ಭೂಸುಧಾರಣಾ ಕಾಯ್ದೆ ತಿದ್ದುಪಡಿ ಹಿಂದೆ ಕಾರ್ಪೊರೇಟ್ ಕಂಪನಿ ಲಾಬಿ ಇದೆ ; ಸಿದ್ದರಾಮಯ್ಯ

ಬೆಂಗಳೂರು: ವಿಧಾನಸಭೆಯಲ್ಲಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಚರ್ಚೆ ಆರಂಭವಾಗಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಸಮರ್ಥನೆ ಮಾಡಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಬೇರೆ ರಾಜ್ಯಗಳಲ್ಲಿ ಇಲ್ಲದೆ ಇರುವ ಕಾನೂನು ನಮ್ಮ ರಾಜ್ಯದಲ್ಲಿದೆ. ಇದರಿಂದ ಸಮಸ್ಯೆ ಆಗುತ್ತಿದೆ. ರೈತರ ಹಿತಾಸಕ್ತಿ ಇಟ್ಟುಕೊಂಡು ಕಾಯ್ದೆ ತಿದ್ದುಪಡಿ, ಸಣ್ಣ ಹಿಡುವಳಿದಾರರಿಗೆ ಯಾವುದೇ ತೊಂದರೆ ಆಗದಂತೆ ಕಾಯ್ದೆ ಜಾರಿ ಮಾಡಲಾಗುವುದು ಎಂದರು. ಅಲ್ಲದೇ ನೀರಾವರಿ ಜಮೀನನ್ನು ಯಾವುದೇ ಕಾರಣಕ್ಕಾಗಿ ಬೇರೆ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ. ಇದು ಸದುದ್ದೇಶದಲ್ಲಿ ತಂದಿರುವ ತಿದ್ದುಪಡಿ ಎಂದು ಅಶೋಕ್ ವಿವರಿಸಿದರು. ವಿರೋಧಿಸಿ ವಿಧಾನಸಭೆಯಲ್ಲಿ ಮಾತು ಆರಂಭಿಸಿದ , ಭೂಸುಧಾರಣಾ ಕಾಯ್ದೆ 1961ಕ್ಕೆ ಆತುರವಾಗಿ ತಿದ್ದುಪಡಿ ತಂದಿದ್ದಾರೆ. ಈ‌ ತಿದ್ದುಪಡಿ ರೈತರ ಪಾಲಿಗೆ ಮರಣ ಶಾಸನ‌ ಎಂದು ರೈತ ಸಂಘಟನೆಗಳು, ಕಾರ್ಮಿಕ, ದಲಿತ ಸಂಘಟನೆ‌ ಹೇಳಿಕೆ ನೀಡಿವೆ. ರೈತ ಸಂಘಟನೆಗಳು ಬಂದ್‌ಗೆ ಕರೆ ಕೂಡ ನೀಡಿವೆ. ಸಿಎಂ‌ ಜೊತೆಗೆ ನಡೆದ ಚರ್ಚೆ ಕೂಡಾ ವಿಫಲವಾಗಿದೆ. ಇದು ರೈತ ವಿರೋಧಿಯಾಗಿದೆ ಎಂದು ಒಪ್ಪಲು ಸಾಧ್ಯವಿಲ್ಲ ಎಂದಿವೆ ಎಂದರು. ಅಲ್ಲದೇ ಕ್ಯಾಬಿನೆಟ್ ನಿರ್ಧಾರ ಕೈಗೊಂಡಾಗಲೇ ಇದನ್ನು ನಾವು ಇದಕ್ಕೆ ವಿರೋಧ ಮಾಡಿದ್ದೇವೆ. ಇದಕ್ಕೆ ರಾಜಕೀಯ ಬಣ್ಣ ಬೇಡ, ರೈತ ಹಿತದಿಂದ ಇದಕ್ಕೆ ನಮ್ಮ ವಿರೋಧ ಎಂದರು. ಯಾವ ಕಾರಣಕ್ಕಾಗಿಯೂ ಕಾನೂನು ಆಗಲು ಬಳಸಬಾರದು ಎಂಬುವುದು ನಮ್ಮ ನಿಲುವು ಎಂದ ಸಿದ್ದರಾಮಯ್ಯ, ಜನ ಒಪ್ಪದಿದ್ದರೂ ಇದನ್ನು ಕಾನೂನು ಮಾಡಲು ಮುಂದಾಗಿದ್ದೀರಿ. ಸರ್ವೇ ವರದಿಗಳು ತಿದ್ದುಪಡಿಯ ವಿರುದ್ಧವಾಗಿದೆ. ಅಶೋಕ್ ಹೇಳ್ತಾರೆ ಬಿಡಿ ಜತ್ತಿ ಕಾಲದಲ್ಲಿ ಮಾಡಿದ ಕಾನೂನು ಅಂತಾರೆ ಆದರೆ ಅಲ್ಲ, ಏಕೀಕರಣದ ಬಳಿಕ 1957ರಲ್ಲಿ ರಚನೆಯಾದ ಸಮಿತಿ ಶಿಫಾರಸು ಆಧಾರದ ಮೇಲೆ 1961 ಭೂಸುಧಾರಣಾ ಕಾಯ್ದೆ ರಚನೆ ಆಗಿದೆ ಎಂದು ಸಿದ್ದರಾಮಯ್ಯ ಕಾಯ್ದೆಯ ಇತಿಹಾಸ ವಿವರಣೆ ನೀಡಿದರು. ಇನ್ನು ಗೇಣಿದಾರರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಈ 1961 ಕಾಯ್ದೆ ಜಾರಿಗೆ ಬಂದಿದೆ. ಕಾಗೋಡು ಹೋರಾಟ, ಗೇಣಿದಾರರಿಗೆ ಇನ್ನಷ್ಟು ರಕ್ಷಣೆ, ಭೂ ಒಡೆತನದ ನೀಡುವ ಹೋರಾಟದ ಫಲವಾಗಿ ಭೂಸುಧಾರಣಾ ಕಾಯ್ದೆ ಜಾರಿಯಾಗಿದೆ. ದೇವರಾಜ್ ಅರಸ್ ಕಾಲದಲ್ಲಿ ಸೆಕ್ಷನ್ 63 ಭೂ ಒಡೆತನದ ಮಿತಿ 10 ಯುನಿಟ್ ಇರಬೇಕು ( 54 ಎಕರೆ ), ಆದರೆ 20 ಯುನಿಟ್ಸ್‌ಗಿಂತ ಹೆಚ್ಚು ಭೂ ಒಡೆತನ ಹೊಂದಿಕೊಳ್ಳಲು ಅವಕಾಶ ಇರಲಿಲ್ಲ. ಇವಾಗ ತಿದ್ದುಪಡಿಯ ಮೂಲಕ ಭೂ ಒಡೆತನದ ಮಿತಿಯನ್ನು ಹೆಚ್ಚಳ ಮಾಡಲಾಗಿದೆ ಎಂದರು. ಇನ್ನು ಕೈಗಾರಿಕಾ ಬೆಳವಣಿಗೆ ಕಾರಣ ನೀಡಿ ಕಾಯ್ದೆಗೆ ತಿದ್ದುಪಡಿ ಎಂದು ಹೇಳುತ್ತಾರೆ ಎಂದ ಸಿದ್ದರಾಮಯ್ಯ, ಕಾಯ್ದೆಯಿಂದ ತಳಸಮುದಾಯಕ್ಕೆ ಅನುಕೂಲವಾಗಿದೆ. ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಭೂಸುಧಾರಣೆಯ ಆತ್ಮವನ್ನು ಕಿತ್ತು ಹಾಕಿದ್ದಾರೆ. ಗೇಣಿದಾರರನ್ನು ಮಾಲಿಕರನ್ನಾಗಿ ಮಾಡಿದ ಕಾನೂನನ್ನು ನಿರ್ಜೀವ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯ ಇಲ್ಲ. ಯಾರ ಜೊತೆಗೆ ಚರ್ಚೆ ಮಾಡದೆ ಆತುರದಲ್ಲಿ ಕಾಯ್ದೆಗೆ ತಿದ್ದುಪಡಿ ಏಕೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಲಂಚದ ಕಾರಣ ನೀಡಿ ಕಾಯ್ದೆಗೆ ತಿದ್ದುಪಡಿ ತರುವುದು ಎಂದು ಸರ್ಕಾರ ಹೇಗೆ ಹೇಳುತ್ತದೆ ಎಂದ ಅವರು, ಲಂಚ ಕಾರಣ ನೀಡಿ ಜನಪರ ವ್ಯವಸ್ಥೆ ರದ್ದು ಮಾಡಲು ಸಾಧ್ಯನಾ? ಇದು ಜನ ವಿರೋಧಿ ಧೋರಣೆ ಹಾಗೂ ಸರ್ಕಾರದ ಅಸಮರ್ಥತೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಇದರಲ್ಲಿ ಕಾರ್ಪೊರೇಟ್ ಲಾಬಿ ಹಾಗೂ ಹೌಸಿಂಗ್ ಸೊಸೈಟಿ ಒತ್ತಡ ಇದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಭೂಸುಧಾರಣಾ ಕಾಯ್ದೆ ತಿದ್ದುಪಡಿ ಹಿಂದೆ ಕಾರ್ಪೊರೇಟ್ ಕಂಪನಿ ಲಾಬಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ತಿದ್ದುಪಡಿಯಿಂದ ಕೃಷಿ ಹೊರತಾಗಿ ರೈತರ ಜಮೀನನ್ನು ಬೇರೆ ಕಾರಣಕ್ಕಾಗಿ ಉಪಯೋಗ ಮಾಡಬಹುದು. ಬೆಂಗಳೂರು ಸುತ್ತಮುತ್ತ ಮಜಾ ಮಾಡಲು ಫಾರ್ಮ್ ಹೌಸ್ ಇದೆ, ತಿದ್ದುಪಡಿಯಿಂದ ಇನ್ನು ಹೆಚ್ಚಾಗಲಿದೆ. ಕಾಯ್ದೆ ತಿದ್ದುಪಡಿಯಿಂದ ಆಹಾರ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಇನ್ನು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಆಹಾರ ಉತ್ಪಾದನೆ 138 ಲಕ್ಷ ಟನ್ ಇದೆ. ಕಾಯ್ದೆ ತಿದ್ದುಪಡಿ ಆದರೆ ಆಹಾರ ಉತ್ಪಾದನೆ ಸ್ವಾವಲಂಬನೆ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಕಾಯ್ದೆ ತಿದ್ದುಪಡಿಯಲ್ಲಿ ಯಾವ ಸದುದ್ದೇಶ ಇಲ್ಲ, ಕಾರ್ಪೊರೇಟ್ ಒತ್ತಡಕ್ಕೆ ಮಣಿದು ರೈತ ಸಮುದಾಯದ ನಾಶ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/3l1Z9wT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...