ಸುದೀರ್ಘ ವಿಶ್ರಾಂತಿ; ಧೋನಿ ವಿರುದ್ಧ ಗರಂ ಆದ ಗವಾಸ್ಕರ್

ಹೊಸದಿಲ್ಲಿ: ಕಳೆದ ವರ್ಷ ಏಕದಿನ ವಿಶ್ವಕಪ್ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ರಂಗದಿಂದ ದೂರವುಳಿದಿರುವ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸುದೀರ್ಘ ಅವಧಿಯ ವಿಶ್ರಾಂತಿಯಲ್ಲಿದ್ದಾರೆ. ಚಾಂಪಿಯನ್ ಆಟಗಾರ ಧೋನಿ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡುವರೇ ಅಥವಾ ನಿವೃತ್ತಿ ಸಲ್ಲಿಸುವರೇ ಎಂಬುದು ತಿಳಿದು ಬಂದಿಲ್ಲ. ಬಿಸಿಸಿಐ ಹಾಗೂ ಆಯ್ಕೆ ಸಮಿತಿ ಧೋನಿ ಭವಿಷ್ಯದ ಬಗ್ಗೆ ಸ್ಪಷ್ಟತೆಯಿದೆ ಎಂದಷ್ಟೇ ಹೇಳುತ್ತಿದೆ. ಸ್ವತ: ಧೋನಿ ಕೂಡಾ ಸ್ಪಷ್ಟನೆ ನೀಡಿಲ್ಲ. ಇವೆಲ್ಲದರಿಂದ ಮುಂಬರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಭಾರತದ ಯೋಜನೆಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಈ ಮಧ್ಯೆ ಮಹಿ ಕ್ರಿಕೆಟ್ ರಂಗದಿಂದ ದೂರವುಳಿದು ಸುದೀರ್ಘ ವಿಶ್ರಾಂತಿ ಪಡೆದಿರುವುದಕ್ಕೆ ಮಾಜಿ ಬ್ಯಾಟಿಂಗ್ ದಿಗ್ಗಜ ಗರಂ ಆಗಿದ್ದಾರೆ. "ಈ ಪ್ರಶ್ನೆಯನ್ನು ನೀವು ಧೋನಿ ಅವರನ್ನೇ ಕೇಳಬೇಕು. 2019 ಜುಲೈ 10ರ ಬಳಿಕ ಭಾರತ ತಂಡದ ಪರ ಆಡುತ್ತಿಲ್ಲ. ಇದೊಂದು ಮಹತ್ವದ ಪ್ರಶ್ನೆಯಾಗಿದೆ. ಯಾರೆ ಆದರೂ ಇಷ್ಟು ಸುದೀರ್ಘ ಕಾಲ ತಂಡದಿಂದ ಹೊರಗುಳಿಯುವರೇ? ಈ ಪ್ರಶ್ನೆಗೆ ಉತ್ತರ ಸಿಗಬೇಕಿದೆ" ಎಂದು ಗವಾಸ್ಕರ್ ತಿಳಿಸಿದರು. ಇತ್ತೀಚೆಗಷ್ಟೇ ಹೇಳಿಕೆ ನೀಡಿರುವ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ, ಧೋನಿ ಶೀಘ್ರದಲ್ಲೇ ಏಕದಿನಕ್ಕೆ ವಿದಾಯ ಹಾಡುವ ಸಾಧ್ಯತೆಯಿದೆ ಎಂದಿದ್ದರು. ಆದರು ಟಿ20 ಪುನರಾಗಮನಕ್ಕೆ ಸಂಬಂಧಪಟ್ಟಂತೆ ಮುಂಬರುವ ಐಪಿಎಲ್ ನಿರ್ಣಾಯಕವೆನಿಸಲಿದೆ ಎಂದಿದ್ದರು. ಏತನ್ಮಧ್ಯೆ ಐಪಿಎಲ್‌ಗೆ ಹೋಲಿಸಿದಾಗ ರಣಜಿ ಆಟಗಾರರು ವೇತನವನ್ನು ಗಣನೀಯವಾಗಿ ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಐಪಿಎಲ್ ಹಾಗೂ ಪ್ರಥಮ ದರ್ಜೆ ಸಂಭಾವನೆಯಲ್ಲಿ ತುಂಬಾನೇ ವ್ಯತ್ಯಾಸವಿದೆ ಎಂಬುದನ್ನು ಬೊಟ್ಟು ಮಾಡಿದರು. ಈ ವಿಷಯಗಳನ್ನು ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಪರಿಗಣಿಸುವ ನಂಬಿಕೆ ವ್ಯಕ್ತಪಡಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2NkBoRU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...