ಧೋನಿ ವಿಕೆಟ್‌ ಕೀಪರ್‌ ಸ್ಥಾನಕ್ಕೆ ಪಂತ್‌-ರಾಹುಲ್‌ ಆಯ್ಕೆಮಾಡಿದರೆ, ಮ್ಯಾಚ್‌ ಫಿನಿಶರ್‌ ಯಾರು? ಆಸೀಸ್‌ ಮಾಜಿ ಆಟಗಾರನ ಪ್ರಶ್ನೆ!

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ಕಂಡ ಶ್ರೇಷ್ಠ ನಾಯಕರಲ್ಲಿ ಮಹೇಂದ್ರ ಸಿಂಗ್‌ ಧೋನಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ರಾಂಚಿ ಬಲಗೈ ಬ್ಯಾಟ್ಸ್‌ಮನ್‌ ಅದ್ಭುತ ಫಿನಿಶರ್‌ ಜತೆಗೆ ವಿಕೆಟ್‌ ಕೀಪಿಂಗ್‌ನಲ್ಲಿ ಅತ್ಯದ್ಭುತ ಚಾಣಕ್ಷತನವನ್ನು ಮೈಗೂಡಿಸಿಕೊಂಡಿದ್ದಾರೆ. ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಭಾರತದ ಏಕೈಕ ನಾಯಕ ಎಂಬ ಸಾಧನೆಗೆ ಧೋನಿ ಭಾಜನರಾಗಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಹಣಾಹಣಿಯಲ್ಲಿ ಧೋನಿ ಮ್ಯಾಚ್‌ ಫಿನಿಶರ್‌ ಆಟ ಆಡುವಲ್ಲಿ ವಿಫಲರಾಗಿದ್ದರು. ಆ ಮೂಲಕ ಭಾರತದ ಮೂರನೇ ಏಕದಿನ ವಿಶ್ವಕಪ್‌ ಕನಸು ಮಣ್ಣು ಪಾಲಾಯಿತು. ಆ ಪಂದ್ಯದಲ್ಲಿ ಧೋನಿ ರನೌಟ್‌ ಆಗದೆ ಇದ್ದಿದ್ದರೆ, ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದರು ಎಂಬುದು ಕ್ರಿಕೆಟ್‌ ಅಭಿಮಾನಿಗಳ ಲೆಕ್ಕಾಚಾರ. ಸೆಮಿಫೈನಲ್‌ ಸೋಲಿನ ಬಳಿಕ ಎಂ.ಎಸ್ ಧೋನಿ ಟೀಮ್‌ ಇಂಡಿಯಾದಿಂದ ದೂರ ಉಳಿದಿದ್ದಾರೆ. ಮಾಜಿ ನಾಯಕನ ಅನುಪಸ್ಥಿತಿಯಲ್ಲಿ ರಿಷಭ್‌ ಪಂತ್‌ ಹಾಗೂ ಕೆ.ಎಲ್‌ ರಾಹುಲ್‌ ಅವರನ್ನು ವಿಕೆಟ್‌ ಕೀಪರ್‌ಗೆ ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಉತ್ತರಾಧಿಕಾರಿ ಎಂದೇ ಕರೆಯುವ ರಿಷಭ್‌ ಪಂತ್‌ ವಿಕೆಟ್‌ ಕೀಪಿಂಗ್‌ನಲ್ಲಿ ಇನ್ನೂ ಪರಿಪಕ್ವತೆ ಸಾಧಿಸಿಲ್ಲ ಹಾಗೂ ಬ್ಯಾಟಿಂಗ್‌ನಲ್ಲಿ ದೊಡ್ಡ-ದೊಡ್ಡ ಹೊಡೆತಗಳಿಗೆ ಕೈ ಹಾಕಿ ಸುಟ್ಟುಕೊಳ್ಳುತ್ತಿದ್ದಾರೆ. ಎಂ.ಎಸ್‌ ಧೋನಿ ಕ್ರಿಕೆಟ್‌ ಗೈರುಹಾಜರಿ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಮಾತನಾಡಿದರು ಮತ್ತು ಗ್ರೇಟ್‌ ಫಿನಿಶರ್ ಅನ್ನು ಅಲಂಕರಿಸುವುದು ಟೀಮ್ ಇಂಡಿಯಾಕ್ಕೆ ದೊಡ್ಡ ಸಮಸ್ಯೆಯಾಗಿದೆ ಎಂದು ಎತ್ತಿ ತೋರಿಸಿದರು. "ಸದ್ಯ ಪರಿಸ್ಥಿತಿ ನೋಡುತ್ತಿದ್ದರೆ, ಭಾರತೀಯ ಕ್ರಿಕೆಟ್‌ ಆಯ್ಕೆದಾರರು ರಿಷಭ್‌ ಪಂತ್‌ ಹಾಗೂ ಕೆ.ಎಲ್‌ ರಾಹುಲ್‌ ಅವರೊಂದಿಗೆ ಮುನ್ನಡೆಯುವ ಸಾಧ್ಯತೆ ಇದೆ. ಎಂ.ಎಸ್‌ ಧೋನಿ ಮುಂಬರುವ ಐಪಿಎಲ್‌ನಲ್ಲಿ ಚೆನ್ನಾಗಿ ಆಡಿದ್ದೆ ಆದಲ್ಲಿ ತಂಡಕ್ಕೆ ಮರಳಬಹುದು ಅಥವಾ ಒಂದು ವೇಳೆ ಕಳಪೆ ಪ್ರದರ್ಶನ ಮುಂದುವರಿಸಿದರೆ, ಖಂಡಿತಾ ರಾಷ್ಟ್ರೀಯ ತಂಡದ ಬಾಗಿಲು ಧೋನಿ ಪಾಲಿಗೆ ಮುಚ್ಚಲಿದೆ. ಭಾರತ ತಂಡದ ಬಾಗಿಲು ಅವರಿಗೆ ತೆರೆದರೆ, ಧೋನಿ ಪಾಲಿಗೆ ಅದ್ಭುತ. ವಿರಾಮವನ್ನು ಆಹ್ಲಾದಿಸಿರುವ ಧೋನಿ, ತಮಗೆ ವಯಸ್ಸಾಗಿದೆ ಎಂಬ ಭಾವನೆ ಅವರಿಗಿದ್ದರೆ ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡುವುದು ಕಷ್ಟವಾಗುತ್ತದೆ. "ಅವರು(ಧೋನಿ) ಖಂಡಿತವಾಗಿಯೂ ಸೂಪರ್‌ ಸ್ಟಾರ್. ಅವರು ಅದ್ಭುತ. ಅವರು ಏನು ಮಾಡಬೇಕೆಂಬುದನ್ನು ಮಾಡಲು ಅವಕಾಶ ಮಾಡಿಕೊಡಬೇಕೆಂದು ನಾನು ಭಾವಿಸುತ್ತೇನೆ, ಆದರೆ ಸದ್ಯದ ಸ್ಥಿತಿಯಲ್ಲಿ ರಿಷಭ್‌ ಪಂತ್‌ ಹಾಗೂ ಕೆ.ಎಲ್‌ ರಾಹುಲ್‌ ಅವರ ಮೇಲೆ ಟೀಮ್‌ ಇಂಡಿಯಾಗೆ ಒಲವಿದೆ. ಇನ್ನೂ ಧೋನಿ ರೀತಿ ಮ್ಯಾಚ್‌ ಫಿನಿಶರ್‌ ಸಿಗದೇ ಇರುವುದು ಭಾರತ ತಂಡಕ್ಕೆ ಎದುರಾಗಿರುವ ದೊಡ್ಡ ಸಮಸ್ಯೆ. ಯಾರು ನಿಮ್ಮ ಫಿನಿಶರ್? ಹಾರ್ದಿಕ್‌ ಪಾಂಡ್ಯ-ಹೌದು. ನಿಮ್ಮ ಸಮಯೋಜನೆಗೆ ಅವರು ಬಂದರೂ, ಆಟಕ್ಕುಂಟು ಲೆಕ್ಕಕ್ಕಿಲ್ಲ," ಎಂದು ಜೋನ್ಸ್ ಪ್ರತಿಪಾದಿಸಿದರು. ಇದೇ ಸೆಪ್ಟೆಂಬರ್‌ 19 ರಿಂದ 2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಯುಎಇಯಲ್ಲಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2WU4qNf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...