ಇಂದೋರ್: ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಭಾರತ ತಂಡವು ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಒಂಬತ್ತು ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬಳಿಕ ಗುರಿ ಬೆನ್ನಟ್ಟಿದ್ದ ಭಾರತ ಇನ್ನೂ 15 ಎಸೆತಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತ್ತು. ಆರಂಭಿಕರಾದ ಕೆಎಲ್ ರಾಹುಲ್ (45) ಹಾಗೂ ಶಿಖರ್ ಧವನ್ (32) ಮೊದಲ ವಿಕೆಟ್ಗೆ 71 ರನ್ಗಳ ಜತೆಯಾಟ ನೀಡಿ ಭದ್ರ ಅಡಿಪಾಯ ಹಾಕಿಕೊಟ್ಟರು. ಬಳಿಕ (34) ಹಾಗೂ ನಾಯಕ (30*) ಉಪಯುಕ್ತ ಇನ್ನಿಂಗ್ಸ್ ಕಟ್ಟಿ ತಂಡವನ್ನು ಗೆಲುವಿನ ಗೆರೆ ದಾಟಿಸಿದರು. ಈ ಮಧ್ಯೆ ಯುವ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆಯುವ ಹೆಚ್ಚಿನ ಗಮನ ಸೆಳೆದಿದ್ದರು. ಈ ನಡುವೆ ವಾನಿಂಡು ಹಸರಂಗ ಎಸೆದ ಪಂದ್ಯದ 17ನೇ ಓವರ್ನಲ್ಲಿ ಸಿಕ್ಸರ್ ಬಾರಿಸಿದ ಶ್ರೇಯಸ್ ಅಯ್ಯರ್, ನಾಯಕ ವಿರಾಟ್ ಕೊಹ್ಲಿ ಅವರತ್ತ ದಿಟ್ಟಿಸಿ ನೋಡಿದರು. ಈ ಸಂದರ್ಭದಲ್ಲಿ ನಾಯಕ ಕೊಹ್ಲಿ ಸಹ ದಿಟ್ಟಿಸಿ ನೋಡುವ ಮೂಲಕ ಗಮನ ಸೆಳೆದರು. ಎರಡು ವಿಕೆಟ್ ಪಡೆದು ಪರಿಣಾಮ ದಾಳಿ ಸಂಘಟಿಸಿದ್ದ ಹಸರಂಗ ದಾಳಿಯಲ್ಲಿ ಸಿಕ್ಸರ್ ಹಾಗೂ ಎರಡು ಬೌಂಡರಿ ಸೇರಿದಂತೆ 17 ರನ್ಗಳನ್ನು ಅಯ್ಯರ್ ಕಬಳಿಸಿದ್ದರು. ಈ ಸಂದರ್ಭದಲ್ಲಿ ಅಯ್ಯರ್ ಹೊಡೆದ ಸಿಕ್ಸರ್, ಸ್ಟೇಡಿಯಂ ರೂಫ್ಗೆ ಬಡಿದಿತ್ತು. ಈ ಸಂದರ್ಭದಲ್ಲಿ ಪರಸ್ಪರ ಅಯ್ಯರ್ ಹಾಗೂ ಕೊಹ್ಲಿ ನಂಬಲಾಗದಂತಹ ರಿಯಾಕ್ಷನ್ ಕೊಟ್ಟಿದ್ದರು. ಭಾರತ ಹಾಗೂ ಶ್ರೀಲಂಕಾ ಪಂದ್ಯದ ಪ್ರಮುಖ ಟ್ರೋಲ್ಗಳು ಇಲ್ಲಿವೆ ನೋಡಿ ಆನಂದಿಸಿ: ಕೊಹ್ಲಿ-ಅಯ್ಯರ್ ರಿಯಾಕ್ಷನ್ ಹರ್ಭಜನ್ ಸಿಂಗ್ ಬೌಲಿಂಗ್ ಶೈಲಿಯನ್ನು ಅನುಕರಿಸಿದ ವಿರಾಟ್ ಕೊಹ್ಲಿ ಯುವ ಆಟಗಾರ ರಿಷಬ್ ಪಂತ್ಗೆ ಕೋಚ್ ರವಿ ಶಾಸ್ತ್ರಿ ನೀಡಿದ ಸಲಹೆಯೇನು ಲಸಿತ್ ಮಾಲಿಂಗ ಕಾಡಿದ 2012ರ ನೆನಪು; ಅಂದು ಕೂಡಾ ಮಾಲಿಂಗ ದಾಳಿಯನ್ನು ಕೊಹ್ಲಿ ಧೂಳೀಪಟಗೈದಿದ್ದರು. ಗೆಲುವಿನ ಬಳಿಕ ಭಾರತದ ಪಾರ್ಟಿ ಹೇಗಿರುತ್ತೇ ಗೊತ್ತಾ ಲಂಕನ್ನರಿಗೆ ವಿರಾಟ್ ಕೊಹ್ಲಿ ಕಲಿಸಿದ ಪಾಠವೇನು? ನಾಟೌಟ್ ಆಗಿ ಪಂದ್ಯ ಗೆಲ್ಲಿಸಿದ ರಿಷಬ್ ಪಂತ್? ಭಾರತಕ್ಕೆ ಆಗಮಿಸಿದ ಲಂಕಾ ತಂಡದ ಪರಿಸ್ಥಿತಿ
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2R8D9TJ