ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಯೋಮಯ; ವಿಮೆಯಲ್ಲಿ ತಾರತಮ್ಯ, ರಾಜ್ಯದ ರೈತರಿಗೆ ನಿರಾಸಕ್ತಿ!

ಕೇಂದ್ರ ಸರಕಾರದ ಭಾರಿ ನಿರೀಕ್ಷೆಯ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ(ಪಿಎಂಎಫ್‌ಬಿವೈ)ಗೆ ರಾಜ್ಯದ ರೈತರಿಂದ ಅಷ್ಟೊಂದು ಪ್ರತಿಕ್ರಿಯೆ ದೊರೆಯುತ್ತಿಲ್ಲ. ಪರಿಹಾರ ಪಡೆಯಲು ರೈತರಿಗೆ ವಿಧಿಸಿರುವ ಕಠಿಣ ಷರತ್ತುಗಳು, ಯೋಜನೆ ಜಾರಿಯಲ್ಲಿ ತೊಡಕುಗಳು, ಹಣ ಕೈಸೇರದಿರುವುದು ಇದಕ್ಕೆ ಕಾರಣವಾಗಿದೆ. ಹಾಗಾಗಿ, ವರ್ಷದಿಂದ ವರ್ಷಕ್ಕೆ ಈ ಯೋಜನೆಯತ್ತ ರೈತರು ನಿರಾಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಹವಾಮಾನ ಆಧಾರಿತ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಅಡಿ ಬರಬೇಕಾಗಿದ್ದ ಮೊತ್ತವು ಇನ್ನೂ ಹಲವಾರು ರೈತರ ಖಾತೆಗೆ ಬಂದಿಲ್ಲ. ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಇಲ್ಲವೇ ವಿಫಲವಾದರೆ ಅಂತಹ ಸಂಕಷ್ಟದಲ್ಲಿ ಆರ್ಥಿಕವಾಗಿ ನೆರವು ಸಿಗುತ್ತದೆಂಬ ಮಹತ್ವಾಕಾಂಕ್ಷೆಯೊಂದಿಗೆ ರೈತರು ವಿಮೆ ಮೊರೆ ಹೋಗುತ್ತಿದ್ದಾರೆ. ಆದರೆ, ಫಸಲ್‌ ಬಿಮಾ ಈ ಆಸೆಯನ್ನು ಸುಳ್ಳಾಗಿಸಿದೆ. 2016ರಲ್ಲಿ ಫಸಲ್‌ ಬಿಮಾ ಯೋಜನೆ ಆರಂಭಗೊಂಡಿದ್ದು, ಇದರಿಂದ ರೈತರಿಗೆ ಭಾರಿ ಪ್ರಯೋಜನ ಆಗಲಿದೆ ಎಂದು ಬಿಂಬಿಸಲಾಗಿತ್ತು. ಆದರೆ, ಕಠಿಣ ನಿಯಮಗಳಿಂದಾಗಿ ಅರ್ಹತೆ ಇದ್ದರೂ ಯೋಜನೆಯ ಲಾಭ ಸಕಾಲಕ್ಕೆ ಸಿಗುತ್ತಿಲ್ಲ. ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ರೈತರಿಗೆ ಅಷ್ಟೊಂದು ಪ್ರಯೋಜನಕಾರಿಯಾಗಿಲ್ಲ. ಪ್ರಾಕೃತಿಕ ವಿಕೋಪದ ಘಟನೆ ಆಧರಿಸಿ ಬೆಳೆ ನಷ್ಟ ಅಂದಾಜು ಮಾಡುತ್ತಿಲ್ಲ. ವಿಮೆ ಹೆಸರಿನಲ್ಲಿ ರೈತರಿಂದ ಹಣ ಪಡೆದು ಕಂಪನಿಗಳು ಉದ್ಧಾರ ಆಗುತ್ತಿವೆ.


ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಯೋಮಯ; ವಿಮೆಯಲ್ಲಿ ತಾರತಮ್ಯ, ರಾಜ್ಯದ ರೈತರಿಗೆ ನಿರಾಸಕ್ತಿ!

ಕೇಂದ್ರ ಸರಕಾರದ ಭಾರಿ ನಿರೀಕ್ಷೆಯ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ(ಪಿಎಂಎಫ್‌ಬಿವೈ)ಗೆ ರಾಜ್ಯದ ರೈತರಿಂದ ಅಷ್ಟೊಂದು ಪ್ರತಿಕ್ರಿಯೆ ದೊರೆಯುತ್ತಿಲ್ಲ. ಪರಿಹಾರ ಪಡೆಯಲು ರೈತರಿಗೆ ವಿಧಿಸಿರುವ ಕಠಿಣ ಷರತ್ತುಗಳು, ಯೋಜನೆ ಜಾರಿಯಲ್ಲಿ ತೊಡಕುಗಳು, ಹಣ ಕೈಸೇರದಿರುವುದು ಇದಕ್ಕೆ ಕಾರಣವಾಗಿದೆ. ಹಾಗಾಗಿ, ವರ್ಷದಿಂದ ವರ್ಷಕ್ಕೆ ಈ ಯೋಜನೆಯತ್ತ ರೈತರು ನಿರಾಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.



​38 ಮಂದಿಗಷ್ಟೇ ದುಡ್ಡು!
​38 ಮಂದಿಗಷ್ಟೇ ದುಡ್ಡು!

ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ ಮುಂಗಾರಿನಲ್ಲಿ 485.05 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗಳಿಗೆ ರೈತರು ವಿಮೆ ಮಾಡಿಸಿಕೊಂಡಿದ್ದಾರೆ. ರೈತರು 3.66 ಲಕ್ಷ ರೂ., ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ತಲಾ 3.63 ಲಕ್ಷ ರೂ. ಸೇರಿ ಒಟ್ಟು 11.08 ಲಕ್ಷ ರೂ. ಪ್ರೀಮಿಯಂ ಕಟ್ಟಿವೆ. ವಿಮಾ ಕಂಪನಿಯು ಅಂದಾಜು 1.85 ಕೋಟಿ ರೂ. ವಿಮೆ ಪರಿಹಾರ ಪಾವತಿಸಬೇಕೆಂದು ಅಂದಾಜಿಸಿತ್ತು. ವಿಮೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದ 1102 ರೈತರ ಪೈಕಿ 38 ಮಂದಿಗೆ 1.90 ಲಕ್ಷ ರೂ. ಮಾತ್ರ ಸಿಕ್ಕಿದೆ.



ಒಂದು ಪೈಸೆಯೂ ಸಿಕ್ಕಿಲ್ಲ!
ಒಂದು ಪೈಸೆಯೂ ಸಿಕ್ಕಿಲ್ಲ!

ವಿಜಯಪುರ ಜಿಲ್ಲೆಯಲ್ಲಿ 2018-19 ಸಾಲಿನಲ್ಲಿ 1240 ರೈತರಿಗೆ ಹಣ ಪಾವತಿಯಾಗಿಲ್ಲ. 2019-20ರಲ್ಲಿ ಒಂದು ಪೈಸೆಯೂ ಸಿಕ್ಕಿಲ್ಲ. ಈ ಬಾರಿ 88,368 ನೋಂದಣಿಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 26,046 ನೋಂದಣಿ ಮಾಡಿಕೊಂಡಿದ್ದಾರೆ. ಶೇ.68 ರೈತರು ಮಾಹಿತಿ ದಾಖಲಿಸಿದ್ದಾರೆ.



​ಹಿಂದೆ ಬಿದ್ದ ರಾಮನಗರ
​ಹಿಂದೆ ಬಿದ್ದ ರಾಮನಗರ

ರಾಮನಗರದಲ್ಲಿ 2019ನೇ ಸಾಲಿನ ಮುಂಗಾರಿನಲ್ಲಿ 5466 ಮಂದಿ ನೋಂದಾಯಿಸಿಕೊಂಡಿದ್ದರೆ, ಹಿಂಗಾರಿನಲ್ಲಿ132 ಮಂದಿ ಮಾತ್ರ. ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಕೇವಲ 566 ಮಂದಿ ಮಾತ್ರವೇ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಈ ವರೆಗೆ ಶೇ.57.37 ಬೆಳೆ ಸಮೀಕ್ಷೆಯಾಗಿದೆ.



​ನೋಂದಣಿಗೆ ಹಿಂದೇಟು
​ನೋಂದಣಿಗೆ ಹಿಂದೇಟು

ತುಮಕೂರು ಜಿಲ್ಲೆಯಲ್ಲಿ ಪ್ರಸಕ್ತ 68,427 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 30 ಸಾವಿರ ಮಂದಿ ಹಿಂದೆ ಸರಿದಿದ್ದಾರೆ. ವಿಮಾ ಮೊತ್ತ ಬ್ಯಾಂಕ್‌ಗಳಲ್ಲಿ ಕೃಷಿ ಸೇರಿದಂತೆ ಇತರೆ ಸಾಲಕ್ಕೆ ಜಮಾ ಮಾಡಿಕೊಳ್ಳಲಾಗುತ್ತದೆ ಎಂಬ ಕಾರಣಕ್ಕೆ ಬಹುತೇಕರು ಆಸಕ್ತಿ ತೋರುತ್ತಿಲ್ಲ. ಇನ್ನೂ 7 ಲಕ್ಷ ತಾಕುಗಳ ಸಮೀಕ್ಷೆಯಾಗಬೇಕಿದೆ. ಚಿಕ್ಕಬಳ್ಳಾಪುರದಲ್ಲಿ 17,254 ಮಂದಿ ನೋಂದಾಯಿಸಿದ್ದಾರೆ. ಈ ಹಿಂದಿನ ವಿಮೆ ಹಣ ಇನ್ನೂ ಕೈ ಸೇರಿಲ್ಲ. ಕೋಲಾರ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಶೇ.72 ರಷ್ಟು ಆಗಿದೆ.



​ಶೇ.70ರಷ್ಟು ಸಮೀಕ್ಷೆ ಬಾಕಿ
​ಶೇ.70ರಷ್ಟು ಸಮೀಕ್ಷೆ ಬಾಕಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ 639 ಮಂದಿ ಅರ್ಜಿ ಹಾಕಿದ್ದು, 22 ಮಂದಿಗೆ ಹಣ ಬಂದಿದೆ. ಈ ಬಾರಿ 655 ಮಂದಿ ನೋಂದಾಯಿಸಿಕೊಂಡಿದ್ದಾರೆ. ಸಮೀಕ್ಷೆ ಶೇ. 70ರಷ್ಟು ಬಾಕಿ ಇದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ನೊಂದಣಿ ಮಾಡಿಕೊಂಡಿರುವ 3505 ಮಂದಿಯಲ್ಲಿ ಇದುವರೆಗೆ ವಿಮೆ ಸಿಕ್ಕಿಲ್ಲ!



​ನೋಂದಣಿ ಗಣನೀಯ ಇಳಿಕೆ
​ನೋಂದಣಿ ಗಣನೀಯ ಇಳಿಕೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ನೋಂದಣಿ ಗಣನೀಯವಾಗಿ ಇಳಿಕೆಯಾಗಿದೆ. ಪ್ರಸಕ್ತ ವರ್ಷ 2778 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಶೇ.51 ರಷ್ಟು ಬೆಳೆ ಸಮೀಕ್ಷೆಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 2017-18ರಲ್ಲಿ14,736 ಅರ್ಜಿ ಸಲ್ಲಿಕೆಯಾಗಿತ್ತು. ಅದರಲ್ಲಿ 453 ಹಾಗೂ 2018-19ನೇ ಸಾಲಿನಲ್ಲಿ8,988 ಅರ್ಜಿದಾರರಲ್ಲಿ632 ರೈತರ ವಿಮೆ ಹಣ ಇದುವರೆಗೂ ಕೈಸೇರಿಲ್ಲ. 2020-21ನೇ ಸಾಲಿನಲ್ಲಿ 19,089 ಅರ್ಜಿಗಳು ಬಂದಿವೆ.



​ಆಸಕ್ತಿ ತೋರದ ರೈತರು
​ಆಸಕ್ತಿ ತೋರದ ರೈತರು

ಕಲಬುರಗಿಯಲ್ಲಿ ನೋಂದಣಿಗೆ ರೈತರು ಆಸಕ್ತಿ ತೋರುತ್ತಿಲ್ಲ. ಜಿಲ್ಲೆಯಲ್ಲಿ ನಾಲ್ಕು ಲಕ್ಷ ರೈತರಿದ್ದರೂ ಒಂದು ಲಕ್ಷದಷ್ಟೂ ನೋಂದಣಿ ಮಾಡುತ್ತಿಲ್ಲ. ಈ ವರ್ಷ 36 ಸಾವಿರ ನೋಂದಣಿಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 17,031 ರೈತರು ಒಟ್ಟು 3.25 ಕೋಟಿ ರೂ.ಕಟ್ಟಿದ್ದಾರೆ. ಆದರೆ, ಯಾರಿಗೂ ಪರಿಹಾರ ಸಿಕ್ಕಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಕೆಲವು ರೈತರಿಗೆ ಮಾತ್ರ ಯೋಜನೆ ಸೀಮಿತವಾದಂತಾಗಿದೆ.



​ಬಿಡುಗಡೆಯಾಗಿಲ್ಲ ಹಣ!
​ಬಿಡುಗಡೆಯಾಗಿಲ್ಲ ಹಣ!

ಉತ್ತರ ಕನ್ನಡ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 58,154 ರೈತರು ವಿಮೆ ಮಾಡಿಸಿದ್ದರು. ಆದರೆ, ಹಣ ಇನ್ನೂ ಬಿಡುಗಡೆ ಆಗಿಲ್ಲ. ಶೇ. 48ರಷ್ಟು ಸರ್ವೇಯಾಗಿದೆ. ಹಾವೇರಿ ಜಿಲ್ಲೆಯಲ್ಲಿ 2019-20 ನೇ ಸಾಲಿಗೆ 1,13,857 ರೈತರು 13.30 ಕೋಟಿ ರೂ. ಕಂತು ಪಾವತಿಸಿದ್ದು, ಈ ಪೈಕಿ 75,704 ರೈತರಿಗೆ 130 ಕೋಟಿ ಪರಿಹಾರ ದೊರೆಯಲಿದೆ. ಶೇ.67 ಸಮೀಕ್ಷೆಯಾಗಿದೆ. ಗದಗ ಜಿಲ್ಲೆಯಲ್ಲಿ ಶೇ.64ರಷ್ಟು ರೈತರು ಬೆಳೆ ಸಮೀಕ್ಷೆ ಮಾಡಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡ ಬಹುತೇಕ ರೈತರಿಗೆ ಹಣ ಸಂದಾಯ ಆಗುತ್ತಿದೆ. ಶೇ. 58.43ರಷ್ಟು ಸಮೀಕ್ಷೆಯಾಗಿದೆ.



​329 ಲಕ್ಷ ರೂ. ವಿಮೆ ಬಾಕಿ!
​329 ಲಕ್ಷ ರೂ. ವಿಮೆ ಬಾಕಿ!

ರಾಯಚೂರು ಜಿಲ್ಲೆಯಲ್ಲಿ 2016-17ರಲ್ಲಿ 112 ಲಕ್ಷ ರೂ., 2017-18ರಲ್ಲಿ33.14 ಲಕ್ಷ ರೂ., 2018-19ನೇ ಸಾಲಿನ 5968 ರೈತರ 1590.34 ಲಕ್ಷ ರೂ. ಮುಂಗಾರು ಹಂಗಾಮಿನದು, ಹಿಂಗಾರು ಹಂಗಾಮಿನ 1673 ರೈತರ 329.64ಲಕ್ಷ ರೂ. ಬಾಕಿಯಿದೆ. ಪ್ರಸಕ್ತ ಕೇವಲ 58,509 ನೋಂದಣಿಯಾಗಿದೆ. ಕೊಪ್ಪಳದಲ್ಲೂ 2019-20ರ ಸಾಲಿನ ಪರಿಹಾರ ಜಮಾ ಆಗಿಲ್ಲ. 2020-21 ನೇ ಸಾಲಿನ ಮುಂಗಾರಿನಲ್ಲಿ 83,952 ರೈತರು ಬೆಳೆ ವಿಮೆ ಕಂತು ಪಾವತಿಸಿದ್ದಾರೆ. ಈವರೆಗೆ ಪರಿಹಾರ ಬಂದಿಲ್ಲ.



ಸಮೀಕ್ಷೆಯಲ್ಲಿ 3ನೇ ಸ್ಥಾನ!
ಸಮೀಕ್ಷೆಯಲ್ಲಿ 3ನೇ ಸ್ಥಾನ!

ದಾವಣಗೆರೆ ಜಿಲ್ಲೆಯಲ್ಲಿ 11879 ರೈತರು ನೋಂದಣಿ ಮಾಡಿಸಿದ್ದಾರೆ. ಹಿಂದಿನ ವರ್ಷದ ಬೆಳೆ ವಿಮೆ ಬಂದಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ 85,912 ರೈತರು ನೋಂದಾಯಿಸಿದ್ದಾರೆ. ಶೇ.67ಸಮೀಕ್ಷೆ ಮುಗಿದಿದ್ದು, ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ.



​ವಿಮೆಯಲ್ಲಿ ತಾರತಮ್ಯ?
​ವಿಮೆಯಲ್ಲಿ ತಾರತಮ್ಯ?

ಬೆಳಗಾವಿಯಲ್ಲಿ 2019-20ನೇ ಸಾಲಿನಲ್ಲಿ ವಿಮೆ ಮಾಡಿಸಿದವರ ಪೈಕಿ 11 ಸಾವಿರ ರೈತರಿಗೆ ಪರಿಹಾರ ಸಿಕ್ಕಿಲ್ಲ. ಬೆಳಗಾವಿ ಮತ್ತು ಧಾರವಾಡದಲ್ಲಿ ಬೇರೆ ಬೇರೆ ವಿಮಾ ಕಂಪನಿಗಳು ಇವೆ. ಆದರೆ, ಸವದತ್ತಿ ತಾಲೂಕು ಗಡಿಯಲ್ಲಿ ಧಾರವಾಡ ತಾಲೂಕು ವ್ಯಾಪ್ತಿಯ ರೈತರಿಗೆ ವಿಮೆ ಪರಿಹಾರ ಹೆಚ್ಚು ಸಿಗುತ್ತಿದೆ. ಆದರೆ, ಅದೇ ಪ್ರದೇಶದ ಸವದತ್ತಿ ತಾಲೂಕಿನವರಿಗೆ ಅತ್ಯಂತ ಕಡಿಮೆ ಪರಿಹಾರ ಸಿಗುತ್ತಿದೆ.





from India & World News in Kannada | VK Polls https://ift.tt/2Hxc1MN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...