ಕೆಎಎಸ್‌ ಅಧಿಕಾರಿಗಳ ಅಕ್ರಮ ನೇಮಕ ಪ್ರಕರಣ: ಕ್ಯುರೆಟಿವ್‌ ಅರ್ಜಿ ವಜಾ, ಹೈಕೋರ್ಟ್‌ ತೀರ್ಪೇ ಅಂತಿಮ!

- ಶ್ರೀಕಾಂತ್‌ ಹುಣಸವಾಡಿ, ಬೆಂಗಳೂರು ಈ ಹಿಂದಿನ ವಿಶೇಷ ಮೇಲ್ಮನವಿ, ರಿವ್ಯೂ (ಪುನರ್‌ ಪರಿಶೀಲನಾ) ಅರ್ಜಿಗಳನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್‌ ಇದೀಗ ಅದೇ ವಿಚಾರದ ಕುರಿತು ಅಭ್ಯರ್ಥಿಗಳಾದ ದಯಾ ಎಂ.ನಾಯಕ್‌, ಎಚ್‌.ಎಸ್‌. ಸುರೇಶ್‌ಕುಮಾರ್‌ ಸಲ್ಲಿಸಿದ್ದ ಕ್ಯುರೇಟಿವ್‌ (ದೋಷ ಸರಿಪಡಿಸುವುದು) ಅರ್ಜಿಗಳನ್ನೂ ತ್ರಿಸದಸ್ಯ ಪೀಠ ಮೇ 19ರಂದು ವಜಾಗೊಳಿಸಿದ್ದು, ಆದೇಶದ ಪ್ರತಿ 'ವಿಜಯ ಕರ್ನಾಟಕ'ಕ್ಕೆ ಲಭ್ಯವಾಗಿದೆ. ಆ ಮೂಲಕ, 2016ರ ಜೂನ್‌ 21ರಂದು ಹೈಕೋರ್ಟ್‌ ನೀಡಿದ್ದ ತೀರ್ಪು ಅಂತಿಮ ಎಂದು ಸಾರಿದೆ. 2018ರ ಏಪ್ರಿಲ್‌ನಲ್ಲಿಸುಪ್ರೀಂ ಕೋರ್ಟ್‌ನ ದ್ವಿಸದಸ್ಯಪೀಠ, ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತ್ತು. 2019ರಲ್ಲಿ ಸಲ್ಲಿಸಿದ್ದ ರಿವ್ಯೂ ಅರ್ಜಿಯೂ ವಜಾಗೊಂಡಿತ್ತು. ಹೀಗಾಗಿ ಎಲ್ಲ ಅಸ್ತ್ರಗಳನ್ನು ಕಳೆದುಕೊಂಡಿರುವ ಸರಕಾರ ಹೈಕೋರ್ಟ್‌ ಪೀಠದ ಆದೇಶ ಪಾಲಿಸಬೇಕಾಗಿದೆ. ಹೈಕೋರ್ಟ್‌ ಆದೇಶ ಪಾಲನೆ ಮಾಡದಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ನ್ಯಾಯಾಂಗ ನಿಂದನೆ ಅರ್ಜಿಗಳನ್ನು ವಿಲೇವಾರಿ ಮಾಡುವುದು ಹೈಕೋರ್ಟ್‌ಗೆ ಈಗ ಸುಲಭವಾಗಿದೆ. ಹೈಕೋರ್ಟ್‌ನ ಆದೇಶವೇನಿತ್ತು? ಕೆ.ಆರ್‌.ಖಲೀಲ್‌ ಆಹಮದ್‌ ಮತ್ತಿತರರು ಸಲ್ಲಿಸಿದ್ದ ಪಿಐಎಲ್‌ನ ಮನವಿ ಆಲಿಸಿದ್ದ ನ್ಯಾ. ಎನ್‌.ಕುಮಾರ್‌, ನ್ಯಾ. ಬಿ. ವೀರಪ್ಪ ಅವರಿದ್ದ ವಿಭಾಗೀಯ ಪೀಠ 2016ರ ಜೂ.21ರಂದು ತೀರ್ಪು ನೀಡಿ, ''1998, 1999 ಹಾಗೂ 2004ನೇ ಸಾಲಿನ ಅಧಿಕಾರಿಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ನಿಜ. ಆದರೂ ಆ ನೇಮಕಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗದು. ಮೂರು ಬ್ಯಾಚ್‌ಗಳಲ್ಲಿ ನಿಯಮ ಉಲ್ಲಂಘಿಸಿ ನೇಮಕಗೊಂಡವರನ್ನು ಸೇವೆಯಿಂದ ಮುಕ್ತಿಗೊಳಿಸಿ, ಆ ಜಾಗದಲ್ಲಿ ಪ್ರತಿಭಾವಂತರಿಗೆ ಅವಕಾಶ ನೀಡಿ,'' ಎಂದು ಹೇಳಿತ್ತು. ''ಹುದ್ದೆಗಳ ಮೀಸಲು ಬದಲು, ಸ್ವಜನಪಕ್ಷಪಾತ, ಸಂದರ್ಶನದ ಅಂಕ ವ್ಯತ್ಯಾಸ ಮತ್ತಿತರ ಅಕ್ರಮಗಳಿಂದ ಮೂರು ಬ್ಯಾಚ್‌ಗಳಲ್ಲಿ ಕೆಲವು ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ, ಕೆಪಿಎಸ್‌ಸಿ ಎರಡು ತಿಂಗಳಲ್ಲಿ ಹೊಸ ಆಯ್ಕೆ ಪಟ್ಟಿ ಸಿದ್ಧಪಡಿಸಿ ಆಗಿರುವ ಅನ್ಯಾಯ ಸರಿಪಡಿಸಿಬೇಕು'' ಎಂದು ನ್ಯಾಯಪೀಠ ಸ್ಪಷ್ಟಪಡಿಸಿತ್ತು. 1998ರಲ್ಲಿ383, 1999ರಲ್ಲಿ191 ಮತ್ತು 2004ರಲ್ಲಿ153 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆದಿತ್ತು. ಜಾರಿಯಾಗಬೇಕಿರುವುದು - ಹೈಕೋರ್ಟ್‌ ತೀರ್ಪಿನಂತೆ ಈಗಾಗಲೇ ಹೊಸದಾಗಿ ಉದ್ಯೋಗ ನೀಡಿರುವ 26 ಮಂದಿಗೆ ಸೇವಾಹಿರಿತನ, ಬಡ್ತಿ ಮತ್ತು ವೇತನ ನಿಗದಿ. - ಅಂತರ್‌ ಇಲಾಖೆಗೆ ಬದಲಾವಣೆಗೊಂಡು ಬೇರೆ ಬೇರೆ ಹುದ್ದೆಗಳನ್ನು ವಹಿಸಿಕೊಂಡಿರುವ 100ಕ್ಕೂ ಅಧಿಕ ಮಂದಿಗೆ ಸೇವಾ ಜೇಷ್ಠತೆ, ತತ್ಸಮಾನ ಹುದ್ದೆ ನೀಡಿ, ಸ್ಥಳ ನಿಯುಕ್ತಿಗೊಳಿಸುವುದು. - ಹುದ್ದೆ ಕಳೆದುಕೊಳ್ಳಲಿರುವ 36 ಮಂದಿ ಕೆಎಟಿಯಿಂದ ಪಡೆದಿರುವ ಮಧ್ಯಾಂತರ ಆದೇಶ ತೆರವುಗೊಳಿಸಿ, ವಜಾಗೊಳಿಸುವುದು. - ಹೈಕೋರ್ಟ್‌ನ ಆದೇಶದಂತೆ 3 ಬ್ಯಾಚ್‌ಗಳಲ್ಲಿನ ಅನರ್ಹರನ್ನು ಗುರುತಿಸಿ ಅವರನ್ನು ಸೇವೆಯಿಂದ ವಜಾಗೊಳಿಸಿ, ಇಷ್ಟು ಅನ್ಯಾಯಕ್ಕೆ ಒಳಗಾಗಿದ್ದವರಿಗೆ ನ್ಯಾಯದೊರಕಿಸಿಕೊಡುವುದು. - ಅರ್ಹತೆ ಇಲ್ಲದಿದ್ದರೂ ಐಎಎಸ್‌ ಹುದ್ದೆಗಳನ್ನು ಗಿಟ್ಟಿಸಿಕೊಂಡಿರುವ ಎಚ್‌. ಬಸವರಾಜೇಂದ್ರ, ಕರಿಗೌಡ, ಶಿವಾನಂದ ಕಾಪಸಿ, ಎಚ್‌.ಎನ್‌. ಗೋಪಾಲಕೃಷ್ಣ, ಕವಿತಾ ಎಸ್‌. ಮನ್ನಿಕೇರಿ, ಅಕ್ರಂಪಾಷ, ಎನ್‌.ಶಿವಶಂಕರ್‌, ಪಿ.ವಸಂತ್‌ ಕುಮಾರ್‌, ಮೀನಾ ನಾಗರಾಜ್‌, ಆರ್‌. ಪೆದ್ದಪ್ಪಯ್ಯ ಸೇರಿ 11 ಅಧಿಕಾರಿಗಳಿಗೆ ಹಿಂಬಡ್ತಿ ನೀಡುವುದು. ಇಬ್ಬರ ನಿವೃತ್ತಿ ಈ ಕಾನೂನು ಹೋರಾಟದ ಮಧ್ಯೆಯೇ ಅರ್ಹತೆ ಇಲ್ಲದಿದ್ದರೂ ಐಎಎಸ್‌ ಹುದ್ದೆ ಗಿಟ್ಟಿಸಿಕೊಂಡಿದ್ದ ವೃಷಭೇಂದ್ರಮೂರ್ತಿ ಏಪ್ರಿಲ್‌ನಲ್ಲಿ ನಿವೃತ್ತಿಯಾದರೆ, ನ್ಯಾಯಾಲಯದ ಆದೇಶದಂತೆ ಐಎಎಸ್‌ಗೆ ಪದೋನ್ನತಿ ಪಡೆಯಬೇಕಾದ ರಾಮಪ್ಪ ಹಟ್ಟಿ ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿರ್ದೇಶಕರ ಹುದ್ದೆಯಿಂದ ಕೆಳಗಿಳಿದು ಕೆಎಎಸ್‌ ಕಿರಿಯ ಶ್ರೇಣಿ ಅಧಿಕಾರಿಯಾಗಿ ಇದೇ ಮೇ 30ಕ್ಕೆ ನಿವೃತ್ತಿಯಾಗುತ್ತಿದ್ದಾರೆ.


from India & World News in Kannada | VK Polls https://ift.tt/3c0x4kA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...