ಪ್ರತಿಷ್ಠಿತ ಬೇಕರಿಯಾಗಿದ್ದರಿಂದ ಜನರು ಸಾಮಾನ್ಯವಾಗಿ ಅಲ್ಲಿಗೆ ತೆರಳಿ ಆಹಾರ ಉತ್ಪನ್ನಗಳನ್ನ ಖರೀದಿಸುತ್ತಿದ್ದರು. ಆದರೆ ಬೇಕರಿಗೆ ತೆರಳಿದವರಿಗೆ ಈಗ ಭಯ ಕಾಡುತ್ತಿದೆ. ಹೌದು ಇದು ಶೇಷಾದ್ರಿಪುರಂನ ಪ್ರತಿಷ್ಠಿತ ಬೇಕರಿಗೆ ಭೇಟಿ ನೀಡಿದ ಗ್ರಾಹಕರ ಸದ್ಯದ ಪರಿಸ್ಥಿತಿ. ಈ ಪ್ರತಿಷ್ಟಿತ ಬೇಕರಿಯ 50 ವರ್ಷದ ಮಾಲೀಕ ಶನಿವಾರ ಕೊರೊನಾಗೆ ಬಲಿಯಾಗಿದ್ದು, ಇದೀಗ ಗ್ರಾಹಕರನ್ನ ಭಯದಲ್ಲಿ ಕೂರುವಂತೆ ಮಾಡಿದೆ. ಜುಲೈ 18ರಂದು ಕೊರೊನಾ ಹಿನ್ನೆಲೆ ಬೇಕರಿ ಮಾಲೀಕ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಪತ್ನಿಗೆ ಕೂಡ ಕೊರೊನಾ ಲಕ್ಷಣವಾದ ಜ್ವರ ಕಾಣಿಸಿಕೊಂಡ ಹಿನ್ನೆಲೆ ಅವರು ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಂಕು ಗಂಭೀರವಾದ ನಂತರ ಅವರನ್ನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಸಾವನಪ್ಪಿದ್ದಾರೆ.ಇನ್ನು ಇವರು ಕೊರೊನಾ ಲಕ್ಷಣ ಆರಂಭವಾದ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ನಡೆಸಿದ್ದರು. ಕೊರೊನಾ ಪಾಸಿಟಿವ್ ಬಂದಿರುವುದು ತಿಳಿದು ಒತ್ತಡಕ್ಕೆ ಒಳಗಾಗಿದ್ದರು ಎಂದು ವಸಂತನಗರ ಕಾರ್ಪೋರೇಟರ್ ಎಸ್. ಸಂಪತ್ ಕುಮಾರ್ ತಿಳಿಸಿದ್ದಾರೆ. ಬೇಕರಿ ಮಾಲೀಕರು ಹಾಗೂ ಕಾರ್ಪೋರೇಟರ್ ಗೆಳೆಯರಾಗಿದ್ದು ಈ ಬಗ್ಗೆ ಚರ್ಚಿಸಿದ್ದರಂತೆ. ಅಲ್ಲದೆ ತನ್ನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿಕೊಡುವಂತೆ ಮಾಲೀಕರು ಕಾರ್ಪೋರೇಟರ್ ಬಳಿ ಕೇಳಿಕೊಂಡಿದ್ದರಂತೆ. ಆದರೆ ಈ ಮಧ್ಯೆ ಶನಿವಾರ ಸಣ್ಣ ಪ್ರಮಾಣದ ಹೃದಯಾಘಾತವಾಗಿ ಸಾವನಪ್ಪಿದ್ಶಾರೆ ಎಂದು ಅವರು ತಿಳಿಸಿದ್ದಾರೆ.
ಕ್ಷಯ ಉಲ್ಬಣಕ್ಕೆ ಕಾರಣವಾದ ಕೋವಿಡ್, ಭಯದಿಂದ ಪರೀಕ್ಷೆಗೂ ಬಾರದ ರೋಗಿಗಳು!
ಇನ್ನು ದಿನ ನಿತ್ಯ ವಸ್ತುಗಳನ್ನ ಕೊಳ್ಳಲು ತೆರಳುತ್ತಿದ್ದ ಗ್ರಾಹಕರಿಗೆ ಇದೀಗ ಬೇಕರಿ ಮಾಲೀಕನ ಸಾವು ಭಯ ಸೃಷ್ಟಿಸಿದೆ. ವಾರಕ್ಕೆ ಎರಡು ಬಾರಿ ತೆರಳಿ ನಾವು ಬ್ರೆಡ್ ಖರೀದಿಸುತ್ತಿದ್ದೆವು. ಆದರೆ ಐದು ದಿನದ ಹಿಂದೆ ತೆರಳಿದಾಗ ಬೇಕರಿ ಬಂದ್ ಆಗಿತ್ತು. ವ್ಯಾಟ್ಸ್ಯಾಪ್ ಮೂಲಕ ಮಾಲೀಕರು ಕೊರೊನಾದಿಂದ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿರುವುದಾಗಿ ಗ್ರಾಹಕರೊಬ್ಬರು ತಿಳಿಸಿದ್ದಾರೆ. ಅಲ್ಲದೇ ಆಹಾರದ ಮೂಲಕ ಕೊರೊನಾ ಹರಡಿರುವ ಸಾಧ್ಯತೆಯನ್ನ ವ್ಯಕ್ತಪಡಿಸಿರುವ ಗ್ರಾಹಕರೊಬ್ಬರು ಸಹಜವಾಗೆ ಕೊರೊನಾದ ಬಗ್ಗೆ ತಮಗಿರುವ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ತಗ್ಗದ ಕೊರೊನಾ ಅಬ್ಬರ..! ಮತ್ತೆ 5 ಸಾವಿರ ದಾಟಿದ ಕೇಸ್; ಲಕ್ಷದ ಗಡಿಯಲ್ಲಿ ಸೋಂಕು
ಇನ್ನು ಈ ಬಗ್ಗೆ ಬಿಬಿಎಂಪಿ ಗಮನಕ್ಕೆ ತಂದಾಗ ಪ್ರತಿಕ್ರಿಯೆ ನೀಡಿರುವ ಅಧಿಕಾರಿಯೊಬ್ಬರು, ಸಾವನಪ್ಪಿದ ವ್ಯಕ್ತಿಗೆ ಬೇಕರಿ ಇದೆ ಎಂದು ತಿಳಿದಿರಲಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸಂಪೂರ್ಣವಾಗಿ ಅಂಗಡಿಯನ್ನ ಸ್ಯಾನಿಟೈಸ್ ಮಾಡುತ್ತೇವೆ. ಅಲ್ಲದೆ ಅಂಗಡಿಗೆ ಭೇಟಿ ನೀಡಿದವರ ಮಾಹಿತಿ ಪಡೆದು ಕೊರೊನಾ ಮುನ್ನೆಚ್ಚರಿಕಾ ಕ್ರಮ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.
from India & World News in Kannada | VK Polls https://ift.tt/32VtcQK