ಕಾರ್ಮಿಕರ ವಿರೋಧದ ನಡುವೆಯೇ ಕೈಗಾರಿಕಾ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಅಸ್ತು!

ಬೆಂಗಳೂರು: ಕಾರ್ಮಿಕರ ತೀವ್ರ ವಿರೋಧದ ನಡುವೆಯೇ ರಾಜ್ಯ ಕೈಗಾರಿಕಾ ಕಾಯ್ದೆ ತಿದ್ದುಪಡಿಗೆ ಅಸ್ತು ಎಂದಿದೆ. 1948ರ ಸೆಕ್ಷನ್ 64, 65ಕ್ಕೆ ತಿದ್ದುಪಡಿಗೆ ಸಚಿವ ಸಿಎಂ ಬಿಎಸ್‌ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇನ್ನು ಈ ತಿದ್ದುಪಡಿ ಮೂಲಕ ಕಾರ್ಮಿಕರ ಕೆಲಸ‌ ಮಿತಿ ಹೆಚ್ಚುವರಿಯಾಗಿ ಹೆಚ್ಚಳವಾಗಲಿದೆ. ಕೆಲಸದ ಮಿತಿ ಹೆಚ್ಚಳವಾಗುವುದರಿಂದಲೇ ಕಾರ್ಮಿಕರು ಈ ಕಾಯ್ದೆಯ ತಿದ್ದುಪಡಿಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಈ ಕಾಯ್ದೆ ತಿದ್ದುಪಡಿಯಿಂದಾಗಿ ಕಾರ್ಖಾನೆ ಮಾಲೀಕರು, ಕಾರ್ಮಿಕರನ್ನ ಮೂರು ತಿಂಗಳಿಗೆ 75 ಗಂಟೆಯಿಂದ 125 ಗಂಟೆ ಹೆಚ್ಚುವರಿ ಕೆಲಸ ಮಾಡಿಸಬಹುದಾಗಿದೆ. ಅಂದ್ರೆ ಈಗಿರುವಕ್ಕಿಂತ ಮೂರು ತಿಂಗಳಿಗೆ 50 ಗಂಟೆ ಹೆಚ್ಚುವರಿ ಕೆಲಸ ಮಾಡಬೇಕುತ್ತದೆ. ದಿನಕ್ಕೆ ಕನಿಷ್ಠ 35 ರಿಂದ 40 ನಿಮಿಷ ಹೆಚ್ಚಳ ಆಗಲಿದೆ. ಕೊರೊನಾದಿಂದಾಗಿರುವ ನಷ್ಟವನ್ನ ಸರಿದೂಗಿಸುವ ನಿಟ್ಟಿನಲ್ಲಿ ಈ ತಿದ್ದುಪಡಿ ತರಲಾಗಿದೆ. ಉತ್ಪಾದನೆ ಹೆಚ್ಚಿಸುವ ಉದ್ದೇಶವು ಇದರ ಹಿಂದಿದೆ.


from India & World News in Kannada | VK Polls https://ift.tt/3eSpCcw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...