30 ಲಕ್ಷಕ್ಕಾಗಿ ಅಪಹರಣ, ಕೊಲೆಯ ಡ್ರಾಮವಾಡಿದ್ರಾ ಪೊಲೀಸರು? ಐಪಿಎಸ್‌ ಅಧಿಕಾರಿ ಅಮಾನತು!

ಕಾನ್ಪುರ: ಖಾಸಗಿ ಲ್ಯಾಬ್‌ನ ಟೆಕ್ನಿಷಿಯನ್‌ ಅಪಹರಣ ಮತ್ತು ಹತ್ಯೆ ಸಂಬಂಧ ಸರಕಾರವು ಐಪಿಎಸ್‌ ಅಧಿಕಾರಿ ಸೇರಿದಂತೆ ನಾಲ್ವರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಸಂಜೀತ್‌ ಯಾದವ್‌ (28) ಅವರನ್ನು ಕಳೆದ ತಿಂಗಳು ದುಷ್ಕರ್ಮಿಗಳು ಅಪಹರಿಸಿದ್ದರು. ನಂತರ 30 ಲಕ್ಷ ರೂಪಾಯಿ ಒತ್ತೆ ಹಣ ನೀಡಲು ಬೇಡಿಕೆ ಇರಿಸಿದ್ದರು. ಅಪಹರಣಕಾರರು ಬೇಡಿಕೆಯಿಟ್ಟಂತೆ 30 ಲಕ್ಷ ರೂ. ಹೊಂದಿಸಿ, ಹಣ ಪಡೆಯಲು ಬರುವಾಗ ಬಂಧಿಸಲು ಪೊಲೀಸರು ಯೋಜನೆ ರೂಪಿಸಿದ್ದರು. ಪೊಲೀಸರ ಕಣ್ಣು ತಪ್ಪಿಸಿ ಜುಲೈ 13ರಂದು ಅಪಹರಣಕಾರರು 30 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದರು. ಈಗ ಪೊಲೀಸರು ಸಂಜೀತ್‌ ಹತ್ಯೆಯಾಗಿದೆ ಎಂದು ಹೇಳುತ್ತಿದ್ದಾರೆ, ಜತೆಗೆ ಮೃತದೇಹ ಪತ್ತೆ ಮಾಡುವುದು ಕೂಡ ಅವರಿಗೆ ಸಾಧ್ಯವಾಗಿಲ್ಲ. ಸಂಜಿತ್‌ ಕುಟುಂಬದ ಸದಸ್ಯರು ವಾರದ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿನೇಶ್‌ ಕುಮಾರ್‌ ಅವರ ನಿವಾಸದ ಎದುರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಬಳಿಕ ಸರಕಾರವು ಬೇರೊಂದು ತಂಡದಿಂದ ತನಿಖೆಗೆ ಆದೇಶಿಸಿತ್ತು. ಈ ನಡುವೆ, ''30 ಲಕ್ಷ ರೂ. ಹೊಂದಿಸಿ ಪೊಲೀಸರಿಗೆ ನೀಡಲಾಗಿಲ್ಲ ಎಂದು ಹೇಳಿಕೆ ನೀಡುವಂತೆಯೂ ಇಲಾಖೆ ಒತ್ತಡ ಹೇರುತ್ತಿದೆ,'' ಎಂದು ಸಂಜಿತ್‌ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.


from India & World News in Kannada | VK Polls https://ift.tt/3eXWAs9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...