ಬೆಂಗಳೂರು: ದೇಶಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಕೊರೊನಾ ಹೆಸರಿನಲ್ಲಿ ಸರ್ಕಾರ ಹಗರಣ ನಡೆಸಿದೆ ಎಂದು ವಿಪಕ್ಷ ಕಾಂಗ್ರೆಸ್ ಕಳೆದ ಕೆಲ ವಾರಗಳಿಂದ ಆರೋಪ ಮಾಡ್ತಾನೆ ಬಂದಿದೆ. ಇದಕ್ಕೆ ಪೂರಕವಾಗಿ ದಾಖಲೆಗಳನ್ನು ಕೂಡ ಬಿಡುಗಡೆಗೊಳಿಸಿರುವ ಸರ್ಕಾರ ಈ ಬಗ್ಗೆ ಲೆಕ್ಕ ಕೊಡುವ ತನಕ ವಿರುಮಿಸುವ ಮಾತೇ ಇಲ್ಲ ಎಂದಿದ್ದರು. ಇದಕ್ಕೆ ಪೂರಕವಾಗಿ ನಿನ್ನೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಟಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜನರ ಹೆಣದ ಮೇಲೆ ಸರ್ಕಾರದ ಸಚಿವರುಗಳು ಹಣ ಮಾಡ್ತಿದ್ದಾರೆ ಎಂದು ಕಟುಟೀಕೆ ಮಾಡಿದ್ದರು. ಸಂಜೆ ಹೊತ್ತಿಗೆ ವಿಪಕ್ಷದ ದಾಳಿಗೆ ಪ್ರತ್ಯತ್ತರ ಕೊಡುವ ಸಲುವಾಗಿ ಡಿಸಿಎಂ ಸೇರಿದಂತೆ ಸರ್ಕಾರ ಐವರು ಸಚಿವರುಗಳು ಪ್ರತಿಕ್ರಿಯೆ ನೀಡಿದ್ದರು. ಲೆಕ್ಕ ಕೊಡಿ ಪ್ರಶ್ನೆಗೆ ಪ್ರತ್ಯುತ್ತರವಾಗಿ ಲೆಕ್ಕ ತಗೊಳಿ ಎಂದು ಟಾಂಗ್ ನೀಡಿದ್ದರು. ಈ ವೇಳೆ ವಿಪಕ್ಷ ಕಾಂಗ್ರೆಸ್ ಅನ್ಜುವ ಕೌರವರ ತಂಡಕ್ಕೆ ನಾವು ಐದು ಜನ ಸಚಿವರು ಪಂಚ ಪಾಂಡವರಾಗಿ ಉತ್ತರ ಕೊಡಲು ಬಂದಿದ್ದೇವೆ ಎಂದಿದ್ದರು. ಇದಕ್ಕೆ ಮತ್ತೆ ರಿಯಾಕ್ಟ್ ಮಾಡಿರುವ ಸಿದ್ದರಾಮಯ್ಯ ಸರ್ಕಾರದ ಕಾಲೆಳೆದಿದ್ದಾರೆ. ಈ ಬಗ್ಗೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಾಂಡವರು ಯಾರು ಕೌರವರು ಯಾರು ಎನ್ನುವ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿರುವ ಸಿದ್ದರಾಮಯ್ಯ, ಬಿಜೆಪಿಯವರು ಕೌರವರು ಆಗೋಕೂ ಲಾಯಕ್ಕಿಲ್ಲ ಎಂದು ಹೀಯಾಳಿಸಿದ್ದಾರೆ. ಈಗಿನ ರಾಜಕಾರಣಕ್ಕೆ ಮಹಾಭಾರತದ ಪಾಂಡವರು, ಕೌರವರನ್ನು ಯಾಕೆ ಅವರು ಕರೆತಂದಿದ್ದಾರೆ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ದ್ವಾಪರ ಯುಗದಲ್ಲಿ ನಡೆದಿರುವಂತಹದ್ದನ್ನೆಲ್ಲಾ ಇವರಿಗೆ ಯಾಕ್ರಪ್ಪಾ ಹೋಲಿಸಿಕೊಳ್ಳುತ್ತಿದ್ದಾರೆ. ನನಗೆ ಅವರ ಥರ ಬೇರೆಯವರಿಗೆ ಹೋಲಿಸಿಕೊಂಡು ಗೊತ್ತಿಲ್ಲ. ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ ಅಷ್ಟೇ, ಇವರೇನು ಪಾಂಡವರು ಅಂತಾ ಕರೆಸಿಕೊಂಡ ತಕ್ಷಣ ಜನರಿಗೆ ಧರ್ಮರಾಯ ಆಗ್ತಾರಾ? ಎಂದು ಪ್ರಶ್ನಿಸಿದ್ದಾರೆ.
from India & World News in Kannada | VK Polls https://ift.tt/2ZVE5QM