಬ್ಯಾಟಿಂಗ್ ಡೆಪ್ತ್ ಏನೆಂಬುದು ಇಲ್ಲಿ ಪ್ರಕಾಶಿಸುತ್ತದೆ ಹಾಗೂ ಅವರು ಪರಿಪೂರ್ಣ ಬ್ಯಾಟ್ಸ್ಮನ್ ಎಂಬುದನ್ನು ಇದು ಸಾಬೀತುಪಡಿಸಿದೆ," ಎಂದು ತಿಳಿಸಿದರು. ಬಳಿಕ ಗೌತಮ್ ಗಂಭೀರ್ ಮಾತನಾಡಿ,"ಅದು ಅವರ ಅಸಲಿ ಇನಿಂಗ್ಸ್. ಪ್ರಮಾಣಿಕವಾಗಿ ಹೇಳಬೇಕಾದರೆ, ಅವರು ಈ ಇನಿಂಗ್ಸ್ನಲ್ಲಿ ಒಂದೂ ಸ್ಲಾಗ್ ಶಾಟ್ ಹೊಡೆದಿಲ್ಲ. ಇದು ಅವರಲ್ಲಿನ ಗುಣಮಟ್ಟದ ಕ್ರಿಕೆಟ್ ಅನ್ನು ತೋರಿಸುತ್ತದೆ. ಅವರು ಕ್ರಿಕೆಟಿಂಗ್ ಶಾಟ್ಗಳನ್ನು ಹೊಡೆಯಬಲ್ಲರು. ಸ್ಟ್ರೈಕ್ ರೇಟ್, ಗುಣಮಟ್ಟದ ಶಾಟ್ಗಳು ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ತಿಳಿಸುತ್ತದೆ," ಎಂದು ಹೇಳಿದರು. "ಇಯಾನ್ ಬಿಷಪ್ ಹೇಳಿದಂತೆ ಕೆ.ಎಲ್ ರಾಹುಲ್ ಪ್ರಸ್ತುತ ಐಪಿಎಲ್ನ ನಂ.1 ಬ್ಯಾಟ್ಸ್ಮನ್ ಎಂಬುದನ್ನು ಒಪ್ಪಿಕೊಳ್ಳುತ್ತೇನೆ," ಎಂದು ಇದೇ ವೇಳೆ ಗೌತಮ್ ಗಂಭೀರ್ ತಿಳಿಸಿದರು. ಕಿಂಗ್ಸ್ ಇಲೆವೆನ್ ಪಂಜಾಬ್ ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3cw9MES