ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಜುಲೈ 26ರಂದು ಪೂರೈಸಿದ ಹಿನ್ನೆಲೆ ಇಂದು(27) ತನ್ನ ಅಧಿಕಾರದ ಅವಧಿಯಲ್ಲಿ ಮಾಡಿರುವ ಸಾಧನೆ ಹಾಗೂ ಕಾರ್ಯಗಳ ಬಗ್ಗೆ ಸಲ್ಲಿಸಲಿದ್ದಾರೆ. ವಿಧಾನಸೌಧದಿಂದ ರಾಜ್ಯದ ಜನತೆಯನ್ನ ಉದ್ದೇಶಿಸಿ ಯಡಿಯೂರಪ್ಪ ಮಾತನಾಡಲಿದ್ದಾರೆ. ಹನ್ನೊಂದು ಗಂಟೆಗೆ ಸಿಎಂ ಯಡಿಯೂರಪ್ಪ ಜನರ ಮುಂದೆ ಬರಲಿದ್ದು, ಸರಕಾರಿ ಹಾಗೂ ಖಾಸಗಿ ಚಾನೆಲ್ಗಳ ಮೂಲಕ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಸಿಎಂ ಸರಕಾರ ರಚಿಸಿ ಒಂದು ವರ್ಷ ತುಂಬಿದ್ದು ಅನೇಕ ಸವಾಲುಗಳನ್ನ ಅವರ ಸರಕಾರ ಎದುರಿಸಿದೆ. ಉತ್ತರ ಕರ್ನಾಟಕ ನೆರೆ, ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆ ಒಂದು ವರ್ಷ ಪೂರೈಸಿದ್ದು ಜನರನ್ನ ಉದ್ದೇಶಿಸಿ ಯಡಿಯೂರಪ್ಪ ಏನು ಭಾಷಣ ಮಾಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಅಲ್ಲದೇ ಕೆಲವು ಘೋಷಣೆಗಳು ಹೊರಬೀಳುವ ಸಾಧ್ಯತೆ ಇದೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಒಂದೇ ವಾರಕ್ಕೆ ಉತ್ತರ ಕರ್ನಾಟಕ ನೆರೆ ಬಂದಿದ್ದು ಅಂದು ಏಕಾಂಗಿಯಾಗಿ ಯಡಿಯೂರಪ್ಪ ಹಲವೆಡೆ ತೆರಳಿ ಪರಿಶೀಲಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಇದೀಗ ಮತ್ತೆ ಕೊರೊನಾ ಬಂದಿದ್ದು ಸರಕಾರ ಆರ್ಥಿಕ ಸಂಕಷ್ಟವು ಎದುರಿಸುತ್ತಿದೆ.
from India & World News in Kannada | VK Polls https://ift.tt/3hCFIbX