ಮೊಹಮ್ಮದ್‌ ಕೈಫ್‌ ಕುಚೇಲನಾದರೆ, ಶ್ರೀ ಕೃಷ್ಣ ಪರಮಾತ್ಮ ಯಾರು ಗೊತ್ತಾ?

ಬೆಂಗಳೂರು: ಇಂಗ್ಲೆಂಡ್‌ ವಿರುದ್ಧದ ನ್ಯಾಟ್‌ವೆಸ್ಟ್‌ ಏಕದಿನ ಕ್ರಿಕೆಟ್‌ ಸರಣಿ ಗೆದ್ದಕೊಟ್ಟ ಹೀರೊ, ಟೀಮ್‌ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್‌ ಆಗಿಂದ್ದಾಗೆ ತಮ್ಮ ಅದ್ಭುತ ಟ್ವೀಟ್‌ಗಳ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಲೇ ಇರುತ್ತಾರೆ. ಭಾನುವಾರ (ಜ.12) ಬೆಳಗ್ಗೆ ತಮ್ಮ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಫೋಟೊ ಒಂದನ್ನು ಪ್ರಕಟಿಸಿರುವ 39 ವರ್ಷದ ಮಾಜಿ ಆಟಗಾರ, ಅಭಿಮಾನಿಗಳೊಟ್ಟಿಗೆ ಮತ್ತು ಸುದಾಮನ () ಕಥೆ ನೆನಪಾಗುವಂತೆ ಮಾಡಿದ್ದಾರೆ. ಕ್ರಿಕೆಟ್‌ ದೇವರು ಎಂದೇ ಹೆರು ಪಡೆದಿರುವ ಭಾರತ ತಂಡದ ಬ್ಯಾಟಿಂಗ್‌ ದಿಗ್ಗಜ ಅವರ ಜೊತೆಗಿನ ಫೋಟೊ ಹಂಚಿಕೊಂಡಿರುವ ಉತ್ತರ ಪ್ರದೇಶದ ಮಾಜಿ ನಾಯಕ ಕೈಫ್‌, ಕುಚೇಲ ನಾನಾದರೆ ಶ್ರೀಕೃಷ್ಣ ಪರಮಾತ್ಮ ನೀವು ಎಂದು ಬ್ಯಾಟಿಂಗ್‌ ಮಾಂತ್ರಿಕನ ಮೇಲಿನ ಅಭಿಮಾನವನ್ನು ವಿಶೇಷ ರೀತಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಪರ ಆಡುವಾಗ ವಿಶ್ವ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಮೊಹಮ್ಮದ್‌ ಕೈಫ್‌, 2002ರಲ್ಲಿ ಭಾರತ ತಂಡದ ಅಂದಿನ ನಾಯಕ ಸೌರವ್‌ ಗಂಗೂಲಿ ತಮ್ಮ ಟಿಶರ್ಟ್‌ ಬಿಚ್ಚಿ ಇತಿಹಾಸ ಪ್ರಸಿದ್ದ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಸಂಭ್ರಮ ಆಚರಿಸಲು ಕಾರಣರಾದ ಬ್ಯಾಟ್ಸ್‌ಮನ್‌. ತಮ್ಮ ವೃತ್ತಿ ಬದುಕಿನ ಸರ್ವಶ್ರೇಷ್ಠ ಪ್ರದರ್ಶನ ನೀಡಿದ್ದ ಕೈಫ್‌ ಈಗಲೂ ನ್ಯಾಟ್‌ವೆಸ್ಟ್‌ ಸರಣಿ ಹೀರೊ ಎಂದೇ ಪ್ರಖ್ಯಾತಿ ಹೊಂದಿದ್ದಾರೆ. ಕೈಫ್‌ 2018ರ ಜುಲೈ 13ರಂದು ತಮ್ಮ ಕ್ರಿಕೆಟ್‌ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದರು. ಕೈಪ್‌ ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ಟ್ವಿಟರ್‌ ಮೂಲಕ ಗುಣಗಾನ ಮಾಡಿದ್ದ ಸಚಿನ್‌ ತಂಡೂಲ್ಕರ್‌, ಕೈಫ್‌ ಟೀಮ್‌ ಇಂಡಿಯಾದ ಸೂಪರ್‌ ಮ್ಯಾನ್‌ ಎಂದಿದ್ದರು. ಜೊತೆಗೆ ಕೈಫ್‌ ಚೆಂಡನ್ನು ಹಿಡಿಯಲು ಗಳಿಯಲ್ಲಿ ಜಿಗಿದಿರುವ ಫೋಟೊ ಒಂದನ್ನು ಪ್ರಕಟಿಸಿದ್ದರು. ಭಾರತ ತಂಡದ ಪರ 125 ಏಕದಿನ ಪಂದ್ಯಗಳನ್ನು ಆಡಿರುವ ಕೈಫ್‌, 32.01ರ ಬ್ಯಾಟಿಂಗ್‌ ಸರಾಸರಿಯಲ್ಲಿ 2,753 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಸೇರಿವೆ. ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ ಕೇವಲ 13 ಪಂದ್ಯಗಳನ್ನು ಮಾತ್ರವೇ ಆಡಿದ್ದು, 1 ಶತಕವನ್ನು ಒಳಗೊಂಡಂತೆ 324 ರನ್‌ಗಳನ್ನು ಗಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2NfLTWD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...