ಮಲೆನಾಡಿನ ಮನೆ ಮನೆಗಳಲ್ಲಿ ಈಗ ಕಾಡುಮೇಡುಗಳಲ್ಲಿ ಮಳೆಗಾಲದಲ್ಲಿ ಸಿಗುವ ಆಹಾರ ಪದಾರ್ಥಗಳ ಖಾದ್ಯಗಳ ಘಮಲು ಶುರುವಾಗಿದೆ. ನೈಸರ್ಗಿಕ ಉತ್ಪನ್ನಗಳಾದ ನಾನಾ ವಿಧದ ಅಣಬೆ, ಬಿದಿರು, ವಾಟೆ ಕಳಲೆಗಳು, ಮಾವು, ಹಾಗಲ, ಮರದ ಕೆಸ ಮುಂತಾದವುಗಳಿಂದ ಮಾಡಿದ ತರತರದ ಅಡುಗೆ ಪದಾರ್ಥಗಳ ಸುವಾಸನೆ ಎಲ್ಲರ ಮನೆಗಳಲ್ಲಿ ಮೇಳೈಸತೊಡಗಿದೆ. ಮುಂಗಾರು ಆರಂಭವಾಯಿತು ಎಂದರೆ ಮಲೆನಾಡಿನ ಜನರಿಗೆ ಒಂದು ತರ ಖುಷಿ. ತಲೆ ತಲಾಂತರಗಳಿಂದ ಆಹಾರ ಪದಾರ್ಥಗಳಾಗಿ ಬಳಸಿಕೊಂಡು ಬಂದಿರುವ ನೈಸರ್ಗಿಕವಾಗಿ ತನ್ನಷ್ಟಕ್ಕೆ ಆಯಾ (ತಿಂಗಳು) ಕಾಲಕ್ಕೆ ತಕ್ಕಂತೆ ಸಿಗುವ ಕಳಲೆ, ಕೆಸ, ಅಣಬೆಗಳನ್ನು ಹುಡುಕಿ ತರವುದೇ ಜನರಿಗೆ ಸಂಭ್ರಮ. ಕೊರೊನಾದಂತಹ ಸೋಂಕು ಇಡಿ ಪ್ರಪಂಚವನ್ನೆ ಕಾಡುತ್ತಿರುವ ಈ ಸಂದರ್ಭದಲ್ಲಿ ಜನರು ತಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇಮ್ಯುನಿಟಿ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.ಬಿದಿರು ಮತ್ತು ವಾಟೆಗಳ ಬುಡದಿಂದ ಮೇಲೇಳುವ ಎಳೆಯ ಸುಳಿಯನ್ನು ಕಳಲೆ ಎನ್ನಲಾಗುತ್ತದೆ. ಇದು ಮಳೆಗಾಲ ಪ್ರಾರಂಭದಲ್ಲಿ ಮೇಲೆಳುತ್ತವೆ. ಅವುಗಳನ್ನು ಹುಡುಕಿ ತಂದು ಮೇಲಿನ ಸಿಪ್ಪೆ ತೆಗೆದು ಎಳೆಯ ಭಾಗವನ್ನು ಬಳಸಿ ಸಾಂಬಾರು, ಪಲ್ಯ ಸೇರಿದಂತೆ ಹಲವು ಬಗೆಯ ಖಾದ್ಯ ಮಾಡಲಾಗುತ್ತದೆ. ಬಿದಿರಿನಲ್ಲಿ ಹೆಬ್ಬಿದಿರು, ಕಿರು ಬಿದಿರು, ಬಣ್ಣದ ಬಿದಿರು ಸೇರಿದಂತೆ ನಾನಾ ಬಗೆಯ ಬಿದಿರು ಮತ್ತು ವಾಟೆಯ ಕಳಲೆ ಬಳಸುವುದು ರೂಢಿಯಲ್ಲಿದೆ. ಒಂದೊಂದು ತರದ ಕಳಲೆ ಕೂಡ ಅದರದ್ದೆ ಆದ ಭಿನ್ನ ರುಚಿ ಹೊಂದಿರುತ್ತದೆ.
ಹರಿಯಾಣದಲ್ಲಿ ರೆಡಿಯಾಗ್ತಿದೆ ವಿಶ್ವದ ಮೊದಲ ವಿಶೇಷ ಸುರಂಗ ಮಾರ್ಗ..!
ತೋಟ, ಗದ್ದೆ, ಕಾಡು, ಮೇಡು ಅಲೆದು ವರ್ಷಕ್ಕೊಮ್ಮೆ ತಾವು ಗುರುತು ಮಾಡಿಕೊಂಡಿರುವ ಜಾಗದಲ್ಲಿ ಅಣಗೆ ಹುಡುಕಿ ತರುವುದೇ ಒಂದು ವಿಶೇಷವಾಗಿದೆ. ಅಮಾವಾಸ್ಯೆ, ಹುಣ್ಣಿಮೆ ಅಥವಾ ವರ್ಷದ, ತಿಂಗಳಿನ (ಹಿಂದಿನ ವರ್ಷದ) ಅದೇ ದಿನ ಮಣ್ಣಿನಿಂದ ಮೇಲೇಳುತ್ತವೆ ಎಂದು ಅಂದಾಜಿಸಿ ಗುರುತು ಇಟ್ಟುಕೊಂಡಿರುವ ಜಾಗದಲ್ಲಿ ಅಣಬೆಗಳು ಸಿಗುತ್ತವೆ. ಅಂತಹ ದಿನಗಳಲ್ಲಿ ಮೊದಲು ಹೋದವರಿಗೆ ಮಾತ್ರ ಇವು ಲಭ್ಯ. ಅಣಬೆಗಳಲ್ಲಿಯೂ ಬೇರು ಅಣಬೆ, ದರಗು ಅಣಬೆ, ಹುಲ್ಲು ಅಣಬೆ, ಬರ್ಕಟ್ಟೆ ಅಣಬೆ, ಮರದ ಅಣಬೆ, ಕಲ್ಲುಅಣಬೆ ಹೀಗೆ ನಾನಾ ಬಗೆಯ ಅಣಬೆಗಳನ್ನು ಆಹಾರ ಪದಾರ್ಥವಾಗಿ ಬಳಸುವುದು ರೂಢಿಯಲ್ಲಿದೆ.
ಕೆರೆ ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರ: ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದ ಎಚ್ಡಿಕೆ
ಮರದ ಮೇಲಿನ ತೊಗಟೆ ಆಶ್ರಯಿಸಿ ಬೆಳೆಯುವ ಕೆಸವನ್ನು ಮರಗೆಸ (ಮರದ ಕೆಸ) ಎಂದು ಕರೆಯಲಾಗುತ್ತದೆ. ಆಷಾಢ ತಿಂಗಳಲ್ಲಿಇದರಿಂದ ಪತ್ರೊಡೆ(ಕರಾವಳಿ ಮತ್ತು ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ) ಹಾಗೂ ಇತರೆ ಖಾದ್ಯವಾಗಿ ಬಳಸುತ್ತಾರೆ.ಅಲ್ಲದೇ ಆಷಾಢ ಅಥವಾ ಆಟಿ ಅಮಾವಾಸ್ಯೆಯಂದು ಹಾಲೆ ಮರದ ತೊಗಟೆ(ಚಕ್ಕೆ)ಯನ್ನು ಮಂಜಾನೆಯೆ ಕಲ್ಲಿನಿಂದ ಚಚ್ಚಿ ತೆಗೆದು ಮನೆಗೆ ತಂದು ಕಷಾಯ ಅಥವಾ ಇತರೆ ಖಾದ್ಯ ಮಾಡಿ ಸೇವಿಸುವುದು(ಕರಾವಳಿ ಹಾಗೂ ಕೊಡಗು ಭಾಗದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ) ರೂಢಿಯಲ್ಲಿದೆ. ಇದರಲ್ಲಿ ಹೆಚ್ಚು ಔಷಧ ಗುಣಗಳು ಇರುತ್ತದೆ ಎಂಬ ನಂಬಿಕೆಯಿದೆ.
ಮೈ ಲಾರ್ಡ್... 10 ತಿಂಗಳಿನಿಂದ ಸಂಬಳವೇ ಆಗಿಲ್ಲ! ರಾಜ್ಯದ 250 ಸರಕಾರಿ ವಕೀಲರಿಗೆ 9 ಕೋಟಿ ಬಾಕಿ!
ಇಷ್ಟೆ ಅಲ್ಲದೆ ಮಾವು(ಕಾಡು ಮಾವು), ಮಡಹಾಗಲು(ಕಾಡು ಹಾಗಲ) ಹಾಗೂ ಇತರೆ ಪದಾರ್ಥಗಳು ಗ್ರಾಮೀಣ ಭಾಗದ ಅಡುಗೆ ಮನೆ ಸೇರಿ ರುಚಿಯಾದ ಖಾದ್ಯವಾಗಿ ರೂಪುಗೊಳ್ಳುತ್ತವೆ. ಇವು ಕೇವಲ ರುಚಿಗೆ ಮಾತ್ರ ಅಲ್ಲದೆ ಔಷಧ ಗುಣ ಹೊಂದಿರುತ್ತದೆ. ಜನರ ಆರೋಗ್ಯ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿಯಾಗುತ್ತದೆ ಎಂಬ ನಂಬಿಕೆ ಇದೆ.ಇನ್ನು ಇಂತಹ ವಸ್ತುಗಳಿಂದ ಅಡುಗೆ ತಯಾರಿಸುವಾಗ ಎಚ್ಚರಿಕೆಯೂ ಅಗತ್ಯ. ಯಾಕೆಂದರೆ, ಈ ಎಲ್ಲಾಕಾಡು ಉತ್ಪನ್ನಗಳ ಬಳಕೆ ಎಷ್ಟು ಉಪಯುಕ್ತವೋ ಅಷ್ಟೆ ಅಪಾಯಕಾರಿಯೂ ಹೌದು. ಆಯ್ಕೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಮಾರಕವಾಗಬಹುದು. ಕೆಲವು ಅಣಬೆ ಹಾಗೂ ಇತರೆ ಪದಾರ್ಥಗಳು ವಿಷಯುಕ್ತವೂ ಇವೆ. ಇವುಗಳ ಬಗ್ಗೆ ಬಲ್ಲ ಹಿರಿಯರು, ನುರಿತವರ ಸಲಹೆ ಪಡದೆ ಬಳಕೆ ಮಾಡುವುದು ಸೂಕ್ತವಾಗಿದೆ.
from India & World News in Kannada | VK Polls https://ift.tt/2OUzh7V