ರೋಹಿತ್‌, ವಿರಾಟ್‌ ಕೈಕೊಟ್ಟಾಗ ತಂಡವನ್ನು ಗುರಿಮುಟ್ಟಿಸಿದ ಬಗ್ಗೆ ಮಾತನಾಡಿದ ರಾಹುಲ್!

ಆಕ್ಲೆಂಡ್‌: ಟಿ20 ಕ್ರಿಕೆಟ್‌ನಲ್ಲಿ ತಾವೊಬ್ಬ ಚಾಂಪಿಯನ್‌ ಆಟಗಾರ ಎಂಬುದನ್ನು ಕನ್ನಡಿಗ ಕೆಎಲ್‌ ರಾಹುಲ್‌ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಸರಣಿಯ 2ನೇ ಪಂದ್ಯದಲ್ಲಿ ರಾಹುಲ್‌ ಅಜೇಯ ಅರ್ಧಶತಕ ಬಾರಿಸುವ ಮೂಲಕ ಟೀಮ್‌ ಇಂಡಿಯಾಗೆ 7 ವಿಕೆಟ್‌ ಭರ್ಜರಿ ಜಯ ತಂದುಕೊಟ್ಟರು. ಸರಣಿಯ ಮೊದಲ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದ ರಾಹುಲ್‌, ಈಡನ್‌ ಪಾರ್ಕ್‌ನಲ್ಲಿ ಭಾನುವಾರ 50 ಎಸೆತಗಳಲ್ಲಿ ಅಜೇಯ 57 ರನ್‌ಗಳನ್ನು ಗಳಿಸುವ ಮೂಲಕ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಎಲ್ಲಕ್ಕಿಂತಲೂ ಮಿಗಿಲಾಗಿ ಭಾರತ ತಂಡದ ಮ್ಯಾಚ್‌ ವಿನ್ನರ್‌ಗಳಾದ ನಾಯಕ (11) ಮತ್ತು ಉಪನಾಯಕ ರೋಹಿತ್‌ ಶರ್ಮಾ (8) ಆರಂಭದಲ್ಲೇ ಪೆವಿಲಿಯನ್‌ ಸೇರಿದರು ಯುವ ಪ್ರತಿಭೆ ಶ್ರೇಯಸ್‌ ಅಯ್ಯರ್‌ (44) ಜೊತೆಗೂಡಿ ತಂಡವನ್ನು ಗುರಿ ಮುಟ್ಟಿಸುವ ಜವಾಬ್ದಾರಿ ಹೊತ್ತ ರಾಹುಲ್‌, 3ನೇ ವಿಕೆಟ್‌ಗೆ 76 ಎಸೆತಗಳಲ್ಲಿ 86 ರನ್‌ಗಳ ಸೊಗಸಾದ ಜೊತೆಯಾಟ ನಡೆಸಿದರು. ಪರಿಣಾಮ 133 ರನ್‌ಗಳ ಗುರಿ ಬೆನ್ನತ್ತಿ ಹೊರಟ ಭಾರತ ತಂಡ 17.3 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 135 ರನ್‌ಗಳನ್ನು ಬಾರಿಸಿ 7 ವಿಕೆಟ್‌ ಜಯ ತನ್ನಡಾಗಿಸಿಕೊಂಡಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಸರಣಿಯ 3ನೇ ಪಂದ್ಯ ಹ್ಯಾಮಿಲ್ಟನ್‌ನ ಸೆಡಾನ್‌ ಪಾರ್ಕ್ ಕ್ರೀಡಾಂಗಣದಲ್ಲಿ ಬುಧವಾರ (ಜ.29 ರಂದು) ನಡೆಯಲಿದೆ. "ಹೌದು ಇಂದು ಸಂಪೂರ್ಣ ವಿಭಿನ್ನ ಪರಿಸ್ಥಿತಿಯಿತ್ತು. ಎರಡು ದಿನಗಳ ಹಿಂದೆ ಆಡಿದ ಪಿಚ್‌ಗಿಂತಲೂ ಇಂದು ಪಿಚ್‌ ಸಂಪೂರ್ಣ ವಿಭಿನ್ನವಾಗಿತ್ತು. ಹೀಗಾಗಿ ಗುರಿ ಕೊಂಚ ಕಠಿಣ ಎಂದನಿಸಿತು. ನನ್ನ ಕೆಲಸ ಏನೆಂಬುದನ್ನು ಚೆನ್ನಾಗಿ ತಿಳಿದಿದ್ದೆ. ಆದರೆ ಅದನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಹೆಚ್ಚುವರಿ ಜವಾಬ್ದಾರಿ ನನ್ನ ಮೇಲೆ ಬಂದಿತ್ತು. ರೋಹಿತ್‌ ಮತ್ತು ವಿರಾಟ್‌ ಬಹುಬೇಗನೆ ನಿರ್ಗಮಿಸಿದ್ದರು. ಹೀಗಾಗಿ ಅಲ್ಲಿ ನೆಲೆನಿಂತು ಆಡುವ ಅಗತ್ಯವಿತ್ತು," ಎಂದು ಪಂದ್ಯದ ಬಳಿಕ ಮಾತನಾಡಿದ ರಾಹುಲ್‌ ತಮ್ಮ ಮೇಲಿನ ಹೊಸ ಜವಾಬ್ದಾರಿ ಕುರಿತಾಗಿ ಮಾತನಾಡಿದ್ದಾರೆ. "ಪಂದ್ಯವನ್ನು ಅರಿತುಕೊಳ್ಳುವುದು ಮತ್ತು ನನ್ನ ಆಟದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗಿರುವುದು ನನಗೆ ಸ್ಥಿರ ಪ್ರದರ್ಶನ ನೀಡಲು ನೆರವಾಗಿತ್ತಿದೆ. ಸದಾ ತಂಡವನ್ನ ಮುಂದಿಡುತ್ತೇನೆ. ತಂಡಕ್ಕೆ ಅಗತ್ಯವಿರುವ ರೀತಿಯಲ್ಲಿ ಆಡುತ್ತೇನೆ. ಈ ಮಧ್ಯೆ ಸರಿಯಾದ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಟಿ20 ಕ್ರಿಕೆಟ್‌ನಲ್ಲಿ ಕಳೆದ ಕೆಲ ಇನಿಂಗ್ಸ್‌ಗಳಲ್ಲಿ ನನ್ನ ಯಶಸ್ಸಿನ ಗುಟ್ಟು ಇದೇ," ಎಂದಿದ್ದಾರೆ. ಆಕ್ಲೆಂಡ್‌ನಲ್ಲಿ ತಮ್ಮ ವೃತ್ತಿ ಬದುಕಿನ 11ನೇ ಅರ್ಧಶತಕ ಬಾರಿಸಿದ ಕೆಎಲ್‌ ರಾಹುಲ್‌, ತಮ್ಮ ಮನಮೋಹಕ ಇನಿಂಗ್ಸ್‌ನಲ್ಲಿ 50 ಎಸೆತಗ:ಳನ್ನು ಎದುರಿಸಿ 3 ಫೋರ್‌ ಮತ್ತು 2 ಸಿಕ್ಸರ್‌ ನೆರವಿನಿಂದ ಅಜೇಯ 57 ರನ್‌ ಬಾರಿಸಿದರು. ಇದೇ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲೂ ರಾಹುಲ್ 56 ರನ್‌ಗಳನ್ನು ಚಚ್ಚಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37veTlr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...