ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು 20 ಲಕ್ಷ ಪತ್ರ ಬರೆಯಲಿದೆ ಎನ್‌ಸಿಪಿ..! ಕಾರಣವೇನು?

ಹೊಸದಿಲ್ಲಿ: ಎರಡು ದಿನದ ಹಿಂದೆ ರಾಜ್ಯಸಭೆಯ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ವೇಳೆ ರಾಜ್ಯಸಭೆಯ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ಅವರು ಛತ್ರಪತಿ ಶಿವಾಜಿ ಮಹಾರಾಜ್‌ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪಕ್ಷ 20 ಲಕ್ಷ ಪತ್ರಗಳನ್ನು ಬರೆಯಲು ತೀರ್ಮಾನಿಸಿದೆ. ರಾಜ್ಯಸಭಾ ನೂತನ ಸದಸ್ಯ ಶಿವಾಜಿ ವಂಶಸ್ಥರಾದ ಉದಯನರಾಜೇ ಭೋಸಲೆ ಅವರು ಪ್ರಮಾಣ ವಚನ ಸ್ವೀಕರಿಸುವ ವೇಳೆ ಕೊನೆಯಲ್ಲಿ ‘ಜೈ ಭವಾನಿ, ಜೈ ಶಿವಾಜಿ’ ಘೋಷಣೆ ಕೂಗಿದ್ದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ರಾಜ್ಯ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು, ‘ಇದು ನನ್ನ ಛೇಂಬರ್.. ಮನೆಯಲ್ಲ ಅನ್ನೋದು ನೆನಪಿನಲ್ಲಿಡಿ. ಪ್ರಮಾಣ ವಚನ ಬಿಟ್ಟರೆ ಬೇರೆ ಯಾವುದೂ ಕಡತದಲ್ಲಿ ಸೇರುವುದಿಲ್ಲ. ಬೇರೆ ಯಾವುದೇ ಘೋಷಣೆಗಳನ್ನು ಕೂಗಬಾರದು ಮುಂದಕ್ಕೆ ನೆನಪಿಡಿ’ ಎಂದು ಎಚ್ಚರಿಸಿದ್ದರು. ಎನ್‌ಸಿಪಿ ಸದಸ್ಯ ಘೋಷಣೆ ಕೂಗಿದ್ದಕ್ಕೆ ರಾಜ್ಯ ಸಭಾಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿರೋದು ಮಹರಾಷ್ಟ್ರದಲ್ಲಿ ವಿವಾದಕ್ಕೆ ಕಾರಣವಾಗಿದ್ದು ಹೀಗಾಗಿ ವೆಂಕಯ್ಯ ನಾಯ್ಡು ಅವರು ಅಗೌರವದಿಂದ ಪ್ರತಿಕ್ರಿಯಿಸಿದ್ದಾರೆ ಎಂದು ಅವರ ನಡೆ ಖಂಡಿಸಿ ಜೈ ಭವಾನಿ ಜೈ ಶಿವಾಜಿ ಎಂದು ಬರೆಯಲಾದ 20 ಲಕ್ಷ ಪತ್ರಗಳನ್ನು ಬರೆದು ರಾಜ್ಯಸಭಾಧ್ಯಕ್ಷರಿಗೆ ಅವರಿಗೆ ರವಾನಿಸಲು ಎನ್‌ಸಿಪಿ ಪಕ್ಷ ತೀರ್ಮಾನಿಸಿದೆ. ಇನ್ನೊಂದೆಡೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮತ್ತು ಶಿವಸೇನೆ ಪಕ್ಷ ನಾಯ್ಡು ಅವರ ಹೇಳಿಕೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಿಜೆಪಿ ವಿರುದ್ಧ ಪ್ರಯೋಗಿಸಲು ಪ್ರಯತ್ನಿಸುತ್ತಿದ್ದು, ಶಿವಾಜಿಯ ಹೆಸರು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಔರಂಗಜೇಬ್‌ನಂತೆ ಆಡಳಿತ ನೀಡುತ್ತಿದೆ ಎಂದು ಕಾಂಗ್ರೆಸ್‌, ಆರೋಪಿಸಿದರೆ, ಬಿಜೆಪಿ ಯಾಕೆ ಈ ವಿಷಯದಲ್ಲಿ ಮೌನವಾಗಿದೆ ಎಂದು ಎನ್‌ಸಿಪಿ ಕಾಲೆಳೆದಿದೆ.


from India & World News in Kannada | VK Polls https://ift.tt/3hAXnkp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...