ಪಾಕ್‌ ಉಗ್ರರನ್ನು ಧೃತಿಗೆಡಿಸುವಲ್ಲಿ ಸರ್ಜಿಕಲ್‌ ದಾಳಿ ವಿಫಲವಾಗಿದೆ: ಶಿವಸೇನೆ

ಮುಂಬಯಿ: 2016ರ ಸರ್ಜಿಕಲ್‌ ದಾಳಿಯ ಪರಿಣಾಮದ ಬಗ್ಗೆ ಚಕಾರವೆತ್ತಿರುವ , ಪಾಕಿಸ್ತಾನದ ಉಗ್ರರನ್ನು ಧೃತಿಗೆಡಿಸುವಲ್ಲಿ ವಿಫಲವಾಗಿದೆ ಎಂದಿದೆ. ಭಾರತದ ಸೈನಿಕರ ಹತ್ಯೆ ಮುಂದುವರಿದಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಶಿವಸೇನೆ, ಪಾಕಿಸ್ತಾನವನ್ನು ಮೂಲಕ ಹೇಗೆ ಸದ್ದಡಿಗಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ ಎನ್ನುವ ಮೂಲಕ ನಿಜಕ್ಕೂ ಸರ್ಜಕಲ್‌ ದಾಳಿ ನಡೆದಿದೆಯೇ ಎಂಬ ಅನುಮಾನವನ್ನು ವ್ಯಕ್ತ ಪಡಿಸಿದೆ. ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಮಹಾರಾಷ್ಟ್ರದ ಯೋಧ ನಾಯ್ಕ್‌ ಸಂದೀಪ್‌ ರಘುನಾಥ್‌ ಸಾವಂತ್‌ ಹುತಾತ್ಮಗೊಂಡ ನಂತರ ಶಿವಸೇನೆಯಿಂದ ಈ ಹೇಳಿಕೆ ನೀಡಿದೆ. ಗಡಿಯಲ್ಲಿ ತೊಂದರೆ ಮುಂದುವರಿಯುತ್ತಿದ್ದರೆ ರಾಷ್ಟ್ರದ ಯೋಗಕ್ಷೇಮಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದೆ. ಕಾಶ್ಮೀರದ ಘಟನೆಯನ್ನು ಗಮನಿಸಿದರೆ ಹೊಸ ವರ್ಷ ಒಳ್ಳೆಯ ರೀತಿಯಲ್ಲಿ ಆರಂಭವಾಗಿಲ್ಲ. ನಮ್ಮ ಯೋಧ ಸತಾರಾದ ಸಂದೀಪ್‌ ಸಾವಂತ್‌ ಅವರು ಗಡಿಯಲ್ಲಿ ಮತ್ತಿಬ್ಬರು ಯೋಧದ ಜೊತೆ ಹುತಾತ್ಮರಾಗಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಮಹಾರಾಷ್ಟ್ರದ 7-8 ಯೋಧರು ಗಡಿಯಲ್ಲಿ ಸಾವನ್ನಪ್ಪಿದ್ದಾರೆ. ಇದಕ್ಕೆ ಮಹಾ ವಿಕಾಸ ಅಘಾಡಿ ಸರಕಾರ ಹೊಣೆಯಲ್ಲ ಎಂದು ಮುಖವಾಣಿ ಸಾಮ್ನದ ಸಂಪಾದಕೀಯದಲ್ಲಿ ಬರೆದುಕೊಂಡಿದೆ. ಸರ್ಜಿಕಲ್‌ ದಾಳಿ ಮತ್ತು ಆರ್ಟಿಕಲ್‌ 370 ಹಿಂತೆಗೆದುಕೊಂಡ ನಂತರ ಕಾಶ್ಮೀರದಲ್ಲಿ ಸಕಾರಾತ್ಮಕ ಬೆಳವಣಿಗೆ ಸಂಭವಿಸಿದೆಯೇ? ಎಂಬ ಪ್ರಶ್ನೆಯನ್ನು ಸಾಮ್ನಾದಲ್ಲಿ ಕೇಳಿದೆ. ಕೇಂದ್ರ ಸರಕಾರವನ್ನು ಉಲ್ಲೇಖಿಸದೆ, ಸಂಘರ್ಷದಲ್ಲಿ ಪಾಕಿಸ್ತಾನಿಯರು ಸಾವನ್ನಪ್ಪಿದ ಸುದ್ದಿಯನ್ನು ಮಾತ್ರ ಬಿತ್ತರಿಸಿದರೆ ವಾಸ್ತವ ಬದಲಾಗುವುದಿಲ್ಲ. ಹುತಾತ್ಮ ಯೋಧರ ಕುಟುಂಬ ಮತ್ತು ಕಾಶ್ಮೀರ ಗಡಿ ಇಂತಹ ದುರ್ಘಟನೆಗಳಿಂದ ಕುದ್ದು ಹೋಗುತ್ತಿವೆ. ಪಾಕಿಸ್ತಾನ ಉಗ್ರರ ಸೋಲ್ಲಡಗಿಸಿದೆ ಎನ್ನಲಾದ ಸರ್ಜಿಕಲ್‌ ದಾಳಿ ಒಂದು ಭ್ರಮೆಯಾಗಿ ಪರಿಣಮಿಸಿದೆ. ವಾಸ್ತವದಲ್ಲಿ ದಾಳಿಗಳು ಹೆಚ್ಚಾಗಿವೆ ಎಂದು ಶಿವಸೇನೆ ಬರೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಸೆಪ್ಟಂಬರ್‌ 29, 2016ರಲ್ಲಿ ಭಾರತೀಯ ವಾಯು ಸೇನೆ ಸರ್ಜಿಕಲ್‌ ದಾಳಿ ನಡೆಸಿತ್ತು.


from India & World News in Kannada | VK Polls https://ift.tt/2sHPh5J

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...