ಬೆಂಗಳೂರು: ಭಾರತದಲ್ಲಿನ ಶೇ.21.40 ರಷ್ಟು ಅರಣ್ಯ ಸಂಪತ್ತು ಬೆಂಕಿಯಲ್ಲಿ ಬೂಧಿಯಾಗಿದೆ. ಆದರೆ ಕರ್ನಾಟಕದ ಭಾಗದಲ್ಲಿ 1025 ಚದರ ಕಿ.ಮೀನಷ್ಟು ಅರಣ್ಯ ಸಂಪತ್ತು ವೃದ್ಧಿಯಾಗಿದೆ. ವಿವಿಧ ಸಂಪನ್ಮೂಲ, ಕಾಡು ಪ್ರಾಣಿಗಳ ತವರೂರಾಗಿರುವ ದೇಶದಲ್ಲಿ 2019ರಲ್ಲಿ ಹೆಚ್ಚು ಬೆಂಕಿಗೆ ಆಹುತಿಯಾಗಿರುವುದಾಗಿ ಫಾರೆಸ್ಟ್ ಸರ್ವೇ ಆಫ್ ಇಂಡಿಯಾದ 2019ರ ವಾರ್ಷಿಕ ವರದಿ ತಿಳಿಸಿದೆ. ಈಶಾನ್ಯ ರಾಜ್ಯ ಹಾಗೂ ಮಧ್ಯ ಭಾರತದಲ್ಲಿನ ಅರಣ್ಯ ಸಂಪತ್ತು ಹೆಚ್ಚಿನ ಪ್ರಮಾಣದಲ್ಲಿ ಬೆಂಕಿಗೆ ಆಹುತಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2018 ನವಂಬರ್ ನಿಂದ 2019 ಜೂನ್ ವರೆಗೆ 29,547 ಬಾರಿ ಎಲರ್ಟ್ ಘೋಷಣೆ ಮಾಡಲಾಗಿದೆ. ಅದರಲ್ಲೂ ಮಿಜಾರಾಂ ಭಾಗದ ಅರಣ್ಯ ಭಾಗದಲ್ಲಿ ಬೆಂಕಿ ಅನಾಹುತ ಸಂಬಂಧ ಗರಿಷ್ಠ ಪ್ರಮಾಣದಲ್ಲಿದೆ. ಈ ಭಾಗದಲ್ಲಿ ರೈತರು ಭೂಮಿಗೆ ಬೆಳೆ ಬಳಿಕ ಕೃಷಿ ತ್ಯಾಜ್ಯ ನಾಶ ಮಾಡುವ ಸಂಬಂಧ ಜಮೀನುಗಳಿಗೆ ಬೆಂಕಿ ಹಾಕುತ್ತಾರೆ. ಇದರಿಂದಾಗಿಯೂ ಹೆಚ್ಚಿನ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ವಿಶ್ಲೇಶಿಸಲಾಗಿದೆ. ವರದಿಯ ಅನುಸಾರ ದೇಶದಲ್ಲಿ ಒಟ್ಟಾರೆ ಹಸಿರಿನ ಪ್ರಮಾಣದಲ್ಲಿ ಶೇ.0.65 ರಷ್ಟು ಹೆಚ್ಚಳವಾಗಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ 5,188 ಚದರ ಕಿ.ಮೀನಷ್ಟು ಅರಣ್ಯ ಪ್ರದೇಶದಲ್ಲಿ ಹೆಚ್ಚಳವಾಗಿದೆ. ಒಟ್ಟಾರೆ ಪ್ರಸ್ತುತ ದೇಶದಲ್ಲಿ 8.07 ಲಕ್ಷ ಚದರ ಕಿ.ಮೀನಷ್ಟು ಅರಣ್ಯ ಪ್ರದೇಶದಿಂದ ಕೂಡಿದೆ. ಒಟ್ಟಾರೆ ಭಾರತ ಭೂ ಭಾಗದಲ್ಲಿ ಶೇ.24.56 ರಷ್ಟು ಭೂಮಿ ಅರಣ್ಯ ಸಂಪತ್ತಿನಿಂದ ಕೂಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ವರದಿಯಲ್ಲಿನ ಪ್ರಮುಖ ಆಂಧ್ರಪ್ರದೇಶ, ಕೇರಳದಲ್ಲೂ ಹೆಚ್ಚಳವಾಗಿದೆ. ... ಈಶಾನ್ಯ ರಾಜ್ಯಗಳಾದ ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಭಾಗದಲ್ಲಿ ಹಸಿರಿನ ಪ್ರಮಾಣ ಗಣನೀಯ ಇಳಿಕೆ ಕಂಡಿದೆ. ಒಟ್ಟಾರೆ 2019ರ ಅವಧಿಯ ವರೆಗಿದ್ದ 7,12,249 ಚದರ ಕಿ.ಮೀ ಪ್ರಮಾಣದ ಅರಣ್ಯ ಪ್ರದೇಶದಲ್ಲಿ ಶೇ.22 ರಷ್ಟು ಭಾಗ ತೀವ್ರವಾದ ಬೆಂಕಿಯ ಕೆನ್ನಾಲಿಗೆಯಿಂದ ಬಾಧಿಸಲ್ಪಡುವ ಭಾಗಗಳೆಂದು ಗುರುತಿಸಲಾಗಿದೆ.
from India & World News in Kannada | VK Polls https://ift.tt/2MTed0Q